ಕುಂಬ್ಳೆ ವಿಂಡೀಸ್ ವಿಮಾನ ಹತ್ತಲಿಲ್ಲ
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾವು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿದ್ದು, ಐದು ಏಕದಿನ ಪಂದ ಹಾಗೂ ಒಂದು ಟಿ20 ಪಂದ್ಯಗಳನ್ನಾಡಲಿದೆ. ರಿಷಬ್ ಪಂತ್ ಹಾಗೂ ಕುಲದೀಪ್ ಯಾದವ್ ಹೊಸ ಮುಖಗಳಾಗಿವೆ. ರೋಹಿತ್ ಶರ್ಮರಿಗೆ ವಿಶ್ರಾಂತಿ ನೀಡಲಾಗಿದೆ. ಈ ಸರಣಿಗೂ ಅನಿಲ್ ಕುಂಬ್ಳೆ ಅವರೇ ಮುಖ್ಯ ಕೋಚ್ ಆಗಿದ್ದಾರೆ.
|
ಟೀಂ ಇಂಡಿಯಾ
ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿರುವ ಟೀಂ ಇಂಡಿಯಾದ ಆಟಗಾರರ ಪೈಕಿ, ಆರಂಭಿಕ ಆಟಗಾರ ಶಿಖರ್ ಧವನ್ ಅವರು ವಿಮಾನ್ದಲ್ಲಿ ಸೆಲ್ಫಿ ತೆಗೆದು ಪೋಸ್ಟ್ ಮಾಡಿದ್ದಾರೆ.
|
ಕುಂಬ್ಳೆ ಏಕೆ ಹೋಗುತ್ತಿಲ್ಲ
ಲಂಡನ್ನಿನಿಂದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳುತ್ತಿರುವ ಟೀಂ ಇಂಡಿಯಾದ ಜತೆ ಕೋಚ್ ಅನಿಲ್ ಕುಂಬ್ಳೆ ಅವರು ತೆರಳುತ್ತಿಲ್ಲ ಎಂದು ವರದಿ ಮಾಡಿದ ಎಬಿಪಿ ನ್ಯೂಸ್
|
ಬಿಸಿಸಿಐನಿಂದ ಸ್ಪಷ್ಟನೆ
ಟೀಂ ಇಂಡಿಯಾದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು ಐಸಿಸಿ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಹೀಗಾಗಿ, ಟೀಂ ಇಂಡಿಯಾದ ಸದಸ್ಯರ ಜತೆ ಕುಂಬ್ಳೆ ಅವರು ತೆರಳಲು ಆಗಲಿಲ್ಲ. ನಂತರ ಅವರು ತಂಡವನ್ನು ಸೇರುತ್ತಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.