ಚಂಡೀಗಢ, ಏಪ್ರಿಲ್ 22 : ಗಾಯದ ಸಮಸ್ಯೆಯಿಂದ ಐಪಿಲ್ ಸೀಸನ್ 9 ನಿಂದ ದೂರ ಉಳಿದಿರುವ ಟೀಂ ಇಂಡಿಯಾದ ಎಡಗೈ ಸ್ಟಾರ್ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಮತ್ತೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ.
ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ
ಅದೇನಪ್ಪಾ ಅಂದ್ರೆ, ಚಂಡೀಗಢದಲ್ಲಿರುವ ಯುವರಾಜ್ ಸಿಂಗ್ ನಿವಾಸದ ಗೇಟ್ ಆಕಸ್ಮಿಕವಾಗಿ 8 ವರ್ಷದ ಬಾಲಕನ ಮೇಲೆ ಬಿದ್ದ ಪರಿಣಾಮ ಆ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ. [ಮೇ 6ರ ಹೊತ್ತಿಗೆ ಮೈದಾನಕ್ಕಿಳಿಯುವೆ : ಯುವರಾಜ್]
ಮೂಲಗಳ ಪ್ರಕಾರ, ಘಟನೆ ನಡೆದ ವೇಳೆ ಯುವರಾಜ್ ಸಿಂಗ್ ಮತ್ತು ಅವರ ತಾಯಿ ಗುರುಗ್ರಾಮದ ಮತ್ತೊಂದು ಮನೆಯಲ್ಲಿದ್ದರು ಎಂದು ಹೇಳಲಾಗುತ್ತಿದೆ.
ಈಗಷ್ಟೇ ಗಾಯದಿಂದ ಚೇತರಿಸಿಕೊಂಡು ಐಪಿಎಲ್ ನಲ್ಲಿ ಆಡುವ ಮಾತುಗಳನ್ನು ಆಡಿರುವ ಯುವಿಗೆ ಇಂಥ ಒಂದು ಅಪಶಕುನ ಘಟನೆ ನಡೆದು ಬೇಸರವನ್ನುಂಟು ಮಾಡಿದೆ. ವಿಶ್ವ ಟಿ20 ಟೂರ್ನಿಯಿಂದ ಔಟ್ ಆದ ಯುವರಾಜ್ ಸಿಂಗ್ ಅವರು ಗಾಯದ ಸಮಸ್ಯೆಯಿಂದ ಗುಣಮುಖರಾಗಿ ಚೇತರಿಸಿಕೊಳ್ಳುತ್ತಿದ್ದು, ಮೇ 6ರಂದು ಐಪಿಎಲ್ 9 ಟೂರ್ನಿಗೆ ಎಂಟ್ರಿ ಕೊಡುವ ನಿರೀಕ್ಷೆಯಲ್ಲಿದ್ದಾರೆ.