ಪುಣೆ, ಫೆ. 09: ಟೀಂ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾದ ನಾಯಕ ದಿನೇಶ್ ಚಾಂಡಿಮಾಲ್ ಅವರು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಹಸಿರು ಪಿಚ್ ನ ಲಾಭ ಪಡೆದುಕೊಂಡರು. ಧೋನಿ ಅವರ ಲೆಕ್ಕಾಚಾರ ಮೊದಲ ಪಂದ್ಯದಲ್ಲೇ ತಲೆಕೆಳಗಾಯಿತು. ಭಾರತ ನೀಡಿದ ಸುಲಭ ಮೊತ್ತವನ್ನು ಶ್ರೀಲಂಕಾ ಎರಡು ಓವರ್ ಗಳಿಗೂ ಮುಂಚಿತವಾಗಿ ತಲುಪಿ ವಿಜಯೋತ್ಸವ ಆಚರಿಸಿತು.
| ಚಿತ್ರಗಳು" />ಸರಣಿ ವೇಳಾಪಟ್ಟಿ | ಚಿತ್ರಗಳು
ಭಾರತ ಆರಂಭಿಕ ಆಘಾತ ಅನುಭವಿಸಿ 5 ರನ್ನಿಗೆ 2 ವಿಕೆಟ್ ಕಳೆದುಕೊಂಡ ಮೇಲೆ ಚೇತರಿಸಿಕೊಳ್ಳಲಿಲ್ಲ. ಹಸಿರು ಪಿಚ್ ನ ಪೂರ್ಣ ಲಾಭ ಪಡೆದ ಲಂಕಾ ತಂಡ ಎದುರಾಳಿ ಭಾರತ ತಂಡವನ್ನು 101 ರನ್ನಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಕೊನೆಗೆ ರನ್ ಚೇಸ್ ಮಾಡಿ 5 ವಿಕೆಟ್ ಗಳ ಅಂತರದ ಜಯ ದಾಖಲಿಸಿತು.
ತಂಡಗಳು
ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ ಹಾಗೂ ವಿಕೆಟ್ ಕೀಪರ್), ರೋಹಿತ್ ಶರ್ಮ, ಶಿಖರ್ ಧವನ್, ಅಜಿಂಕ್ಯ ರಹಾನೆ, ಮನೀಶ್ ಪಾಂಡೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬೂಮ್ರಾ, ಆಶೀಶ್ ನೆಹ್ರಾ, ಹರ್ಭಜನ್ ಸಿಂಗ್, ಭುವನೇಶ್ವರ್ ಕುಮಾರ್, ಪವನ್ ನೇಗಿ.
ಶ್ರೀಲಂಕಾ: ದಿನೇಶ್ ಚಾಂಡಿಮಾಲ್ (ನಾಯಕ), ಸೀಕುಗೆ ಪ್ರಸನ್ನ, ಮಿಲಿಂದಾ ಸಿರಿವರ್ದನ, ದನುಷ್ಕಾ ಗುಣತಿಲಕಾ, ತಿಸಾರಾ ಪೆರೆರಾ, ದಸುನ್ ಶನಕಾ, ಅಸೆಲಾ ಗುಣರತ್ನೆ, ಚಮರಾ ಕಪುದೆಗೆರಾ, ದುಷ್ಮಾತಾ ಚಮೀರಾ, ದಿಲ್ಹಾರಾ ಫರ್ನಾಂಡೋ, ಕಸುನ್ ರಜಿತಾ, ಬಿನುರಾ ಫರ್ನಾಂಡೋ, ಸಚಿತ್ರಾ ಸೆನಾನಾಯಕೆ, ಜೆಫ್ರಿ ವಂಡರ್ಸೆ, ನಿರೋಷನ್ ಡಿಕ್ವೆಲಾ
ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಫೆಬ್ರವರಿ 9ರಂದು ಆರಂಭವಾಯಿತು.ಎರಡನೇ ಟಿ20 ಪಂದ್ಯ ಫೆಬ್ರವರಿ 14 ರಂದು 7.30 ರಂದು ನಡೆಯಲಿದೆ. (ಒನ್ಇಂಡಿಯಾ ಸುದ್ದಿ)