'ಅಲೋಕ್ ಅವರೇ, ನಿಮ್ಮನ್ನು ನೀವು ಕಾಪಾಡಿಕೊಳ್ಳಿ'
ನಿಮ್ಮೊಬ್ಬರದೇ ಅಲ್ಲಾ ಸ್ವಾಮಿ ಈ ಸಮಸ್ಯೆ. ಇಡೀ ನಮ್ಮ ರಾಜ್ಯ, ನಮ್ಮ ದೇಶ, ನಮ್ಮ ಈ ಭೂಮಿಯ ಮೇಲಿನ ಮನುಷ್ಯರೆಲ್ಲರೂ ಸ್ವಾರ್ಥಿಗಳೇ ಆಗಿರುವುದರಿಂದ, ಇಲ್ಲಿ ಸತ್ಯವಂತರಿಗೆ ಕಾಲವಿಲ್ಲ. 'ವೇದಾಂತ ಹೇಳಕ್ಕೇ ಇರೋದು, ಬದನೇಕಾಯಿ ತಿನ್ನಕ್ಕೇ ಇರೋದು' ಅಂತಾರಲ್ಲಾ ಹಾಗೆ.
ನಮ್ಮನ್ನು ನಾವು ಕಾಪಾಡಿಕೊಳ್ಳಲು ಸದಾ ಹೋರಾಡುತ್ತಿರಲೇಬೇಕು, ಸದಾ ಜಾಗೃತರಾಗಿರಲೇಬೇಕು. ಸ್ವಲ್ಪ ಯಾಮಾರಿದರೂ ಸಾಕು, ನಮ್ಮ ಬುಡವನ್ನೇ ಕಿತ್ತುಕೊಂಡು ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಬಿಡುತ್ತಾರೆ ದುರುಳರು, ಅಧಮರು, ಕಿರಾತಕರು, ತಲೆ ಹಿಡುಕರು.
You have to fight for your right. ನನ್ನ ಸ್ನೇಹಿತರಾಗಿದ್ದ ಗಂಧವಾಲೆ ಅನ್ನುವ ಅಧಿಕಾರಿಯೊಬ್ಬರು ಹೇಳುತ್ತಿದ್ದ ನುಡಿ ಮುತ್ತೊಂದು ನನಗೀಗ ಜ್ಞಾಪಕ ಬರುತ್ತಿದೆ. 'Offense is the best defense' ಅಂತ.
ಸಹೋದ್ಯೋಗಿಗಳೇ ಇರಲಿ, ಯಾರೇ ಆಗಲೀ, 'Be courteous to all, make friendship with few, try those few well and then give your confidence' ಈ ನಾಣ್ನುಡಿಯಂತೆ ನಮ್ಮನ್ನು ನಾವೇ ಜಾಗ್ರತೆಯಿಂದ ಕಾಪಾಡಿಕೊಳ್ಳುತ್ತಿರಲೇಬೇಕು - ನಮ್ಮ ಕಡೆಯ ಉಸಿರಿರುವರೆಗೆ.
ಕಲಿಯುಗದಲ್ಲಿ ಸ್ವಾರ್ಥಿಗಳೇ ತುಂಬಿ ಹೋಗಿರುವಾಗ ಸಂಭಾವಿತರೆಲ್ಲಿ ಸಿಗುತ್ತಾರೆ, ಸ್ವಾಮೀ ಅಲೋಕ್ ಕುಮಾರ್ ರವರೇ. ನೀವು ನಿಮ್ಮತನವನ್ನು ಕಾಪಾಡಿಕೊಳ್ಳಿ. ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ಕೆಳಗೆ ಬಿದ್ದಾಗ ತಲೆಯ ಮೇಲೆ ಕಲ್ಲು ಹಾಕುವವರೇ ಈ ಲೋಕದಲ್ಲಿ ತುಂಬಿತುಳುಕುತ್ತಿರುವಾಗ, ಸ್ನೇಹ ಸಂಬಂಧಗಳು ಅರ್ಥ ಕಳೆದುಕೊಂಡು ದಶಕಗಳೇ ಆಗಿ ಹೋಗಿವೆ.
ತಮ್ಮ ಕೆಲಸ ಕಾರ್ಯಗಳ ಬಗ್ಗೆ ನಮಗೆ ಸಂತೋಷವಿದೆ. ತಮಗೆ ನನ್ನ ಹೃದಯಪೂರ್ವಕ ಆಶೀರ್ವಾದಗಳು.