ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ಸ್ಯಗಂಧಿ ರೈಲಿನಲ್ಲಿ ಹಿಜಡಾ ದರ್ಬಾರ್ ತಪ್ಪಿಸಿ

By * ಎಂ ನಿರಂಜನ್ ರಾವ್, ಕುಂದಾಪುರ
|
Google Oneindia Kannada News

Eunuch attack Mangalore train
ಮಂಗಳೂರಿನಿಂದ ಮುಂಬೈಗೆ ಪ್ರಯಾಣಿಸುವಾಗ ಲೋಕಮಾನ್ಯ ತಿಲಕ್ ಮತ್ಸ್ಯಗಂಧಿ ರೈಲಿನಲ್ಲಿ ಹಿಜಾಡಗಳಿಂದ ಪ್ರಯಾಣಿಕರು ಬಹಳಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಹಿಜಡಾಗಳ ಗುಂಪು ಮಂಗಳೂರಿನಲ್ಲಿ ರೈಲು ಹತ್ತಿದರೆ ಕಾರವಾರ ತನಕವೂ ರೈಲಿನಲ್ಲಿ ಬೋಗಿಯಿಂದ ಬೋಗಿಗೆ ಅಲೆಯುತ್ತಾ ಜನರಿಂದ ಹಣಕ್ಕಾಗಿ ಸತಾಯಿಸುತ್ತಿರುತ್ತಾರೆ.

ಕೆಲವು ಹಿಜಾಡಗಳು ಗಂಡಸರ ಕಿಸೆಗೆ ಕೈ ಹಾಕುವುದು, ಕೆಲವರ ಮೈ ಮುಟ್ಟುವುದೆಲ್ಲಾ ಮಾಡುತ್ತಿರುತ್ತಾರೆ. ಇನ್ನು ಕೆಲವರು ಅವರು ಬರುವುದನ್ನೆ ಕಂಡು ಹಣ ರೆಡಿಯಾಗಿ ಇಟ್ಟುಕೊಂದು ಬೇಗ ಆಚೆ ಕಳುಹಿಸುತ್ತಾರೆ. ಇನ್ನು ಕೆಲವು ಹಿಜಡಾಗಳು ಇಂತಿಷ್ಟು ಹಣ ಕೊಡಬೇಕು ಎಂದು ಸ್ಪರ್ಧೆಗೆ ನಿಂತಂತೆ ನಿಂತಂತೆ ವರ್ತಿಸುತ್ತಾರೆ. ರೈಲ್ವೇ ಅಧಿಕಾರಿಗಳು ಈ ರೀತಿ ರಿಸರ್ವ್‌ವೇಶನ್ ಟಿಕೆಟ್ ಮಾಡಿದ ಬೋಗಿಗಳಿಗೂ ಹಿಜಾಡಗಳನ್ನು ಬರಲು ಬಿಡುವುದೇಕೆ ? ಮುಂಚೆ ಎಲ್ಲಾ ರಿಸರ್ವೇಶನ್ ಮಾಡಿದ ಬೋಗಿಗಳಿಗೆ ಬರುತ್ತಿರಲಿಲ್ಲ.

ಈಗೀಗ ಇವರಿಗೆ ಯಾರ ಭಯವೂ ಇಲ್ಲ, ಯಾರಿಗೂ ಕ್ಯಾರೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಮುಂಚೆಲ್ಲಾ ಜನರಲ್ ಬೋಗಿಯಲ್ಲಿ ಮಾತ್ರ ಪ್ರಯಾಣಿಸುತ್ತಿದ್ದವರು.ಈಗ ರೈಲಿನ ಎಲ್ಲಾ ಬೋಗಿಗಳಲ್ಲೂ ಹಿಜಾಡಗಳು ಪ್ರಯಾಣಿಕರನ್ನು ಹಣಕ್ಕಾಗಿ ಪೀಡಿಸುವುದು, ಅಶ್ಲೀಲವಾಗಿ ವರ್ತಿಸುವುದು ನಡೆಯುತ್ತಿದೆ.

ಇವುಗಳೆಲ್ಲದರ ಪರಿಣಾಮ ಸಭ್ಯ ಪ್ರಯಾಣಿಕರು ಮುಜುಗರದಿಂದ ತಲೆ ತಗ್ಗಿಸುವಂತಾಗಿದೆ. ರೈಲ್ವೇ ಇಲಾಖೆ, ರೈಲ್ವೇ ಆರಕ್ಷಕರು ಸಮಸ್ಯೆಯನ್ನು ಗಂಭೀರವಾಗಿ ಅವಲೋಕಿಸಿ, ಅಸಭ್ಯತೆಗೆ ತಕ್ಕ ಕಡಿವಾಣ ಹಾಕಿ ಶಿಸ್ತು ಕ್ರಮ ಕೈಗೊಂಡರೆ, ಪ್ರಯಾಣಿಕರು ನಿಶ್ಚಿಂತೆಯಿಂದ ಮುಜುಗರರಹಿತ ಪ್ರಯಾಣಕ್ಕೆ ದಾರಿಯಾದೀತು.

English summary
Eunuch demand money and attack people verbally even physically in Lokmanya Matsyagandhi express train. Public are not finding any solution how to deal with eunuchs on rail journeys from Mangalore to Mumbai. Railway Department keeping mum on this issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X