ಮುಖ್ಯಪುಟ
 » 
ಅಂಗಡಿ ಸುರೇಶ ಚನಬಸಪ್ಪ

ಅಂಗಡಿ ಸುರೇಶ ಚನಬಸಪ್ಪ

ಅಂಗಡಿ ಸುರೇಶ ಚನಬಸಪ್ಪ

ಶ್ರೀ ಚನಬಸಪ್ಪ ಮತ್ತು ಶ್ರೀಮತಿ ಸೋಮವ್ವ ದಂಪತಿಯ ಪುತ್ರನಾಗಿ 1955 ರಲ್ಲಿ ಜನಿಸಿದ ಸುರೇಶ ಅಂಗಡಿ ಇವರು ಪ್ರಸ್ತುತ ಕರ್ನಾಟಕದ ಪ್ರಮುಖ ರಾಜಕಾರಣಿಗಳಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದಾರೆ. 1996 ರಲ್ಲಿ ಬೆಳಗಾವಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಇವರು ತಮ್ಮ ರಾಜಕೀಯ ಜೀವನ ಆರಂಭಿಸಿದರು.

ಅಂಗಡಿ ಸುರೇಶ ಚನಬಸಪ್ಪ ಜೀವನ ಚರಿತ್ರೆ

ಶ್ರೀ ಚನಬಸಪ್ಪ ಮತ್ತು ಶ್ರೀಮತಿ ಸೋಮವ್ವ ದಂಪತಿಯ ಪುತ್ರನಾಗಿ 1955 ರಲ್ಲಿ ಜನಿಸಿದ ಸುರೇಶ ಅಂಗಡಿ ಇವರು ಪ್ರಸ್ತುತ ಕರ್ನಾಟಕದ ಪ್ರಮುಖ ರಾಜಕಾರಣಿಗಳಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದಾರೆ. 1996 ರಲ್ಲಿ ಬೆಳಗಾವಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಇವರು ತಮ್ಮ ರಾಜಕೀಯ ಜೀವನ ಆರಂಭಿಸಿದರು. ತನ್ನ ಜನಪರ ಹಾಗೂ ಸಾಮಾಜಿಕ ಕಾರ್ಯಗಳಿಂದ ಬೇಗನೆ ಜನಮಾನಸದಲ್ಲಿ ಹೆಸರು ಮಾಡಿದ ಅಂಗಡಿ ರಾಜಕೀಯದಲ್ಲಿ ಬಹುಬೇಗನೆ ಪ್ರವರ್ಧಮಾನಕ್ಕೆ ಬಂದರು. 2004 ರಲ್ಲಿ ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಇವರು ಹಿಂತಿರುಗಿ ನೋಡಿದ್ದೇ ಇಲ್ಲ. ನಂತರ 2009 ಹಾಗೂ 2014 ರಲ್ಲಿ ಸಹ ಲೋಕಸಭಾ ಚುನಾವಣೆಗಳಲ್ಲಿ ಜಯ ಸಾಧಿಸಿ ಜಯದ ಹ್ಯಾಟ್ರಿಕ್ ಬಾರಿಸಿದರು. ಹೀಗೆ ಸತತ ಜಯಗಳಿಸಿದ ಸುರೇಶ ಅಂಗಡಿ ಮುಂಬೈ ಕರ್ನಾಟಕ ಪ್ರಾಂತ್ಯದ ಅತಿ ಪ್ರಭಾವಿ ರಾಜಕಾರಣಿಗಳಲ್ಲೊಬ್ಬರಾಗಿದ್ದಾರೆ. ಇವರು ಮೂಲತಃ ಓರ್ವ ಉದ್ದಿಮೆದಾರರಾಗಿದ್ದು ನಂತರ ರಾಜಕೀಯ ಪ್ರವೇಶಿಸಿದರು. ನಂತರದ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಶಿಕ್ಷಣ ಪ್ರೇಮಿಯಾಗಿಯೂ ಹೆಸರು ಮಾಡಿದ್ದಾರೆ. ಈಗ ಇವರು ತಾವೇ ಸ್ಥಾಪಿಸಿದ ಸುರೇಶ ಅಂಗಡಿ ಎಜ್ಯುಕೇಶನ್ ಫೌಂಡೇಶನ್ ಚೇರಮನ್‌ರಾಗಿ ಕೆಲಸ ಮಾಡುತ್ತಿದ್ದಾರೆ.

ಮತ್ತಷ್ಟು ಓದು
By Shalini Updated: Friday, February 1, 2019, 05:56:02 PM [IST]

ಅಂಗಡಿ ಸುರೇಶ ಚನಬಸಪ್ಪ ವಯಕ್ತಿಕ ಜೀವನ

ಪೂರ್ಣ ಹೆಸರು ಅಂಗಡಿ ಸುರೇಶ ಚನಬಸಪ್ಪ
ಜನ್ಮ ದಿನಾಂಕ 01 Jun 1955
ಮೃತಪಟ್ಟ ದಿನಾಂಕ 23 Sep 2020 (ವಯಸ್ಸು 65)
ಹುಟ್ಟಿದ ಸ್ಥಳ ಕೆ.ಕೆ. ಕೊಪ್ಪ, ಜಿಲ್ಲಾ ಬೆಳಗಾವಿ, ಕರ್ನಾಟಕ ರಾಜ್ಯ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate Professional
ಉದ್ಯೋಗ ಉದ್ದಿಮೆದಾರ, ಶಿಕ್ಷಣತಜ್ಞ
ತಂದೆಯ ಹೆಸರು ಚನಬಸಪ್ಪ ಅಂಗಡಿ
ತಾಯಿಯ ಹೆಸರು ಸೋಮವ್ವ ಅಂಗಡಿ
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಅಂಗಡಿ ಸುರೇಶ ಚನಬಸಪ್ಪ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹5.07 CRORE
ಆಸ್ತಿ:₹41.7 CRORE
ಸಾಲಸೋಲ: ₹36.63 CRORE

ಅಂಗಡಿ ಸುರೇಶ ಚನಬಸಪ್ಪ ಕುರಿತು ಆಸಕ್ತಿದಾಯಕ ಸಂಗತಿಗಳು

ಸುರೇಶ ಅಂಗಡಿ ಇವರು ವ್ಯಾಪಾರ, ಉದ್ದಿಮೆ, ಕೃಷಿ ಹಾಗೂ ಶಿಕ್ಷಣ ರಂಗ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಸಾಧಿಸಿದ್ದಾರೆ.

ಅಂಗಡಿ ಸುರೇಶ ಚನಬಸಪ್ಪ ರಾಜಕೀಯ ಟೈಮ್‌ಲೈನ್

2016
  • ಜುಲೈ 19, 2016 ರಂದು ಹೌಸ್ ಕಮಿಟಿ ಚೇರಮನ್‌ರಾಗಿ ನೇಮಕ.
2014
  • 12 ಜೂನ್ 2014 ರಿಂದ 19 ಜುಲೈ 2016 ವರೆಗೆ ಹೌಸ್ ಕಮೀಟಿ ಸದಸ್ಯರಾಗಿ ಸೇವೆ. ಅಹವಾಲು ಸಮಿತಿ ಸದಸ್ಯರಾಗಿ, ರಕ್ಷಣಾ ಸಮಿತಿ ಸದಸ್ಯರಾಗಿ, ಸೆಪ್ಟೆಂಬರ್ 2014 ರಲ್ಲಿ ಹಣಕಾಸು ಹಾಗೂ ಕಾರ್ಪೊರೇಟ್ ವ್ಯಹಹಾರಗಳ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಕೆ.irs in Sep 2014
2014
  • 16 ನೇ ಲೋಕಸಭಾ ಸದಸ್ಯರಾಗಿ ಮರುಆಯ್ಕೆ. ಇದು ಸುರೇಶ ಅಂಗಡಿ ಅವರ ಸತತ ಮೂರನೇ ಬಾರಿ ಲೋಕಸಭಾ ಚುನಾವಣಾ ಗೆಲುವು ಆಗಿದೆ.
2009
  • 31 ಆಗಸ್ಟ್ 2009 ರಿಂದ ಮೇ 2014 ರವರೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸ್ಥಾಯಿ ಸಮಿತಿ ಸದಸ್ಯರಾಗಿ ಸೇವೆ. ಸೆಪ್ಟೆಂಬರ್ 23, 2009 ರಿಂದ ಮೇ 2014 ರವರೆಗೆ ಲೋಕಸಭಾ ಸದಸ್ಯರ ಭತ್ಯೆ, ಪಿಂಚಣಿ ಹಾಗೂ ಸಂಬಳಗಳ ಸಮಿತಿ ಸದಸ್ಯರು ಹಾಗೂ ಕೇಂದ್ರದ ನೇರ ತೆರಿಗೆಗಳ ಸಲಹಾ ಸಮಿತಿ ಸದಸ್ಯರಾಗಿ ಸೇವೆ.
2009
  • ಮತ್ತೊಮ್ಮೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಅಮರಸಿಂಗ ವಸಂತರಾವ ಪಾಟೀಲ ಅವರನ್ನು ಸೋಲಿಸಿ 15ನೇ ಲೋಕಸಭೆಗೆ ಪುನರಾಯ್ಕೆ
2004
  • ಹಣಕಾಸು ಸಚಿವಾಲಯದ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆ.
2004
  • ಆಹಾರ, ನಾಗರಿಕ ವ್ಯವಹಾರ ಮತ್ತು ಸಾರ್ವಜನಿಕ ಸರಬರಾಜು ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆ
2004
  • ಅಮರಸಿಂಗ ವಸಂತರಾವ ಪಾಟೀಲ ಅವರನ್ನು ಸೋಲಿಸಿ 14 ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆ
2001
  • ಭಾರತೀಯ ಜನತಾ ಪಾರ್ಟಿ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಆಯ್ಕೆ
2000
  • ಬೆಳಗಾವಿ ಚೇಂಬರ ಆಫ್ ಕಾಮರ್ಸ್‌ನ ಕಾರ್ಯಕಾರಿ ಸದಸ್ಯರಾಗಿ ನೇಮಕ
1996
  • ಭಾರತೀಯ ಜನತಾ ಪಕ್ಷ ಬೆಳಗಾವಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ನೇಮಕ

ಹಿಂದಿನ ಇತಿಹಾಸ

2009
  • ಸುರೇಶ ಅಂಗಡಿ ಎಜ್ಯುಕೇಶನ್ ಫೌಂಡೇಶನ್ ಸ್ಥಾಪನೆ

ಅಂಗಡಿ ಸುರೇಶ ಚನಬಸಪ್ಪ ಸಾಧನೆಗಳು

2009 ರಿಂದ ಬೆಳಗಾವಿಯ ಸುರೇಶ ಅಂಗಡಿ ಎಜ್ಯುಕೇಶನ್ ಫೌಂಡೇಶನ್ ಚೇರಮನ್‌ರಾಗಿದ್ದಾರೆ.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X