ಮುಖ್ಯಪುಟ
 » 
ಪಿಣರಾಯಿ ವಿಜಯನ್

ಪಿಣರಾಯಿ ವಿಜಯನ್

ಪಿಣರಾಯಿ ವಿಜಯನ್

ಪಿಣರಾಯಿ ವಿಜಯನ್ ಪ್ರಸ್ತುತ ಕೇರಳ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅಲ್ಲದೇ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ವಿಸ್ಟ್)ನ ಪಾಲಿಟ್ ಬ್ಯೂರೋದ ಸದಸ್ಯರೂ ಆಗಿದ್ದಾರೆ.

ಪಿಣರಾಯಿ ವಿಜಯನ್ ಜೀವನ ಚರಿತ್ರೆ

ಪಿಣರಾಯಿ ವಿಜಯನ್ ಪ್ರಸ್ತುತ ಕೇರಳ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅಲ್ಲದೇ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ವಿಸ್ಟ್)ನ ಪಾಲಿಟ್ ಬ್ಯೂರೋದ ಸದಸ್ಯರೂ ಆಗಿದ್ದಾರೆ. ಅತಿ ಕಡುಬಡತನದ ಕುಟುಂಬದಲ್ಲಿ ಕಣ್ಣೂರು ಜಿಲ್ಲೆಯಲ್ಲಿ ಜನಿಸಿದ ಪಿಣರಾಯಿ ವಿಜಯನ್ ಪಿರಲ್ ಸೆರಿ ಹೈಸ್ಕೂಲ್ನಲ್ಲಿ ತಮ್ಮ ಮಾಧ್ಯಮಿಕ ಶಿಕ್ಷಣ ಪೂರೈಸಿದರು. ಬ್ರೆನ್ನನ್ ಪದವಿಪೂರ್ವ ಕಾಲೇಜಿಗೆ ಪಿಯುಸಿ ಅಧ್ಯಯನಕ್ಕೆಂದು ಸೇರಿ, ಅಲ್ಲಿಯೇ ವಿದ್ಯಾರ್ಥಿ ಸಂಘಟನೆ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು. 1964ರಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ವಿಸ್ಟ್) ಪಕ್ಷಕ್ಕೆ ಸೇರ್ಪಡೆಯಾದರು. ನಂತರದಲ್ಲಿ ಪಕ್ಷದಲ್ಲಿ ಹಲವಾರು ಮಹತ್ವದ ಹುದ್ದೆಗಳನ್ನು ನಿರ್ವಹಿಸಿ ಸಿಪಿಐಎಂನ ಜಿಲ್ಲಾ ಸಮಿತಿ ಕಾರ್ಯದರ್ಶಿಯಾಗಿ 1986ರಲ್ಲಿ ನೇಮಕಗೊಂಡರು. 1998ರಲ್ಲಿ ಕೇರಳ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಕೇರಳ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ರಾಜ್ಯ ಸರ್ಕಾರದ ವಿದ್ಯುತ್ ಮತ್ತು ಸಹಕಾರ ಖಾತೆಗಳ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮತ್ತಷ್ಟು ಓದು
By Moumi Majumdar Updated: Wednesday, March 17, 2021, 01:58:37 PM [IST]

ಪಿಣರಾಯಿ ವಿಜಯನ್ ವಯಕ್ತಿಕ ಜೀವನ

ಪೂರ್ಣ ಹೆಸರು ಪಿಣರಾಯಿ ವಿಜಯನ್
ಜನ್ಮ ದಿನಾಂಕ 21 Mar 1944 (ವಯಸ್ಸು 80)
ಹುಟ್ಟಿದ ಸ್ಥಳ ಕಣ್ಣೂರು
ಪಕ್ಷದ ಹೆಸರು Communist Party Of India (marxist)
ವಿದ್ಯಾರ್ಹತೆ 12th Pass
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ಮರೋಳಿ ಕೋರನ್
ತಾಯಿಯ ಹೆಸರು ಕಲ್ಯಾಣಿ
ಧರ್ಮ Atheist
ವೆಬ್‌ಸೈಟ್ http://www.keralacm.gov.in/
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಪಿಣರಾಯಿ ವಿಜಯನ್ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹99.22 LAKHS
ಆಸ್ತಿ:₹1.07 CRORE
ಸಾಲಸೋಲ: ₹7.95 LAKHS

ಪಿಣರಾಯಿ ವಿಜಯನ್ ಕುರಿತು ಆಸಕ್ತಿದಾಯಕ ಸಂಗತಿಗಳು

ತಮ್ಮ ಮಾಧ್ಯಮಿಕ ಶಾಲಾ ಅಧ್ಯಯನದ ನಂತರ, ಪಿಣರಾಯಿ ವಿಜಯನ್ ಕೆಲವು ವರ್ಷಗಳ ಕಾಲ ಕೈಮಗ್ಗ ಕಾರ್ಮಿಕರಾಗಿ ಕಾರ್ಯನಿರ್ವಹಿಸಿದರು. ಇದೇ ವೇಳೆ 1998ರಲ್ಲಿ ಕೇರಳ ರಾಜ್ಯ ಸಿಪಿಐಎಂ ಕಾರ್ಯದರ್ಶಿಯಾಗಿ ನೇಮಕಗೊಂಡು 2015ರವರೆಗೂ ಇದೇ ಹುದ್ದೆಯಲ್ಲಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇವರನ್ನು ಬಂಧಿಸಿದ ಪೊಲೀಸರು ಭಯಂಕರ ಕಿರುಕುಳ, ತೊಂದರೆ, ದೌರ್ಜನ್ಯವನ್ನು ವಿಜಯನ್ ಮೇಲೆ ಎಸಗಿದರು. ಜೈಲಿನಿಂದ ಹೊರಬಂದ ಪಿಣರಾಯಿ ವಿಜಯನ್ ರಕ್ತದ ಕಲೆಗಳಿದ್ದ ತಮ್ಮ ಅಂಗಿಯನ್ನು ಬೀಸುತ್ತ ಜೈಲಿನಲ್ಲಿ ತಾವು ಅನುಭವಿಸಿದ ಯಾತನೆಯನ್ನು ಹೊರಜಗತ್ತಿಗೆ ಭಾಷಣಗಳ ಮೂಲಕ ತಿಳಿಸಿದರು.

ಪಿಣರಾಯಿ ವಿಜಯನ್ ಸಾಧನೆಗಳು

ಕೇರಳ ವಿಧಾನಸಭೆಗೆ ಐದು ಬಾರಿ ಆಯ್ಕೆ ಆಗಿರುವ ಪಿಣರಾಯಿ 1970, 1977, 1991, 1996 ಮತ್ತು 2016ರಲ್ಲಿ ವಿವಿಧ ಮೂರು ವಿಧಾನಸಭಾ ಕ್ಷೇತ್ರಗಳಿಂದ ಆಯ್ಕೆಯಾಗಿದ್ದಾರೆ. 1971ರಲ್ಲಿ ತಲಶೇರಿ ಪ್ರದೇಶದಲ್ಲಿ ನಡೆದ ಭಯಂಕರ ಕೋಮು ಗಲಭೆ ನಿವಾರಣೆಯಲ್ಲಿ ಅವರು ಕೈಗೊಂಡ ಪ್ರಮುಖ ಪಾತ್ರಕ್ಕಾಗಿ ಅವರನ್ನು ನ್ಯಾಯಾಲಯ ಕೂಡ ಶ್ಲಾಘಿಸಿತು. 1996-98ರವರೆಗೆ ವಿದ್ಯುತ್ ಖಾತೆ ಸಚಿವರಾಗಿದ್ದರು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X