ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಬೆಂಗ್ಳೂರು ಕನ್ನಡ ಸಾಹಿತ್ಯ ಲೈವ್!

By Prasad
|
Google Oneindia Kannada News

Indya Comics
ಕನ್ನಡ ಭಾಷೆಯ ಕಂಪನ್ನು ಕಡಲಾಚೆ ಹರಿಸಿ ಜಾಗತೀಕರಣಗೊಳಿಸುವತ್ತ ಇಂಡ್ಯಾ ಕಾಮಿಕ್ಸ್ ಪ್ರಸ್ತುತ ಪಡಿಸುತ್ತಿರುವ ಒಂದು ವಿಶಿಷ್ಟ ಕಾರ್ಯಕ್ರಮ "ಯಾವ ಮೋಹನ ಮುರಳಿ ಕರೆಯಿತು". ನ್ಯೂ ಜೆರ್ಸಿಯಲ್ಲಿ ಸೆಪ್ಟೆಂಬರ್ 3ರಿಂದ 5ರವರೆಗೆ ನಡೆಯುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಅನಿವಾಸಿ ಕನ್ನಡಿಗರು ಮತ್ತು ಬೆಂಗಳೂರಿನ ಕನ್ನಡಿಗರ ನಡುವೆ ಸಹಭಾಗದೊಂದಿಗೆ ಸಾಂಸ್ಕೃತಿಕ ಸಂಭಾಷಣೆ ನಡೆಸುವ ಒಂದು ಅಪೂರ್ವ ಅವಕಾಶವೇ, ಯಾವ ಮೋಹನ...

ಅಮೆರಿಕದ ಎಡಿಸನ್ ನಗರದಲ್ಲಿ ನಡೆಯುವ ಅಕ್ಕ ಸಮಾವೇಶದ ವೇದಿಕೆಯಿಂದ ಮತ್ತು ಬೆಂಗಳೂರಿನ ನಯನ ಸಭಾಂಗಣದಲ್ಲಿ ಉಪಸ್ಥಿತಿಯಲ್ಲಿರುವ ಕನ್ನಡದ ಹೆಸರಾಂತ ಸಾಹಿತಿಗಳು, ಸಾಹಿತ್ಯಾಸಕ್ತರ ನಡುವೆ ನೇರ ವಿಚಾರ ವಿನಿಮಯ ಮಾಡುವುದು ಈ ಕಾರ್ಯಕ್ರಮದ ಉದ್ದಿಶ್ಯ. ಕಾರ್ಯಕ್ರಮದ ನೇರ ಪ್ರಸಾರ ಸೆಪ್ಟೆಂಬರ್ 4 ಶನಿವಾರ ಬೆಳಗ್ಗೆ 9.30 (ಎಡಿಸನ್ ಸಮಯ), ಅದೇ ದಿನ ಸಂಜೆ 7.30 (ಬೆಂಗಳೂರು ಸಮಯ).

ಜೊತೆಗೆ ಸುಶ್ರಾವ್ಯ ಸಂಗೀತ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಕ್ಕ ಸಮಾವೇಶಕ್ಕೆ ತಮ್ಮ ಸಂದೇಶವನ್ನು ಈ ವೇದಿಕೆಯಿಂದ ಬಿತ್ತರಿಸಲಿದ್ದಾರೆ. ರಾಷ್ಟ್ರಕವಿ ಡಾ. ಜಿಎಸ್ ಶಿವರುದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ್, ಸುಧಾ ಮೂರ್ತಿ/ಚಿತ್ರ ನಟಿ ತಾರಾ ಮುಂತಾದವರು ಪಾಲ್ಗೊಳ್ಳಲಿರುವ ಈ ವಿನೂತನ ಕಾರ್ಯಕ್ರಮದಲ್ಲಿ ಹೊರತರಲಿರುವ ಕನ್ನಡ ಕಾದಂಬರಿಗಳ ಸರಳ ಸಚಿತ್ರ ರೂಪಾಂತರವೂ ಬಿಡುಗಡೆಯಾಗಲಿದೆ.

ನಂತರ ಎರಡೂ ಸಭೆಗಳಲ್ಲಿ ಪಾಲ್ಗೊಂಡಿರುವ ಸಾಹಿತ್ಯಾಸಕ್ತರ ನಡುವೆ ಮುಕ್ತ ಸಮಾಲೋಚನೆ ನಡೆಯಲಿದೆ. ವಿವರಗಳಿಗೆ ಕಾರ್ಯಕ್ರಮ ಪಟ್ಟಿ ನೋಡಿ. ಕನ್ನಡ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವಂತಹ ಉದಾತ್ತ ಧ್ಯೇಯವನ್ನು ಹೊಂದಿರುವ ಸಂಸ್ಥೆ ಇಂಡ್ಯಾ ಕಾಮಿಕ್ಸ್. ಕನ್ನಡದಲ್ಲಿ ಓದುವ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಕನ್ನಡ ಸಾಹಿತ್ಯವನ್ನು ಹೊಸ ಜನಾಂಗಕ್ಕೆ ಮುಟ್ಟಿಸುವ ಆಶೋತ್ತರವನ್ನು ಹೊಂದಿದೆ.

* ನಾಡಗೀತೆ ರಮ್ಯ ವಸಿಷ್ಟ ಅವರಿಂದ
* ಆಶಯ ಗೀತೆ ಎಡಿಸನ್ ನಗರದಿಂದ
* 125 ಗಾಯಕರ ತಂಡದಿಂದ ಸಮೂಹ ಗಾನ ಪ್ರಸ್ತುತಿ
* ಸ್ವಾಗತ ಭಾಷಣ ಬಿ.ಎಸ್ ರಘುರಾಮ್, ಇಂಡ್ಯಾ ಕಾಮಿಕ್ಸ್ ವತಿಯಿಂದ
* ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಂದ ಅಕ್ಕ ಸಮ್ಮೇಳನಕ್ಕೆ ಸಂದೇಶ
* ಯಾವ ಮೋಹನ ಮುರಳಿ ಕರೆಯಿತು ಗೀತೆ ರತ್ನಮಾಲಾ ಪ್ರಕಾಶ್ ಅವರಿಂದ
* ರಾಷ್ಟ್ರಕವಿ ಜಿಎಸ್‌ಎಸ್ ಅವರಿಂದ ಸಂದೇಶ ನಯನ ಸಭಾಂಗಣದಿಂದ
* ಡಾ. ಎಚ್‌ಎಸ್‌ವಿ ಅನಿಸಿಕೆ (ಆಶಯ ಗೀತೆಯ ಕುರಿತು) ಅಕ್ಕ ಸಮಾವೇಶದಿಂದ
* ಜಿಎಸ್‌ಎಸ್ ಕವನ ವಾಚನ ಶಿವಮೊಗ್ಗ ಸುಬ್ಬಣ್ಣ ಅವರಿಂದ
* ತಾರಾ ಚಿತ್ರರಂಗ ಹಾಗೂ ಸಾಹಿತ್ಯ : ಒಂದು ವಿಶ್ಲೇಷಣೆ
* ನಾಗತಿಹಳ್ಳಿ ಚಂದ್ರು ಕನ್ನಡ ಸಾಹಿತ್ಯ ಪರಂಪರೆ ಬಗ್ಗೆ ವ್ಯಾಖ್ಯಾನ ನಯನದಿಂದ
* ಜನಪದ ಗೀತೆ ಅಕ್ಕ ಸಮಾವೇಶದಿಂದ
* ಸಂವಾದ

English summary
Kannada literature tele conference between Edison and Bangalore. An online bridge between AKKA 2010 and Indya Comics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X