ಅಕ್ಕ ಸಾಹಿತ್ಯಗೋಷ್ಠಿಯಲ್ಲಿ ನಮ್ಮ ಲೇಖಕರು
* ಡಾ. ಎಂಎಂ ಕಲಬುರ್ಗಿ
* ಬಿಆರ್ ಲಕ್ಷ್ಮಣ್ ರಾವ್
* ಮೂಡ್ನಾಕೂಡು ಚಿನ್ನಸ್ವಾಮಿ
* ಜೋಗಿ (ಗಿರೀಶ್ ರಾವ್)
* ಡಾ. ಎಚ್ಎಂ ಮಹೇಶ್ವರಯ್ಯ
* ಜರಗನಹಳ್ಳಿ ಶಿವಶಂಕರ್
* ಡಾ. ಮಲ್ಲಿಕಾ ಘಂಟಿ
* ಡಾ. ರಾಜೇಶ್ವರಿ ಗೌಡ
* ಹೇಮಾ ಪಟ್ಟಣಶೆಟ್ಟಿ
ಎಂಸೀ ತಂಡ : ಒಂದು ಸಾರ್ವಜನಿಕ ಕಾರ್ಯಕ್ರಮ ಪರಿಪೂರ್ಣ ಯಶಸ್ಸು ಕಾಣಬೇಕಾದರೆ ಅದರಲ್ಲಿ ಕಾರ್ಯಕ್ರಮ ನಿರೂಪಕರ ಪಾತ್ರವೂ ಮಹತ್ವದ್ದಾಗಿರುತ್ತದೆ. ವೇದಿಕೆ ಅಥವಾ ರಂಗಮಂಚದ ಮೇಲಿರುವ ಅಧಿಕಾರಿಗಳು, ಮಂತ್ರಿಮಹೋದಯರು, ಕಲಾವಿದರು, ಸಾಹಿತಿಗಳು, ಸಿನಿಮಾ ತಾರೆಯರ ವ್ಯಕ್ತಿ ಪರಿಚಯ ನಿರೂಪಕಿಗೆ ಅಗತ್ಯವಾಗಿ ಇರಬೇಕು. ಜತೆಗೆ, ವೇದಿಕೆಯ ಮೇಲೆ ಪ್ರದರ್ಶನಕ್ಕಿಟ್ಟಿರುವ ಕಲಾ ಪ್ರಕಾರದ ಸೂಕ್ಷ್ಮಗಳ ಅರಿವಿದ್ದರೆ ಕಾರ್ಯಕ್ರಮ ನಿರೂಪಣೆ ಸುಸೂತ್ರ. ಕಾರ್ಯಕ್ರಮ ನಿರೂಪಣೆಯೂ ಒಂದು ಕಲೆಯೆ.
ವಾಕ್ ಚಾತುರ್ಯ, ಮಧುರವಾದ ಕಂಠ, ಮತ್ತು ಪ್ರಸಂಗಾವಧಾನ ನಿಭಾಯಿಸಲು ಬಲ್ಲವರು ನಿರೂಪಣೆ ಜವಾಬ್ದಾರಿ ಹೊತ್ತರೆ ಲೇಸು. ಕಾರ್ಯಕ್ರಮಕ್ಕೆ ಅದೇ ಒಂದು ಶೋಭೆ. ವೇದಿಯ ಮೇಲೆ ನಿಂತು, ಮೈಕನ್ನು ಕೈಯಲ್ಲಿ ಹಿಡಿದು ತಡಬಡಾಯಿದರೆ ಸ್ವಾರಸ್ಯ ಹಾಳಾಗುತ್ತದೆ. ಇದನ್ನು ಮನಗಂಡ ಅಕ್ಕ ಸಮ್ಮಳನದ ಆಯೋಜಕರು ಕಾರ್ಯಕ್ರಮ ನಿರೂಪಣೆಯಲ್ಲಿ ನುರಿತ ಸುಮಾರು 13 ಜನರ ಎಂಸೀ ತಂಡ ರಚಿಸಿದೆ.
ಈ ತಂಡದಲ್ಲಿರುವ ಹಲವಾರು ನಿರೂಪಕಿಯರ ಕಿರು ಪರಿಚಯವನ್ನು ಸಮ್ಮೇಳನಾರ್ಥಿಗಳಿಗಾಗಿ ದಟ್ಸ್ ಕನ್ನಡ ಈ ಹಿಂದೆ ಪರಿಚಯಿಸಿದೆ. ಇದೇ ತಂಡದಲ್ಲಿ ಇನ್ನೂ ಐದು ನಿರೂಪಕಿಯರಿದ್ದು ಅವರ ಹೆಸರುಗಳು ಇಂತಿವೆ: ಕಂಚನ್ ಸುರೇಶ್, ನಾಗಮಣಿ ವಿಶ್ವನಾಥ್, ಶಶಿಶೇಖರ್ ಕೃಷ್ಣರಾಜನಗರ್ ಮತ್ತು ಸುಜಯ್ ರಾವ್. ವೀಣಾ ಮೋಹನ್ ಅವರು ಮುಖ್ಯಸ್ಥರಾಗಿರುವ ಈ ತಂಡದಿಂದ ಅಕ್ಕ ಸಮ್ಮೇಳನದ ಹಲವು ಹತ್ತು ಕಾರ್ಯಕ್ರಮಗಳನ್ನು ಸಾಂಗವಾಗಿ ನಡೆಯುವುದೆಂಬ ಆಶಾಭಾವನೆ ಇಟ್ಟುಕೊಳ್ಳಲಾಗಿದೆ. ನಿರೂಪಕಿಯರ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ.