ಸವಿಯಾದ ಮಾತು ಸೊಗಸಾದ ನೋಟ
ಮೊದಲ ದಿನ ತೀರ ಅಸಂಪ್ರದಾಯಿಕವಾಗೇನು ಇರಲಿಲ್ಲ. ಚಂದ್ರಶೇಖರ್ ಮತ್ತು ತಂಡದವರಿಂದ ನಾದಸ್ವರ ಇತ್ತು. ಬಳಿಕ ಶೀಲಾ ಪ್ರಭಾಕರ್ ತಂಡದವರು ವೇದಘೋಷ ಮಾಡಿದರು. ಮಧ್ಯಾಹ್ನ ಅಥರ್ವಶೀರ್ಷದ ಧ್ವನಿ ಕೇಳಿದಾಗ ಕುತೂಹಲದಿಂದ ಅತ್ತ ಹೋದವರಿಗೆ ಈ ತಂಡ ಅಭ್ಯಾಸ ನಡೆಸುತ್ತಿದ್ದ ಅಂಶ ಗಮನಕ್ಕೆ ಬಂತು. ಪ್ರಾರ್ಥನಾ ಮಂತ್ರ, ಮಂತ್ರಪುಷ್ಟ, ಶ್ರೀಸೂಕ್ತ, ನಾರಾಯಣ ಸೂಕ್ತ- ಇವು ವೇದ ಘೋಷದಲ್ಲಿ ಸೇರಿವೆ.
***
ಸವಿಯಾದ
ಮಾತು,
ಸಿಹಿಯಾದ
ಊಟ,
ಸೊಗಸಾದ
ನೋಟ-
ಮೊದಲ
ದಿನ
ಸಂಜೆಯ
ಕಾರ್ಯಕ್ರಮವನ್ನು
ಹೀಗೆ
ಬಣ್ಣಿಸಲು
ಅಡ್ಡಿ
ಇಲ್ಲ.
ಅನ್ನ-ಸಾಂಬಾರ್,
ಪಲಾವ್,
ಪಾಯಸ,
ರಾಗಿ
ಮುದ್ದೆ
ಊಟ
ಎಲ್ಲರ
ಹೊಟ್ಟೆ
ತಣಿಸಿತು.
ಅದರಂತೆ
ಮುಂದೆ
ನಡೆದ
ಸಾಂಸ್ಕೃತಿಕ
ಕಾರ್ಯಕ್ರಮಗಳು
ಮನವನ್ನು
ಮುದಗೊಳಿಸಿತು.
***
ರಂಗಕರ್ಮಿ
ಯಶವಂತ
ಸರದೇಶಪಾಂಡೆಯವರ
ಖದರೇ
ಭಿನ್ನವಾಗಿತ್ತು.
ಅವರು
ಕಚ್ಚೆ
ಪಂಚೆ,
ಅಂಗಿ,
ಟೋಪಿ,
ಕೊಲ್ಲಾಪುರಿ
ಚಪ್ಪಲಿ
ಧರಿಸಿ
ಅಪ್ಪಟ
ಉತ್ತರ
ಕರ್ನಾಟಕ
ಶೈಲಿಯಲ್ಲಿ
ಬಂದು
ಗಮನ
ಸೆಳೆದರು.
***
ಕಿಕ್ಕೇರಿ
ಕೃಷ್ಣಮೂರ್ತಿಯವರ
ಜನಪದ
ಸಂಗೀತ;
ಪುತ್ತೂರಾಯ,
ಕೃಷ್ಣೇಗೌಡರ
ನಗೆ
ರಸಾಯನ
ಇತ್ತು.
ಆದರೆ
ಇವರೆಲ್ಲರ
ಇಂದಿನ
ಕಾರ್ಯಕ್ರಮ
ಕೇವಲ
ಝಲಕ್
ಅಂತೆ.
ಮುಂದೈತೆ
ಖಡಕ್
ಕಾರ್ಯಕ್ರಮ.
ನಾವಿಕದ
ಕೆಲವು
ಕಲಾವಿದರೂ
ಕಲಾಪ್ರದರ್ಶನ
ಮಾಡಿದರು.
***
ಬದರಿ
ಪ್ರಸಾದ್
ಹಾಗೂ
ಅಜಯ್
ವಾರಿಯರ್-ದಿವ್ಯಾ
ರಘುರಾಮ್
ಅವರು
ಕನ್ನಡ
ಚಿತ್ರಗೀತೆಗಳನ್ನು
ಹಾಡಿ
ನೆರೆದಿದ್ದ
ಸಹಸ್ರಾರು
ಪ್ರತಿನಿಧಿಗಳನ್ನು
ರಂಜಿಸಿದರು.
ಆದರೆ
ಎಲ್ಲರದೂ
ಮಧುರ
ಮಧುರವೀ
ಮಂಜುಳಗಾನ.
ಹೊಸ
ಹಾಡುಗಳ
ಸುಳಿವಿರಲಿಲ್ಲ.
ಬದರಿಪ್ರಸಾದ್
ಅವರು
ನಿನ್ನ
ಮನೆತನಕ...
ಹಾಡು
ಪ್ರಸ್ತುತಪಡಿಸಲು
ಮುಂದಾದರೂ
ತಾಂತ್ರಿಕ
ಕಾರಣದಿಂದ
ಅದು
ಸಾಧ್ಯವಾಗಲಿಲ್ಲ.
***
ನಾವಿಕದ
ಆಹ್ವಾನಿತರಾಗಿ
ಶಿವರಾಜ್
ಕುಮಾರ್,
ಜೆನ್ನಿಫರ್
ಕೊತ್ವಾಲ್,
ಶರ್ಮಿಳಾ
ಮಾಂಡ್ರೆ
ಆಗಮಿಸಿದ್ದು
ತಾರಾ
ಮೆರಗು
ನೀಡಿದ್ದಾರೆ.
(ಸ್ನೇಹಸೇತು
:
ವಿಜಯ
ಕರ್ನಾಟಕ)