ನಾವಿಕ ಅಧ್ಯಕ್ಷ ಶ್ರೀಅಯ್ಯಂಗಾರ್ ಜತೆ ಮಾತು
ವಿಶ್ವ ಕನ್ನಡ ಸಮ್ಮೇಳನ ವ್ಯವಸ್ಥೆ ಮಾಡುವುದಕ್ಕೆ ಕನಿಷ್ಠ 10 ತಿಂಗಳಕಾಲದ ತಾಲೀಮು ಬೇಕಾಗುತ್ತದೆ. ಆದರೆ, ನಾವಿಕ ಸಂಸ್ಥೆ ಕಣ್ತೆರೆದ ಕೆಲವೇ ತಿಂಗಳಲ್ಲಿ ವಿಶ್ವ ಮಟ್ಟದ ಸಮ್ಮೇಳನ ಆಯೋಜಿಸುವ ನಿರ್ಧಾರ ಕೈಗೊಂಡಿರುವುದರಿಂದ ಸಮ್ಮೇಳನದ ಕುದುರೆ ವೇಗಮಿತಿಯನ್ನು ಧಿಕ್ಕರಿಸಿ ನಾಗಾಲೋಟ ಕಿತ್ತಬೇಕಾಗಿದೆ. ಸಮಯ ಕಡಿಮೆ ಇದೆ. ಸಮ್ಮೇಳನದ ಮುಹೂರ್ತ ಹತ್ತಿರ ಬರುತ್ತಿದೆ.
ಸಮ್ಮೇಳನಕ್ಕೆ ಕುಟುಂಬ ಪರಿವಾರ ಸಮೇತ ಆಗಮಿಸಿ ಹಬ್ಬದ ಸಂಭ್ರಮವನ್ನು ದ್ವಿಗುಣ ಮಾಡಬೇಕೆಂದು ಶ್ರೀಸಾಮಾನ್ಯ ಅಮೆರಿಕನ್ನಡಿಗರನ್ನು ಕೋರುವ ಆಮಂತ್ರಣ ಪತ್ರವನ್ನು ನಾವಿಕದ ಅಂತರ್ಜಾಲ ತಾಣದಲ್ಲಿ ಛಾಪಿಸಲಾಗಿದೆ. ಸಮ್ಮೇಳನಕ್ಕೆ ರಂಗು, ರಂಜನೆ, ಬೆರಗು, ಕಳೆ, ಅರ್ಥವಂತಿಕೆ ತಂದುಕೊಡಬಲ್ಲ ಗಣ್ಯರ ಹಿಂಡಿಗೆ ಹುಡುಕಾಟ ಇದೀಗ ಸಾಗಿದೆ.
ನೂತನ ಶಕೆಯ ಕವಿ, ಎಲೆಮರೆಯ ಕಲಾವಿದ, ಹೊಸಪಲ್ಲವಿ ಹಾಡುವ ಗಾಯಕಗಾಯಕಿ, ಆಕಾಲಕ್ಕೂ ಈ ಕಾಲಕ್ಕೂ ಸಲ್ಲುವ ಸಂಗೀತಗಾರ, ಹೊಸಹೊಸ ಜೋಕುಗಳನ್ನು ಸಿಡಿಸಬಲ್ಲ ಹಾಸ್ಯಗಾರರಲ್ಲದೆ ಸಮ್ಮೇಳನದಲ್ಲಿ ಏರ್ಪಾಟಾಗುವ ಸಮಾನಾಂತರ ಸಮಾವೇಶಗಳಲ್ಲಿ ವೇದಿಕೆಯ ಮೇಲೆ ಆಸೀನರಾಗಲು ಗಣ್ಯ ತಂತ್ರಜ್ಞ, ಗಣ್ಯ ಮಹಿಳೆ, ಗಣ್ಯ ರಾಜಕಾರಣಿ, ಗುರು ತಪಸ್ವಿಗಳು, ಗಣ್ಯ ವಣಿಕ ಬಳಗವನ್ನು ಗುರುತಿಸಿ, ಹುಡುಕಿ, ಖುದ್ದಾಗಿ ಅವರಿಗೆ ವೀಳ್ಯ ಕೊಡುವುದಕ್ಕೆ ಅಧ್ಯಕ್ಷ ಶ್ರೀಅಯ್ಯಂಗಾರ್ ಜನವರಿ 24ರಂದು ಬೆಂಗಳೂರಿಗೆ ಬಂದಿದ್ದಾರೆ. ಕರ್ನಾಟಕದ ಸರಕಾರದ ವತಿಯಿಂದಲೂ ಕಲಾವಿದರ ಒಂದು ತಂಡವನ್ನು ಕಳಿಸಿಕೊಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ನಾವಿಕ ಮನವಿ ಸಲ್ಲಿಸಿದೆ. ಶ್ರೀಅಯ್ಯಂಗಾರ್ ಅವರೊಂದಿಗೆ ದಟ್ಸ್ ಕನ್ನಡ ನಡೆಸಿದ ಮಾತುಕತೆಯ ಸಂಕ್ಷಿಪ್ತ ರೂಪ ಹೀಗಿದೆ:
ಲಾಸ್
ಏಂಜಲಿಸ್
ಕನ್ನಡ
ಸಮ್ಮೇಳನದ
ಸ್ವರೂಪ
»