ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕನ್ನಡ ಸಮ್ಮೇಳನದಲ್ಲಿ ಕಾಯ್ಕಿಣಿ ‘ಡಾಟ್ಸ್‌ ಅಂಡ್‌ ಲೈನ್ಸ್‌’

By Oneindia Staff
|
Google Oneindia Kannada News

Kaikinis book Dots and Lines to be released in WKCನಾಲ್ಕು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಥೆಗಾರ ಜಯಂತ್‌ ಕಾಯ್ಕಿಣಿಯವರ ‘ಅಮೃತ ಬಳ್ಳಿ ಕಷಾಯ’ ಕಥಾಸಂಕಲನವನ್ನು ಕ್ಯಾಲಿಫೋರ್ನಿಯಾದ ‘ಸಾಹಿತ್ಯ ಗೋಷ್ಠಿ’ ಇಂಗ್ಲಿಷ್‌ಗೆ ಅನುವಾದಿಸಿದೆ. ಅಮೃತಬಳ್ಳಿ ಕಷಾಯದ ಇಂಗ್ಲಿಷ್‌ ರೂಪ ‘ಡಾಟ್ಸ್‌ ಅಂಡ್‌ ಲೈನ್ಸ್‌’ ಕೃತಿಯನ್ನು ಇಂಡಿಯಾಲಾಗ್‌ ಪಬ್ಲಿಕೇಷನ್ಸ್‌ ಪ್ರೆೃ. ಲಿ. ಪ್ರಕಟಿಸಿದೆ.

ಒರ್ಲಾಂಡೋ-ಫ್ಲಾರಿಡಾದಲ್ಲಿ ನಡೆಯಲಿರುವ ಅಕ್ಕ ಜಾಗತಿಕ ಕನ್ನಡ ಸಮ್ಮೇಳನದಲ್ಲಿ ಸೆಪ್ಟೆಂಬರ್‌ 3 ರಂದು ‘ಡಾಟ್ಸ್‌ ಅಂಡ್‌ ಲೈನ್ಸ್‌’ ಕೃತಿ ಬಿಡುಗಡೆಯಾಗಲಿದೆ ಎಂದು ಸಾಹಿತ್ಯಗೋಷ್ಠಿಯ ರೂವಾರಿ ವಿಶ್ವನಾಥ್‌ ಹುಲಿಕಲ್‌ ದಟ್ಸ್‌ಕನ್ನಡ.ಕಾಂಗೆ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯವನ್ನು ನಿರ್ದಿಷ್ಟ ಸಮುದಾಯದಾಚೆಗೆ ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಸಾಹಿತ್ಯಗೋಷ್ಠಿ- ಎರಡು ವರ್ಷಗಳ ಹಿಂದ್ಫೆಕಾಯ್ಕಿಣಿ ಕಥೆಗಳ ಅನುವಾದದ ಕಾರ್ಯವನ್ನು ಕೈಗೆತ್ತಿಕೊಂಡಿತ್ತು .

ಜಯಂತ್‌ ಕಾಯ್ಕಿಣಿಯವರ ‘ಅಮೃತ ಬಳ್ಳಿ ಕಷಾಯ’ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಜೊತೆಗೆ ಬಿ.ಹೆಚ್‌. ಶ್ರೀಧರ್‌ ಪ್ರಶಸ್ತಿಯೂ ಲಭಿಸಿದೆ.

ಸಾಹಿತ್ಯ ಗೋಷ್ಠಿಯು ಈ ಯೋಜನೆಗೆ ಕನ್ನಡ-ಇಂಗ್ಲೀಷ್‌ ಭಾಷೆಯಲ್ಲಿ ಪ್ರಭುತ್ವವುಳ್ಳ ಅನುವಾದಕರನ್ನು ಗುರ್ತಿಸಿದ್ದು , ಮೂಲಕೃತಿಗೆ ಲೋಪವಾಗದಂತೆ, ಕನ್ನಡ ಮತ್ತು ಕರ್ನಾಟಕದ ಸಂಸ್ಕೃತಿಯ ಅರಿವುಳ್ಳವರಿಂದ ಅನುವಾದಕಾರ್ಯ ನಡೆಸಿದೆ. ಜಾಗತಿಕ ಓದುಗರಿಗೆ ಕನ್ನಡ ನೆಲದ ಪರಿಸರ ಹಾಗೂ ಸಮಸ್ಯೆಗಳನ್ನು ಅರ್ಥಮಾಡಿಸುವಲ್ಲಿ ಪುಸ್ತಕ ಪರಿಣಾಮಕಾರಿಯಾಗಿದೆ ಎಂದು ಪುಸ್ತಕದ ಬಗೆಗೆ ಸಂಪಾದಕರು ಅಭಿಪ್ರಾಯಪಟ್ಟಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X