ಹುಟ್ಟಿ ಬಾ ಹನುಮಂತಪ್ಪ ದೇಶದ ಹಣತೆಯ ಬೆಳಗಲು
ಅರಿಯದ
ಹಸುಳೆಯ
ಬಿಟ್ಟು
ಹರೆಯದ
ಮಡದಿಯ
ತೊರೆದು
ಹುತಾತ್ಮನಾದೆ
ಹನುಮಂತಪ್ಪ
ನಿನ್ನ
ಪ್ರಾಣಾರ್ಪಣೆಗೆ
ಇಲ್ಲವೆ
ಬೆಲೆ
ಹರಡಿದೆ
ಎಲ್ಲೆಡೆಗೆ
ದ್ರೋಹಿಗಳ
ಬಲೆ|
ದೇಶದಸ್ತಿತ್ವವನೆ
ಪ್ರಶ್ನಿಸುವ
ಭಂಡರು
ದೇಶವಿರೋಧಿ
ಕಾಯಕಗಳ
ಪುಂಡರು
ನಿಯತ್ತಿರದ
ನೀಚರೇ
ಎಲ್ಲ
ಕಡೆಗೆ
ಬುದ್ಧಿಜೀವಿಗಳ
ಸೋಗು
ಹಾಕುತಿಹರು
ಗೆದ್ದಲಿನ
ಹಾಗೆ
ದೇಶ
ಕೆಡಿಸುತಿಹರು|
[ಮಣ್ಣಲ್ಲಿ
ಮಣ್ಣಾದ
ವೀರಯೋಧ
ಹನುಮಂತಪ್ಪ]
ದೇಶಭಕ್ತಿಯ ದಿವ್ಯ ದೇಗುಲಗಳೆನಿಸಿದ
ಯುವಶಕ್ತಿಯ
ಉಚ್ಛ
ಮಂದಿರಗಳೆನಿಸಿದ
ವಿಶ್ವವಿದ್ಯಾಲಯಗಳೊಳಗೆ
ಇಂದು
ಶತ್ರುಗಳ
ಜಯಕಾರ
ಮೊಳಗುತಿಹುದು
ಅರಿಗಳ
ಠೇಂಕಾರ
ಕೆಣಕುತಿಹುದು|
[JNU
ವೃತ್ತಾಂತ:
ಗುಪ್ತಚರ
ಇಲಾಖೆಯ
ಸ್ಫೋಟಕ
ಮಾಹಿತಿ]
ನಿನ್ನ
ಮಹತ್ತರ
ಸಮರ್ಪಣೆಗೆ
ಅಸಮಾನ
ತ್ಯಾಗದ
ಉದಾಹರಣೆಗೆ
ಪಾತ್ರರೆ
ಈ
ಹುಲು
ಜೀವಿಗಳು?
ಸ್ವಂತ
ತಾಯಿಗೆ
ಎರಡು
ಬಗೆಯುವವರು
ಅರಿವಿನ
ಜ್ಯೋತಿಗೆ
ಬೆನ್ನು
ಹಾಕಿದವರು|
ದಂತದರಮನೆಗಳಲಿ
ಹೊರಳಿ
ಸುಪ್ಪತ್ತಿಗೆಯ
ಸುಖದಲ್ಲಿ
ಉರುಳಿ
ರಾಷ್ಟ್ರ
ಭಕ್ತರನು
ಜರಿಯುವರು
ಇವರು
ಅದಾವ
ಹೊಸ
ಕುಭಾಷ್ಯ
ರಚಿಸುತಿಹರು
ವಿಭಜಿಸುವ
ಹೊಸ
ನೀತಿ
ಮಸೆಯುತಿಹರು?
[ಚಿತ್ರಗಳು
:
ತವರಿನಲ್ಲಿ
ವೀರಯೋಧನಿಗೆ
ಅಂತಿಮ
ನಮನ]
ಮತ್ತೊಮ್ಮೆ
ಬಾ
ಹನುಮಂತಪ್ಪ
ನೀ
ವೀರ
ಪುತ್ರರ
ಕೆಚ್ಚೆದೆಯ
ಕಿಡಿಯಾಗಿ
ತಾಯಿ
ಭಾರತಿಯ
ಕಂದರಾಗ್ರಣಿಯಾಗಿ
ಮೆಟ್ಟಿ
ಹಾಕಲು
ಕೆಟ್ಟ
ದ್ರೋಹಗಳನು
ಸರಿದಾರಿಗೆಳೆಯಲು
ಮುನಿದ
ಮನಗಳನು|
ವಿಭಜಿಸುವ
ಕೂಟನೀತಿಯದು
ಸಾಕಾಗಿದೆ
ಒಂದುಗೂಡಿಸುವ
ಪ್ರಣತಿಯದು
ಬೇಕಾಗಿದೆ
ಹುಟ್ಟಿ
ಬಾ
ಹನುಮಂತಪ್ಪ
ಹಣತೆಯನು
ಬೆಳಗಲು
ಒಡೆಯುವ
ಮತ
ಪಂಥಗಳ
ದಮನಕಾಗಿ
ಒಡೆದ
ಹೃದಯಗಳ
ನೋವ
ಶಮನಕಾಗಿ|