ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ರಾಮ, ನೀನು ಸೀತೆ ಆಗೊಣವೇ?

By * ಕೆಆರ್ಎಸ್ ಮೂರ್ತಿ, ಕ್ಯಾಲಿಫೋರ್ನಿಯಾ
|
Google Oneindia Kannada News

KRS Murthy, North California
ನೆನಪಿದೆಯೇ ನಿನಗೆ ನಾಗವೇಣಿ! ಒಂದೇ ಲೋಟ, ಎರಡು ಜೊತೆಯ ತುಟಿಗಳು
ಪಾನಕ ಸಮಾರಾಧನೆ, ನಮಗೆ ನಿಂಬೆ, ಬೇಲ, ಸಿಹಿ, ಹುಳಿ ಮಿಳಿತ ಹಣ್ಣುಗಳು

ನೆನಪಿದೆಯೇ ನೀಲಾಂಬರಿ! ಕೋಸಂಬರಿ ಸೇವೆ, ಹೆಸರು ಬೇಳೆ, ಕಡಲೆ ಉಸಲಿ
ಘಮ, ಘಮ ಒಗ್ಗರಣೆ; ಕೊತ್ತಂಬರಿ, ಕರಿಬೆವು ಸುವಾಸನೆ; ತೆಂಗಿನ ತುರಿ ಬಾಯಲ್ಲಿ

ತುಂಬಿದೆದೆಯಾ ತಾರಿಣಿ! ನಿನಗೆ ಹುಳಿಯವಲಕ್ಕಿ ನೈವೇದ್ಯ; ಗುಗ್ಗರಿ ಕಾಳು ಜಗಿಯಲು
ಜೊತೆಗೆ ನೆಲಗಡಲೆ ಬೆರೆಸಿದರೆ, ನನಗೂ, ನಿನಗೂ ಮಧುಚಂದ್ರದಾ ಸಗ್ಗ ಎಟುಕುತಿರಲು

ಸವೆಯದಾ ಸಾವಿತ್ರಿ ನೀನು; ಘಾಧ ಒಲವಿನ ಗಾಯಿತ್ರಿ; ನೀ ಅನುಸೂಯ, ನಾ ಅತ್ರಿ ಅಲ್ಲವೇ?
ನೀನಲ್ಲಿ, ನಾನಿಲ್ಲಿ ಏಕಾದೆವೋ! ಒಂದಾದರೂ ಸಾರಿ ನಾನು ರಾಮ, ನೀನು ಸೀತೆ ಆಗೊಣವೇ?

English summary
Shall we become Rama and Seeta, at least for once in our life? A Kannada poem by KRS Murthy from North California, USA, on the occasion of Ramanavami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X