ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಹೀಗೇಕೆ

By ಅನಿಕೇತನ, ಜರ್ಮನಿ
|
Google Oneindia Kannada News
A Kannada poem by Aniketanaಇಂದು ಹೀಗೇಕೆ ಸಖ
ಹೃದಯದಲಿ ಅವಿತಿರುವೆ
ಮತ್ತೆ ಜಾರುತಿದೆ ಮನಸು..

ದಟ್ಟ ಹಿಮ ಬೆಳಗಿಂದ
ಬೀಳುತಿಹುದು, ಹಿಡಿದಿರುವೆ
ರಕ್ತ ಹೆಪ್ಪುಗಟ್ಟುವವರೆಗೆ

ಬಿಟ್ಟು ಹೋಗುವೆ ಎಂದು
ಬಿಡಿಸದೇ ಕುಳಿತಿರುವೆ
ಬೆರಳು, ನೀಲಿಗಟ್ಟಿದೆ ನೋಡು..

ಒಟ್ಟು ಮಾಡಿರುವ ಆಸೆಗಳ
ಎದೆಯೊಳಗೆ ಒತ್ತಿರುವೆ
ನೀ ಬಿಟ್ಟು ಹೋಗಲುಬೇಡ

ತಟ್ಟೀತೇ ಅಲ್ಲಿ ಬಿಸಿಯುಸಿರು?
ಕೈಯಲ್ಲೇ ಕರಗಿರುವೆ
ನನಗೆಂಥ ಮರುಳು ಕನಸು !
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X