ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕವನ: ಅತೀತನಾದವನಿಗೆ ಸೆರೆಯಾದರೇನು
ದಿನೇಶ್ ಉಡುಪಿ, ಮೆಂಫಿಸ್
ಕ್ರೂರತನದ
ಸೆರೆಯಾದರೇನು
ಜಾರತನದ
ಕೆಸರಾದರೇನು
ಚಾಟಿಯ
ಚಳಕು
ಚೇತನದೊಳಗೆ
ಅಜ್ಞಾತ
ಕಂಬನಿ
ಮುಸುಕಿನೊಳಗೆ
ಅಮೂರ್ತಗಳ
ಆಕ್ರಂದನ
ಎದೆಯೊಳಗೆ
ಸೋರುವ
ಸಾಮರ್ಥ್ಯ
ಮುಷ್ಟಿಯೊಳಗೆ
ಕ್ರೂರತನದ
ಸೆರೆಯಾದರೇನು
ಜಾರತನದ
ಕೆಸರಾದರೇನು
ಸ್ಪರ್ಶವಿದ್ದರೂ
ಮಲಿನವಿಲ್ಲ
ಅಪ್ಪುಗೆಯಿದ್ದರೂ
ಕಾಮವಿಲ್ಲ
ನೋವಿದ್ದರೂ
ಅಕ್ರೋಶವಿಲ್ಲ
ಚಾಮರವಿದ್ದರೂ
ಸೊಕ್ಕಿಲ್ಲ
ಕ್ರೂರತನದ
ಸೆರೆಯಾದರೇನು
ಜಾರತನದ
ಕೆಸರಾದರೇನು
ವಿಶಾಲ
ಎದೆಯು
ಅನಂತ
ಆಕಾಶದೆಡೆಗೆ
ಗುರುತ್ವವಿಲ್ಲದ
ಸ್ವಚ್ಛಂದ
ಶೂನ್ಯದೊಳಗೆ
Comments
Story first published: Thursday, March 20, 2008, 15:04 [IST]