ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕಿನ ಲಗಾಮು ದೇವ್ರ ಕೈಯಲ್ಲಿ.. ನಾವೇನು ಮಾಡೋಣ?

By ನಾಗರಾಜ್ ಎಂ, ಕನೆಕ್ಟಿಕಟ್
|
Google Oneindia Kannada News

"ಕುತ್ತೆ ಕನ್ವರ್ಲಾಲ್ ಬೋಲೋ...!" ಎಂಥವರ ಗುಂಡಿಗೆಯನ್ನೂ ನಡುಗಿಸುವಂಥ ಅಬ್ಬರದ ಡೈಲಾಗನ್ನು ಮರೆಯಲು ಸಾಧ್ಯವೆ?

"ಹಲೋ ಬುಲ್ಬುಲ್ ...ಮಾತಾಡಕಿಲ್ವಾ?" ಅಂತ ದುರ್ಗದ ಕೋಟೆ ಬೀದಿಯಲ್ಲಿ ಕಾಲೇಜು ಹುಡುಗಿ ಹಿಂದೆ ಹೋಗ್ತಾ... "ಚಳಿ ಚಳಿ ತಾಳೆನು ಈ ಚಳಿಯ... ಗೆಳತಿಯೇ ಬಾರೆ ನೀ ಸನಿಹ" ಮಳೆಯಲಿ ನೆನೆಯುತ್ತಾ ಅಂಬಿಕಾ ಜೊತೆ ಡಾನ್ಸ್ ಮಾಡುತ್ತಾ, ಸರಿಯಾಗಿ ಚಡ್ಡಿ ಹಾಕಲು ಬರದೇ ಪ್ರೈಮರಿ ಸ್ಕೂಲ್ಗೆ ಹೋಗ್ತಿದ್ದ ನಮಗೆ ಅಂದೇ ರೋಮ್ಯಾಂಟಿಕ್ ಸಾಂಗ್ ಅಂದ್ರೆ ಹೆಂಗಿರುತ್ತೆ? ಅಂತಾ ತೋರಿಸಿಕೊಟ್ಟು...

ರಾಜನಂತೆ ಬಾಳಿದ ಅಜಾತಶತ್ರು ಅಂಬಿಯಣ್ಣ : ಕಿಚ್ಚನ ಕಣ್ಣೀರ ಪತ್ರ ರಾಜನಂತೆ ಬಾಳಿದ ಅಜಾತಶತ್ರು ಅಂಬಿಯಣ್ಣ : ಕಿಚ್ಚನ ಕಣ್ಣೀರ ಪತ್ರ

"ತಂದೆ ಕೊಡಿಸೋ ಸೀರೆ ಮದುವೆ ಆಗೋವರೆಗೆ, ತಾಯಿ ಉಡಿಸೋ ಸೀರೆ ತಾಯಿ ಆಗೋವರೆಗೆ, ಬಂದು ಕೊಡಿಸು ಸೀರೆ ಬಣ್ಣ ಹೋಗೋವರೆಗೆ... ಗಂಡ ಕೊಡಿಸೋ ಸೀರೆ ಕುಂಕುಮ ಇರುವವರೆಗೆ" ಅಂತ ಬದುಕಿನ ಸಾರವ ನೀ ಹೇಳಿ...

NRI fan of Ambareesh pays rich tribute to legendary actor

"ಒಲವಿನ ಉಡುಗೊರೆ ಕೊಡಲೇನು, ರಕುತದಿ ಬರೆದೆನು ಇದ ನಾನು" ಅಂತ ಕೆಂಪು ರಕ್ತದಲ್ಲಿ ಪ್ರೇಮಪತ್ರವ ಬರೆವುದ ಹೇಳಿಕೊಟ್ಟು...

"ನಾನು ಯಾರು... ಯಾವ ಊರು.. ಇಲ್ಲಿ ಯಾರೋ ಬಲ್ಲೋರಿಲ್ಲ.. ನನ್ನ ಹೆಸರಲ್ಲೇ ಕಮಾಲ್.. ನಾನೇ ಕನ್ವರ್ಲಾಲ್" ಅಂತ 'ಅಂತ' ದಲ್ಲಿ ಹಾಡಿ... "ಕುತ್ತೆ ಕನ್ವರ್ಲಾಲ್ ಬೋಲೋ" ಅಂತ ಹೇಳಿ...

Live Updates ಮುಗಿಯಿತು ಮಂಡ್ಯದ ಋಣ: ಬೆಂಗಳೂರಿನತ್ತ ಅಂಬಿ Live Updates ಮುಗಿಯಿತು ಮಂಡ್ಯದ ಋಣ: ಬೆಂಗಳೂರಿನತ್ತ ಅಂಬಿ

"ಮಸಣದ ಹೂವೆಂದು ನೀನೇಕೆ ಕೊರಗುವೆ" ಅಂತ ಎಲ್ಲರಿಗೂ ಸಮಾಧಾನಿಸುತ್ತಾ...

NRI fan of Ambareesh pays rich tribute to legendary actor

"ಬೊಂಬೆ ಆಡ್ಸೋನು ಮೇಲೆ ಕುಂತವ್ನು, ನಮ್ಗೆ ನಿಮ್ಗೆ ಯಾಕೆ ಟೆನ್ಶನ್?" ಅಂತ ಹಾಡುತ್ತಾ... "ಭೂಮಿ ಮೇಲಿನ ಈ ಬಾಳು, ಒಂದು ನಾಟಕ... ನಾವು ಅದರಲ್ಲಿ ಬಂದು ಹೋಗುವ ಪಾತ್ರಧಾರಿಗಳು"... ನಮ್ಮ ಸರದಿ ಬಂದಾಗ... ಬರ್ಬೇಕು, ಹೋಗ್ಬೇಕು... ಅಷ್ಟೇ... ಬದುಕಿನ ಲಗಾಮು ದೇವ್ರ ಕೈಯಲ್ಲಿ.. ನಾವೇನು ಮಾಡೋಣ?" ಅಂತ ಹೇಳುತ್ತಾ...

"ಹುಟ್ದೋರು ಯಾರು ಸಾಯದೆ ಹೋದ್ರೆ... ಹೆಂಗೆ ಹೇಳ್ರಣ್ಣ... ಮುಂದೆ ಹುಟ್ಟೋ ಮಂದಿಗೆ ಜಾಗ ಬ್ಯಾಡ ಏನ್ರಣ್ಣ... ಹುಟ್ಸೋದು, ಸಾಯ್ಸೋದು ಎಲ್ಲಾ ಅವ್ನ ಆಟ ಕನ್ರಣ್ಣ...

ನಮ್ಮ ಆಟ ಮುಗ್ಸಿ ಹೋಗೋ ಹೊತ್ನಲ್ಲಿ ಕಣ್ಣೇರು ಏಕಣ್ಣ...?" ಅಂತ ಅಂದೇ ನುಡಿದು...

NRI fan of Ambareesh pays rich tribute to legendary actor

ಅಂದು ಅಂಬರೀಶ್ ಎಂಬ ತಾಕತ್ತು ಇತ್ತು, ಇಂದು ಯಾರಿದ್ದಾರೆ? ಅಂದು ಅಂಬರೀಶ್ ಎಂಬ ತಾಕತ್ತು ಇತ್ತು, ಇಂದು ಯಾರಿದ್ದಾರೆ?

ಇಂದು ನಮ್ಮನ್ನು ಆಗಲಿ ಹೋದ... ನಮ್ಮೆಲ್ಲರ ಮೆಚ್ಚಿನ ರೆಬೆಲ್ ಸ್ಟಾರ್ ಅಂಬರೀಷ್... ಕಣ್ಮರೆಯಾಗಿದ್ದರೂ... ಎಂದೆಂದಿಗೂ ಅಮರವಾಗಿರುವ ಅಮರನಾಥ್!

ನಿನ್ನ ಕೈಲಾದಷ್ಟು ಸಹಾಯ ಮಾಡಿ
ಆಗಿದ್ದೆ ಕಲಿಯುಗದ ಕರ್ಣ, ನೀ ಅಂಬಿ...!
ಸಾವಿರಾರು ಜನ ಕಷ್ಟ - ಸುಖ
ಅಂತ ಬಂದಾಗ ನಿನ್ನ ನಂಬಿ...!

NRI fan of Ambareesh pays rich tribute to legendary actor

ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಕ್ರಮ: ಕುಮಾರಸ್ವಾಮಿ ಭರವಸೆ

ಚಕ್ರವ್ಯೂಹವ ಭೇದಿಸಿದ ರೆಬೆಲ್ ಸ್ಟಾರ್ ಆಗಿ, ಕಲಿಯುಗದ ಕರ್ಣನಾಗ, ಮಂಡ್ಯದ ಗಂಡಾಗಿ, ಸ್ಯಾಂಡಲ್ವುಡ್ ಗೆ ಹಿರಿಯಣ್ಣನಾಗಿ, ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನೇರ ನುಡಿಯ ನಾಯಕ... "ಅಂದವೋ ಅಂದವೋ ಕನ್ನಡ ನಾಡು... ನನ್ನ ಗೂಡು ಇಲ್ಲಿದೆ ನೋಡು" ಅಂತ ಅಂದು ನೀ ಹಾಡಿದ ಹಾಗೆ... ಮತ್ತೆ ನೀ ಇಲ್ಲೇ ಶ್ರೀಗಂಧದ ನಾಡಲ್ಲಿ ಹುಟ್ಟಿ ಬರುವೆಯಾ?

English summary
NRI fan of Kannada actor Ambareesh pays rich tribute to legendary person from Kannada film industry. Ambareesh breathed his last on 24th November in Bengaluru. ಬದುಕಿನ ಲಗಾಮು ದೇವ್ರ ಕೈಯಲ್ಲಿ.. ನಾವೇನು ಮಾಡೋಣ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X