ಮಾನವೀಯತೆ ಮೆರೆದ ಮೊಗವೀರ್ಸ್ ಅಸೋಸಿಯೇಷನ್ ಕುವೈತ್
ಕುವೈತ್, ಆಗಸ್ಟ್ 10 : ಬ್ರಹ್ಮಾವರದ ವಾರಂಬಳ್ಳಿ ಗ್ರಾಮದ ನಿವಾಸಿ, ಉಮೇಶ್ ಮರಕಾಲ ಇವರ ಮಗಳು ನಾಲ್ಕು ವರ್ಷದ ಬಾಲಕಿ ದೀಕ್ಷಾ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಮಣಿಪಾಲದ ಕರ್ಸ್ತೂಬಾ ಆಸ್ಪತ್ರೆಗೆ ದಾಖಲಾಗಿದೆ.
ವೈದ್ಯರುಗಳ ಪ್ರಕಾರ, ಅಂದಾಜು ಹತ್ತು ಲಕ್ಷ ರೂಪಾಯಿಗಳ ಖರ್ಚು ಭರಿಸಬೇಕಿದ್ದು, ಕುಟುಂಬವು ಕಡು ಬಡತನದಿಂದ ಜೀವನ ಸಾಗಿಸುತ್ತಿದ್ದುದರಿಂದ, ಮಗಳ ಚಿಕಿತ್ಸೆಗಾಗಿ ಸಲ್ಲಿಸಿದ ಮನವಿಗೆ ಸ್ಪಂದಿಸಿ, 'ಮೊಗವೀರ್ಸ್ ಅಸೋಸಿಯೇಷನ್ ಕುವೈತ್'(MAK)ನ ಸದಸ್ಯರು ನೀಡಿದ ಧನಸಹಾಯ ರೂ.75,000 ಚೆಕ್ನ್ನು ಇತ್ತೀಚೆಗೆ ಸಂಘದ ಪರವಾಗಿ ನೀಡಲಾಗಿಯುತ
ಕ್ಯಾನ್ಸರ್ ಪತ್ತೆಗೆ 'ಅಕ್ಕ'ನಿಂದ ಮೊಬೈಲ್ ಮ್ಯಾಮೋಗ್ರಫಿ ಬಸ್ ಕೊಡುಗೆ
ಕವಿತಾ ರಮೇಶ್ ಕಿದಿಯೂರು, ಸಮಾಜ ಸೇವಕಿ, ಸರಳಾ ಬಿ. ಕಾಂಚನ್, ಮೊಗವೀರ ಸಭಾದ ಅಧ್ಯಕ್ಷರು, ದಾಮೋದರ ಸುವರ್ಣ ಮತ್ತು ಪ್ರಭಾ ಸುವರ್ಣ ಇವರ ಮೂಲಕ ಜುಲೈ 24ರಂದು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಹಸ್ತಾಂತರಿಸಲಾಯಿತು.
ಬಡತನದ ಕಾರಣದಿಂದ ಹೆಚ್ಚಿನ ಚಿಕಿತ್ಸಾ ವೆಚ್ಚ ಭರಿಸಲು ಕಷ್ಟಸಾಧ್ಯವಾದ್ದರಿಂದ ಊರ-ಪರವೂರ ಧಾನಿಗಳು, ಸಂಘ-ಸಂಸ್ಥೆಗಳು, ಸಮಾಜ ಸೇವಕರು, ಸ್ವಜಾತಿ ಸಮಾಜ ಬಾಂಧವರು ಧನ ಸಹಾಯ ನೀಡಬೇಕೆಂದು ಮೊಗವೀರ್ಸ್ ಅಸೋಸಿಯೇಷನ್ ಕುವೈತ್ ಇದರ ಅಧ್ಯಕ್ಷ ರಮೇಶ್ ಕಿದಿಯೂರು ಮನವಿ ಮಾಡಿಕೊಂಡಿದ್ದಾರೆ.
ಉಮೇಶ
ಮರಕಾಲ
ಇವರ
ಮೊಬೈಲ್
ಸಂಖ್ಯೆ
:
9448261537
ಹಾಗೂ
ಬ್ಯಾಂಕ್
ಖಾತೆಯ
ವಿವರ
ಹೀಗಿದೆ.
UMESH
MARAKALA,
A/C
7172500100324401,
IFSC
CODE
KARB0000717,
KARNATAKA
BANK,
Branch-Brahmavara.