For Daily Alerts
ದುಬೈನಲ್ಲಿ ಕನ್ನಡ ಪರಿಣಿತಿ ಪ್ರಮಾಣ ಪತ್ರ ವಿತರಣೆ, ಅಂಕೇಗೌಡರಿಗೆ ಸನ್ಮಾನ
ದುಬೈ, ಏ.17: ಕನ್ನಡ ಪಾಠಶಾಲೆ, ದುಬಾಯಿ ಯುಎಇಯು ಕನ್ನಡ ಪರಿಣಿತಿ ಪ್ರಮಾಣಪತ್ರ ವಿತರಣೆ ಸಮಾರಂಭವನ್ನು ಏ.26ರಂದು ಅಲ್ ಸಫಾ ದುಬೈನ ಜೆಎಸ್ಎಸ್ ಪ್ರೈವೇಟ್ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದೆ.
ಕರ್ನಾಟಕ ಪುಸ್ತಕ ಮನೆಯ ಅಂಕೇ ಗೌಡ, ನಾಗರಾಜ್ ಅವರನ್ನು ಸನ್ಮಾನಿಸಲಾಗುತ್ತಿದೆ. ವಿಶೇಷ ಅತಿಥಿಯಾಗಿ ನಟಿ ಹರ್ಷಿಕಾ ಪೂಣಚ್ಚ ಪಾಲ್ಗೊಳ್ಳಲಿದ್ದಾರೆ. ಫಾರ್ಚೂನ್ ಗ್ರೂಪ್ ಮುಖ್ಯಸ್ಥ ಪ್ರವೀಣ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಪುಸ್ತಕ ಪ್ರೇಮಿಗಳೇ, ಮಂಡ್ಯದಲ್ಲಿ ಒಂದುವಾರ ಸರ್ವಜ್ಞನ ಪುಸ್ತಕ ಮೇಳ
ಜೆಎಸ್ಎಸ್ ಇನ್ಸ್ಟಿಟ್ಯೂಟ್ನ ಅಧ್ಯಕ್ಷ ಡಿಪಿ ಶಿವಕುಮಾರ್, ಕೃಷ್ಣರಾಜತಂತ್ರಿ, ಪ್ರಕಾಶ್ ರಾವ್ ಪಯ್ಯರ್ ಭಾಗವಹಿಸಲಿದ್ದಾರೆ. ಅಂಕೇಗೌಡರು ಪುಸ್ತಕದ ಮೇಲೆ ಅಪಾರ ಪ್ರೀತಿಯುಳ್ಳವರು. ಜನರಿಗೂ ಜ್ಞಾನ ಭಂಡಾರ ನೀಡಬೇಕೆಂಬ ಹಂಬಲದವರಾದ ಇವರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪುಸ್ತಕ ಪ್ರದರ್ಶನ ಏರ್ಪಡಿಸಿ ಶ್ಲಾಘನೆಗೆ ಒಳಗಾಗಿದ್ದಾರೆ.
English summary
Kannada Patashale Dubai is Organising Kannada certificate distribution Programme at Dubain On April 26.