ಬಹ್ರೇನ್ ನಲ್ಲಿ ಬಿಲ್ಲವ ಸಮಾಜದಿಂದ ರಾಧಾ-ಕೃಷ್ಣ ವೇಷ ಸ್ಪರ್ಧೆ
ಬಿಲ್ಲವ ಸಮುದಾಯದ ಗುರು ಸೇವಾ ಸಮಿತಿ- ಬಹ್ರೇನ್ ಬಿಲ್ಲವಾಸ್ ಯಿಂದ ಇತ್ತೀಚೆಗೆ ಬಹ್ರೇನ್ ನ ದಿ ಇಂಡಿಯನ್ ಕ್ಲಬ್ ನಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಧಾ-ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕೃಷ್ಣನಿಂದ ಕಲಿಯಲೇಬೇಕಾದ 10 ಜೀವನ ಪಾಠಗಳು
ಬಹ್ರೇನ್ ದ್ವೀಪ ರಾಷ್ಟ್ರದಲ್ಲಿ ಮೊತ್ತ ಮೊದಲ ಬಾರಿ ಎಲ್ಲ ತುಳುವ - ಕನ್ನಡಿಗರಿಗೆ ಮುಕ್ತವಾಗಿ ಸ್ಪರ್ಧಿಸುವ ಅವಕಾಶವನ್ನು ನೀಡಲಾಯಿತು. ಮೊದಲ ಭಾಗದಲ್ಲಿ ಬಹ್ರೇನ್ ಬಿಲ್ಲವಾಸ್ ನ ಫೇಸ್ ಬುಕ್ ಪುಟದಲ್ಲಿ ಕೇವಲ 10 ದಿನಗಳಲ್ಲಿ 2.37 ಲಕ್ಷಕ್ಕೂ ಮಿಕ್ಕಿದ ವೀಕ್ಷಕರು ನೋಡಿದ್ದರು.
ಸ್ಪರ್ಧೆಯ ಎರಡನೇ ಭಾಗವನ್ನು ದಿ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಪ್ರಥ್ವಿ ಅಂಬರ್, ಡಾ. ನಿಧಿ ಮೆನನ್ ಮತ್ತು ಲೀಲಾಧರ್ ಬೈಕಂಪಾಡಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪಿಲಿ ವೇಷ - ತುಳುನಾಡ ಶೈಲಿಯ ಹುಲಿ ನೃತ್ಯವನ್ನು ಸಾದರಪಡಿಸಿ ನೆರೆದ ಎಲ್ಲಾ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಸಫಲವಾಯಿತು.
ತಂಡದ 9 ಕಲಾವಿದರು ಬಹ್ರೇನ್ ನಲ್ಲಿ ಮೊತ್ತ ಮೊದಲ ಬಾರಿಗೆ ಪಿಲಿ ವೇಷ ಪ್ರದರ್ಶಿಸಿ, ಇತಿಹಾಸಕ್ಕೆ ನಾಂದಿ ಹಾಕಿದರು. ಬಹ್ರೇನ್ ಬಿಲ್ಲವಾಸ್ ಸದಸ್ಯರ, ಇಸ್ಕಾನ್ ಬಹ್ರೇನ್ ಮತ್ತು ರಿದಮ್ ಡ್ಯಾನ್ಸ್ ಗ್ರೂಪ್ ನವರ ಜನಪದೀಯ ಶೈಲಿಯ ಹಾಗೂ ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳು ಗಮನ ಸೆಳೆದವು.
ಈ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾಗಿ ಸ್ವದೇಶಕ್ಕೆ ಮರಳುತ್ತಿರುವ ಬಹ್ರೇನ್ ಬಿಲ್ಲವಾಸ್ ಮಾಜಿ ಅಧ್ಯಕ್ಷ - ಕೃಷ್ಣ ನೈಂಪಳ್ಳಿಯವರನ್ನು ಸನ್ಮಾನಿಸಲಾಯಿತು.
ಸಕಲ ಮಾನಸಿಕ ಸಮಸ್ಯೆಗಳಿಗೆ ಮಹಾಭಾರತದಲ್ಲಿ ಉತ್ತರ: ಐಎಂಎ ಮುಖ್ಯಸ್ಥ
ಬಹ್ರೇನ್ ಬಿಲ್ಲವಾಸ್ ಅಧ್ಯಕ್ಷ ಅಜಿತ್ ಬಂಗೇರ, ದಿ ಇಂಡಿಯನ್ ಕ್ಲಬ್ ಅಧ್ಯಕ್ಷ ಕ್ಯಾಸಿಯಸ್ ಪಿರೇರಾ, ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಪ್ರಾಯೋಜಕತ್ವ ಪ್ರತಿನಿಧಿಗಳಾದ ಇಸಾಕ್ ಮೊಹಮ್ಮದ್ - ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್, ಗಜಾನನ್ ಖೊಲ್ಗಡೆ - ಅಲ್ ಆದಿಲ್ ಸೂಪರ್ ಮಾರ್ಕೆಟ್ ಗಳು, ಉದ್ಯಮಿಗಳಾದ ಸಾಗರ್ ಪೂಜಾರಿ ಮತ್ತು ವಿಶಾಲ್ ಕರ್ಕೆರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಹ್ರೇನ್ ಬಿಲ್ಲವಾಸ್ ಅಧ್ಯಕ್ಷ ಅಜಿತ್ ಬಂಗೇರ ಸಭೆಯನ್ನು ಸ್ವಾಗತಿಸಿದರು. ಪ್ರತಿಮಾ ರಾಜ್ ಮೂಡಬಿದ್ರಿ ಮತ್ತು ಪೂರ್ಣಿಮಾ ಜಗದೀಶ್ ಅವರು ನಿರೂಪಣೆ ಮಾಡಿದರು.