ಶ್ರೀ ಕಾಮಲಾನಂದರ ಮಹಾತ್ಮೆ ಕೇಳಿ ಪುನೀತರಾಗಿ!
ಸುಧಾ ಬರಗೂರು ಅವರಿಂದ ಹಾಸ್ಯ ರಂಜನೆಯಿದ್ದರೆ, ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅವರೊಂದಿಗೆ ಸಂವಾದವಿದೆ. ಜೊತೆಗೆ ಶ್ರೀ ಕಾಮಲಾನಂದ ಮಹಾತ್ಮೆ ಎಂಬ ಹಾಸ್ಯಭರಿತ ಕನ್ನಡ ನಾಟಕವನ್ನು ಆಡಿಸಲಾಗುತ್ತಿದೆ. ನಾಟಕ ರಚಿಸಿದವರು ಮಲ್ಲಿ ಸಣ್ಣಪ್ಪನವರ್.
ಅಕ್ಟೋಬರ್ 6 ಮತ್ತು 7ಕ್ಕೆ ರಂಗುರಂಗಿನ ಕಾರ್ಯಕ್ರಮ ಹಮ್ಮಿಕೊಂಡು 40ನೇ ವಾರ್ಷಿಕೋತ್ಸವ "ರತ್ನ ಮಹೋತ್ಸವ" ಆಚರಿಸಲು ಸಿದ್ದವಾಗಿರುವ ಮಂದಾರ ಕನ್ನಡ ಕೂಟದಲ್ಲಿ ತಮ್ಮ ಬೃಹತ್ ಬ್ರಹ್ಮಾಂಡ ಜ್ಞಾನದ ದರುಶನ ತೋರಿಸಲು ಮಂದಹಾಸರಾಗಿ ಶ್ರೀ ಶ್ರೀ ಕಾಮ-ಲಾನಂದರು ದಯಮಾಡಿಸಲಿದ್ದಾರೆ....
ಕೊಟ್ಟ ಫ್ಲವರ್ ಬಾಡಿ ಹೋಗುವದರಲ್ಲೇ ಕೈಕೊಟ್ಟು ಓಡಿ ಹೋಗುವ ಲವರ್ ಗಳೇ, ಕಲಿಸಿಕೊಟ್ಟ ಗುರುಗಳಿಗೇ ತಿರುಮಂತ್ರ ಹಾಕುವ ಶಿಷ್ಯಂದಿರೇ, ಬನ್ನಿ ಬನ್ನಿ ... ಬಂದು... ಶ್ರೀ ಶ್ರೀ ಕಾಮ-ಲಾನಂದರ ಮಹಾತ್ಮೆಯನ್ನು ನೋಡಿ, ಕಮಲೋಕ್ತಿಯನ್ನು ಕೇಳಿ ಪುನೀತರಾಗಿ!
ನಾಟಕ : ಶ್ರೀ ಕಾಮಲಾನಂದರ ಮಹಾತ್ಮೆ
ರಚನೆ : ಮಲ್ಲಿ ಸಣ್ಣಪ್ಪನವರ್
ನಾಟಕದ ದಿನಾಂಕ ಮತ್ತು ಸಮಯ : 7ನೇ ಅಕ್ಟೋಬರ್, 2012, ಮಧ್ಯಾಹ್ನ 2.30ಕ್ಕೆ
ಸ್ಥಳ : Charles Whitcomb School, 25 Union St, Marlboro MA