ಕಾಂಗರೂ ನಾಡಿನಲ್ಲೊಂದು ಕನ್ನಡ ಶಾಲೆಯ ಜನನ
ಅಡಿಲೇಡ್ ಕನ್ನಡ ಸಂಘದ ಉಪಾಧ್ಯಕ್ಷರಾದ ಉಮೇಶ್ ನಾಗಸಂದ್ರ ಅವರು ಈ ದಂಪತಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಪ್ರೊ. ಧರಣೇಂದ್ರ ಅವರು ದೀಪ ಬೆಳಗುವ ಮೂಲಕ ಕನ್ನಡ ಜ್ಯೋತಿಯನ್ನು ಈ ಕಾಂಗರೂ ನಾಡಿನಲ್ಲಿ ಪಸರಿಸಿದ್ದಾರೆ. ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಸಂದರ್ಭದಲ್ಲಿ, ನೀವು ಇಲ್ಲಿ ಕನ್ನಡ ಶಾಲೆ ಶುರುಮಾಡುತ್ತಿದ್ದೀರಾ. ನಿಮಗೆ ಕನ್ನಡಾಂಬೆ ಆಶೀರ್ವಾದ ಸದಾ ಇರುತ್ತದೆ ಎಂದು ಹಾರೈಸಿದರು.
ಗಾಯತ್ರಿ ಅವರು ಎಲ್ಲರನ್ನೂ ಸ್ವಾಗತಿಸಿ, ಈ ಶಾಲೆ ಅ ಮೂಲ ಉದ್ದೇಶವನ್ನು ವಿವರಿಸಿದರು. ಅಡಿಲೇಡ್ ಇಂಗ್ಲಿಷ್ ಸ್ಕೂಲ್ ನ ಪ್ರಿನ್ಸಿಪಾಲ್ ಆದ ಮಿಸ್ ಜೂಲಿ ಪ್ರೆಸ್ಸರ್ ಅವರು ಕನ್ನಡ ಶಾಲೆ ನಡೆಸಲು ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ. ಎಥ್ನಿಕ್ ಸ್ಕೂಲ್ ನ ಅಧ್ಯಕ್ಷರಾದ ಮಸ್ ಇಂತ ರುಂಪ್ ಮತ್ತು ಅಡಿಲೇಡ್ ಇಂಗ್ಲಿಷ್ ಸ್ಕೂಲ್ ನ ಉಪ ಪ್ರಾಂಶುಪಾಲರಾದ ಬಿನ್ಹ್ ಕುಇನ್ಹ ನ್ಗುಇನ್ ಪಾಲ್ಗೊಂಡಿದ್ದರು. ಕನ್ನಡ ಕಲಿಯುತ್ತಿರುವ ಮಕ್ಕಳು 'ಬಾರಿಸು ಕನ್ನಡ ಡಿಂಡಿಮವ' ಹಾಡನ್ನು ಗಾಯತ್ರಿ ಅವರ ಮಾರ್ಗದರ್ಶನದಲ್ಲಿ ಸುಶ್ರಾವ್ಯವಾಗಿ ಹಾಡಿದರು.
ಶಾಲೆಯ ಕಾರ್ಯಕಾರಿ ಸಮಿತಿಯ ವಿವರ
ಡಾ.
ಉಮೇಶ್
ನಾಗಸಂದ್ರ
-
ಅಧ್ಯಕ್ಷರು
ಕನ್ವಾಲ್
ಸಿಂಗ್-
ಉಪ
ಅಧ್ಯಕ್ಷರು
ಗಾಯತ್ರಿ
ಹಿರೇಮಠ-
ಕಾರ್ಯಕಾರಿಣಿ
ಷಡಕ್ಷರಿ
ಅದವಯ್ಯನ
ಮಠ
-
ಖಜಾಂಜಿ
ನಿಮ್ಮ ಮಕ್ಕಳಿಗೂ ಈ ಅಡಿಲೇಡ್ ನಗರದಲ್ಲಿ ಕನ್ನಡ ಕಲಿಸಬೇಕೆಂಬ ಆಸಕ್ತಿಯಿದ್ದರೆ, ಸಂಪರ್ಕಿಸಿ ಈಮೈಲ್: [email protected] ಅಥವಾ ಉಮೇಶ್ ನಾಗಸಂದ್ರ ಅವರ ದೂರವಾಣಿ ಸಂಖ್ಯೆ 0401 034 456.