ದುಬೈನಲ್ಲಿ ಯುಎಇ ಬಂಟ್ ಬಾಂಧವರ ವಿಹಾರ ಕೂಟ
ಯು.ಎ.ಇ. ಬಂಟ್ಸ್ ಸಂಘಟನೆಯ ಸಂಘಟಕರಾದ ಸರ್ವೋತ್ತಮ ಶೆಟ್ಟಿಯವರು ಯು.ಎ.ಇ.ಯ ವಿವಿಧ ಕಡೆಗಳಿಂದ ಆಗಮಿಸಿದ ಬಂಧು ಮಿತ್ರರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ವೈವಿಧ್ಯಮಯ ಸ್ಪರ್ಧೆಗಳಿಗೆ ವಿವಿಧ ತಂಡಗಳಾಗಿ ರಚಿಸಿ ಸ್ಪರ್ಧೆಗಳನ್ನು ಆಯೋಜಿಸಿದ ಜವಬ್ಧಾರಿಯನ್ನು ರೇಶ್ಮಾ ದೀವೇಶ್ ಆಳ್ವ, ಜಯಶ್ರೀ ಸಂತೋಷ್ ಶೆಟ್ಟಿ, ಚಿತ್ರ ಪ್ರಸನ್ನಾ ಶೆಟ್ಟಿ ಮತ್ತು ದೇವಿಕಾ ಗಣನಾಥ್ ಮಲ್ಲಿ ವಹಿಸಿಕೊಂಡಿದ್ದರು.
ಐದು ವರ್ಷದ ಒಳಗಿನ ಮಕ್ಕಳಿಗೆ ಚಿತ್ರಗಳಿಗೆ ಬಣ್ಣ ತುಂಬುವ ಸ್ಪರ್ಧೆ, ಐದರಿಂದ ಹತ್ತು ವರ್ಷದ ಒಳಗಿನ ಮಕ್ಕಳಿಗೆ ಚಿತ್ರ ರಚನೆ ಮತ್ತು ಕಲರಿಂಗ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಹಿರಿಯರಿಗೆ ಒಂದೊಂದು ಸಂಖ್ಯೆಗಳನ್ನು ನೀಡಿ ಅವರ ಜೊತೆಗಾರ, ಜೊತೆಗಾರ್ತಿಯನ್ನು ಸಂಜೆಯೊಳಗೆ ಹುಡುಕುವ "ಪಿಕ್ನಿಕ್ ಪೇರ್" ಸ್ಪರ್ಧೆಯನ್ನು ನಡೆಸಲಾಯಿತು. ತುಳು ನಾಡಿನ ಬಗ್ಗೆ ರಸಪ್ರಶ್ನೆ ಸ್ಪರ್ಧೆ ಅತ್ಯಂತ ಉತ್ಸಾಹದಿಂದಲೇ ನಡೆಯಿತು.
ಪಾಲಕರಿಗೆ ಹಣ ವರ್ಗಾಯಿಸಿ ಬಹುಮಾನ ಗೆಲ್ಲಿರಿ
ಮಧ್ಯಾಹ್ನದ ರುಚಿಕರ ಭೋಜನದ ವ್ಯವಸ್ಥೆ ವುಡ್ ಲ್ಯಾಂಡ್ ರೆಸ್ಟೋರೆಂಟ್ ನವರದಾಗಿತ್ತು. ದಿನಪೂರ್ತಿ ನಡೆದ ಸ್ಪರ್ಧೆಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಚಿಕ್ನಿ ಚಮೇಲಿ ಪ್ರಥಮ ಸ್ಥಾನ ಪಡೆದು ದ್ವಿತೀಯ ಸ್ಥಾನದಲ್ಲಿ ಚಮಕ್ ಚಮೇಲಿ ಪಡೆಯಿತು. ಕೊನೆಯಲ್ಲಿ ಬಹುಮಾನ ವಿತರಣೆ ನಡೆಯಿತು. ವಿಹಾರ ಕೂಟಕ್ಕೆ ಡಾ.ಚಂದ್ರಕುಮಾರಿ ಆರ್.ಶೆಟ್ಟಿ ಮತ್ತು ಡಾ.ನೀಮಾ ಶರದ್ ಶೆಟ್ಟಿ,ಡಾ. ಶರದ್ ಶೆಟ್ಟಿ, ಸೀಮಾ ನಿರ್ಮನ್ ಶೆಟ್ಟಿಯವರು ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದರು.
ಯು.ಎ.ಇ.ಬಂಟ್ಸ್ 2011ರ ಕಾರ್ಯಕಾರಿ ಸಮಿತಿಯವರಾದ ಜೀವನ್ ರಾಜ ಶೆಟ್ಟಿ ದೀಪಶ್ರೀ ಶೆಟ್ಟಿ, ಸುಭಾಶ್ ಚೌಟ, ಸ್ಮಿತಾ ಚೌಟ, ಜಿತೇಂದ್ರ ಶೆಟ್ಟಿ, ಸುರೇಕಾ ಶೆಟ್ಟಿ, ಮಹೇಶ್ ಶೆಟ್ಟಿ, ಹೇಮಾ ಶೆಟ್ಟಿ, ಅನಿಲ್ ಶೆಟ್ಟಿ, ರೇಖಾ ಶೆಟ್ಟಿ, ಅಶ್ವಿತ್ ಶೆಟ್ಟಿ, ಹರಿಣಿ ಶೆಟ್ಟಿ, ರಶ್ಮೀಕಾಂತ್ ಶೆಟ್ಟಿ, ಮೆಘ್ನಾ ಶೆಟ್ಟಿ, ಪ್ರಸಾದ್ ಶೆಟ್ಟಿ ಮತ್ತು ಶೋಭಾ ಶೆಟ್ಟಿ ಒಗ್ಗಟ್ಟಾಗಿ ವಿಹಾರಕೂಟ ಯಶಸಿಯಾಗಿಸಿದರು.