ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಇ ಚುಟುಕು ಸಮ್ಮೇಳನಾಧ್ಯಕ್ಷರಾಗಿ ದುಂಡಿರಾಜ್

By Prasad
|
Google Oneindia Kannada News

H Dundiraj
ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಅಂಗವಾಗಿ ಆಯೋಜಿಸಲಾಗಿರುವ ಪ್ರಪ್ರಥಮ ಅರಬ್ ಸಂಯುಕ್ತ ಸಂಸ್ಥಾನದ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಚುಟುಕು ಚಕ್ರವರ್ತಿ ಎಚ್. ಡುಂಡಿರಾಜ್ ಅವರು ಅಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ. ಸಮ್ಮೇಳನವನ್ನು ಎಪ್ರಿಲ್ 29, 2011 ಶುಕ್ರವಾರ ಅಪರಾಹ್ನ 3ಕ್ಕೆ ದುಬೈಯ ಫಿಲ್ಡೆಲಿಫಿಯ ಪ್ರೈವೆಟ್ ಶಾಲೆಯ ಸಭಾಂಗಣದಲ್ಲಿ ನೆರವೇರಿಸಲಾಗುವುದು.

ಸಾಮಾನ್ಯರಿಂದ ಅಸಾಮಾನ್ಯರವರೆಗಿನ ಎಲ್ಲರ ಮನ ಮುಟ್ಟುವ ತಮ್ಮ ಚುಟುಕು ಕವನಗಳ ಮೂಲಕ ಕನ್ನಡಿಗರ ಮನೆ ಮಾತಾದ ಡುಂಡಿರಾಜ್ ಅವರ ಏಳು ಕವನ ಸಂಕಲನಗಳು, ಹನ್ನೊಂದು ಚುಟುಕು ಕವನಗಳ ಸಂಕಲನಗಳು, ಒಂಭತ್ತು ನಾಟಕಗಳು ಸೇರಿದಂತೆ ಹತ್ತು ಇತರ ಪ್ರಕಾರದ ಪುಸ್ತಕಗಳು ಪ್ರಕಟಗೊಂಡು ಲೋಕಾರ್ಪಣೆ ಗೊಂಡಿವೆ. ದುಂಡಿರಾಜ್ ಭಾಗವಹಿಸುತ್ತಿರುವುದು ಸಮ್ಮೇಳನದ ಸಂಭ್ರಮವನ್ನು ಹೆಚ್ಚಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಮ್ಮೇಳಾನಕ್ಕೆ ಹಲವಾರು ಪ್ರಖ್ಯಾತ ಲೇಖಕರು, ರಾಜಕೀಯ ಮುಖಂಡರು, ಚಲನಚಿತ್ರ ಹಾಗೂ ರಂಗ ಕಲಾವಿದರು ಅತಿಥಿಗಳಾಗಿ ಆಗಮಿಸಲಿರುವರು. ಸಮ್ಮೇಳನದಲ್ಲಿ ಯು.ಎ.ಇ.ಕನ್ನಡಿಗರಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅವಕಾಶ ನೀಡಲಾಗಿದೆ. ಸಮಾರಂಭಕ್ಕೆ ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬ ಆಚರಣೆಯ ಸಮಿತಿಯ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ವಿನಂತಿಸಿಕೊಂಡಿರುವರು.

ಚುಟುಕು ಕವನ ಓದಬಯಸುವವರು ಸಂಪರ್ಕಿಸಿ : [email protected] ಅಥವಾ [email protected]

ಮಧುಸೂಧನ: 050 7643774
ಗೋಪಿನಾಥ್ ರಾವ್ : 0507659957
ಇರ್ಶಾದ್ ಮೂಡಬಿದ್ರಿ : 0508465981
ಗುರುರಾಜ್ : 050 4643599

ಸಾಂಸ್ಕೃತಿಕ ಕಾರ್ಯಕ್ರಮ ನೀಡಬಯಸುವವರು:
ಸರಳಾ ರಘುಪ್ರಸಾದ್ : 0502242033
ಸೋನಿ ಗುರುರಾಜ್ : 0507545963
ಸಂಧ್ಯಾ ರವಿಕುಮಾರ್ : 0554296260 ಅವರನ್ನು ಸಂಪರ್ಕಿಸಬಹುದು.

English summary
Chutuku kavi H Dundiraj to preside over short poetry convention to be held in Dubai, UAE on April 29, 2011. Prakash Rao Payyar stated in the press release. Poetry enthusiasts can also recite their short poems in the conference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X