ಯುಎಇ ಚುಟುಕು ಸಮ್ಮೇಳನಾಧ್ಯಕ್ಷರಾಗಿ ದುಂಡಿರಾಜ್
ಸಾಮಾನ್ಯರಿಂದ ಅಸಾಮಾನ್ಯರವರೆಗಿನ ಎಲ್ಲರ ಮನ ಮುಟ್ಟುವ ತಮ್ಮ ಚುಟುಕು ಕವನಗಳ ಮೂಲಕ ಕನ್ನಡಿಗರ ಮನೆ ಮಾತಾದ ಡುಂಡಿರಾಜ್ ಅವರ ಏಳು ಕವನ ಸಂಕಲನಗಳು, ಹನ್ನೊಂದು ಚುಟುಕು ಕವನಗಳ ಸಂಕಲನಗಳು, ಒಂಭತ್ತು ನಾಟಕಗಳು ಸೇರಿದಂತೆ ಹತ್ತು ಇತರ ಪ್ರಕಾರದ ಪುಸ್ತಕಗಳು ಪ್ರಕಟಗೊಂಡು ಲೋಕಾರ್ಪಣೆ ಗೊಂಡಿವೆ. ದುಂಡಿರಾಜ್ ಭಾಗವಹಿಸುತ್ತಿರುವುದು ಸಮ್ಮೇಳನದ ಸಂಭ್ರಮವನ್ನು ಹೆಚ್ಚಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಮ್ಮೇಳಾನಕ್ಕೆ ಹಲವಾರು ಪ್ರಖ್ಯಾತ ಲೇಖಕರು, ರಾಜಕೀಯ ಮುಖಂಡರು, ಚಲನಚಿತ್ರ ಹಾಗೂ ರಂಗ ಕಲಾವಿದರು ಅತಿಥಿಗಳಾಗಿ ಆಗಮಿಸಲಿರುವರು. ಸಮ್ಮೇಳನದಲ್ಲಿ ಯು.ಎ.ಇ.ಕನ್ನಡಿಗರಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅವಕಾಶ ನೀಡಲಾಗಿದೆ. ಸಮಾರಂಭಕ್ಕೆ ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬ ಆಚರಣೆಯ ಸಮಿತಿಯ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ವಿನಂತಿಸಿಕೊಂಡಿರುವರು.
ಚುಟುಕು ಕವನ ಓದಬಯಸುವವರು ಸಂಪರ್ಕಿಸಿ : [email protected] ಅಥವಾ [email protected]
ಮಧುಸೂಧನ:
050
7643774
ಗೋಪಿನಾಥ್
ರಾವ್
:
0507659957
ಇರ್ಶಾದ್
ಮೂಡಬಿದ್ರಿ
:
0508465981
ಗುರುರಾಜ್
:
050
4643599
ಸಾಂಸ್ಕೃತಿಕ
ಕಾರ್ಯಕ್ರಮ
ನೀಡಬಯಸುವವರು:
ಸರಳಾ
ರಘುಪ್ರಸಾದ್
:
0502242033
ಸೋನಿ
ಗುರುರಾಜ್
:
0507545963
ಸಂಧ್ಯಾ
ರವಿಕುಮಾರ್
:
0554296260
ಅವರನ್ನು
ಸಂಪರ್ಕಿಸಬಹುದು.