ಸಿಂಗಾರ ಪುರಸ್ಕಾರ ಮತ್ತು ಪ್ರಶಸ್ತಿ ವಿತರಣೆ
ಸಿಂಗಾರ ಆಜೀವ ಪುರಸ್ಕಾರ : ಶೈಕ್ಷಣಿಕ, ಸಾಮಾಜಿಕ ಮತ್ತು ಕಲೆಗಳಲ್ಲಿ ತೊಡಿಗಿಸಿಕೊಂಡು ಅತ್ಯುನ್ನತ ಸಾಧನೆಯನ್ನು ಗೈಯ್ದ ಸಿಂಗಪುರ ಕನ್ನಡಿಗರಿಗೆ ನೀಡುವ ಈ ಪುರಸ್ಕಾರ, ಕನ್ನಡ ಸಂಘ(ಸಿಂಗಪುರ)ದ ಹೆಮ್ಮೆಯ ಪುರಸ್ಕಾರ. ಕನ್ನಡ ಸಂಘದ ಉಪಾಧ್ಯಕ್ಷರಾದ ವಿಜಯ ರಂಗ ಪ್ರಸಾದ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿನ ಅಮೋಘ ಸಾಧನೆಗೈಯ್ದ ಡಾ. ಮೋಹನ್ ಕಾನ್ಕಾನಹಳ್ಳಿ ಅವರ ಸಂಕ್ಷಿಪ್ತ ವಿವರಣೆ ತಿಳಿಸಿದರು. ಕನ್ನಡ ಸಂಘದ ಕಾರ್ಯದರ್ಶಿ ವೆಂಕಟ್ ಅವರು 2011ರ ಸಾಲಿನ ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಸಿಂಗಾರ ಆಜೀವ ಪುರಸ್ಕಾರವನ್ನು ಪಡೆದ ಡಾ. ಆನಂದ ಎಲ್ ಅಕ್ಕಿಹೆಬ್ಬಾಳ್ ಅವರ ಸಂಕ್ಷಿಪ್ತ ವಿವರಣೆಯನ್ನು ತಿಳಿಸಿದರು. ಡಾ.ವಿಜಯ್ ಕುಮಾರ್ ಅವರು ಡಾ.ಮೋಹನ್ ಕಾನ್ಕಾನಹಳ್ಳಿ ಮತ್ತು ಡಾ. ಆನಂದ.ಎಲ್.ಅಕ್ಕಿಹೆಬ್ಬಾಳ್ ಅವರಿಗೆ ಕನ್ನಡ ಸಂಘದ ಪರವಾಗಿ ಪದಕ ಮತ್ತು ಕಾಣಿಕೆಗಳನ್ನು ನೀಡಿ ಗೌರವಿಸಿದರು
ಬೌಲಿಂಗ್ ಸ್ಪರ್ಧೆಯ ಬಹುಮಾನ ವಿತರಣೆ : ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಜಯಶಂಕರ್ ಗೌಡ ನಿರ್ವಹಣೆಯಲ್ಲಿ ಕನ್ನಡ ಸಂಘ ಏರ್ಪಡಿಸಿದ ಬೌಲಿಂಗ್ ಸ್ಪರ್ಧೆಯಲ್ಲಿ ಮೊದಲ ಮತ್ತು ಎರಡನೆಯ ಸ್ಥಾನದ ವಿಜೇತರಿಗೆ ನೀಡಲಾಯಿತು. ಕನ್ನಡ ಸಂಘದ ಮಾಜಿ ಉಪಾಧ್ಯಕ್ಷರಾದ ಜಗದೀಶ್ ಸಿ ವಿ ಅವರು ಪ್ರಶಸ್ತಿಪತ್ರ ಮತ್ತು ಬಹುಮಾನ ವಿತರಿಸಿದರು. ಮಕ್ಕಳ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಚಿತ್ರದ ಸಾರಾಂಶಗಳನ್ನು ಓದಿದ ಮಕ್ಕಳಿಗೆ ರಾಜೇಶ್ವರಿಯವರ ನಿರ್ವಹಣೆಯಲ್ಲಿ, ಪ್ರಮಾಣಪತ್ರ ಸಂಘದ ಅಧ್ಯಕ್ಷರಾದ ಡಾ.ವಿಜಯ್ ಕುಮಾರ್ ಮತ್ತು ಜಗದೀಶ್ ಸಿ.ವಿ ಅವರು ನೀಡಿದರು.