ದುಬೈ ಧ್ವನಿ ಪ್ರತಿಷ್ಠಾನದಿಂದ ಸಾಹಿತಿಗಳಿಗೆ ಆಹ್ವಾನ
ಪ್ರಸ್ತುತ ಧ್ವನಿ ಪ್ರತಿಷ್ಠಾನ ಒಂದು ಹೆಜ್ಜೆ ಮುಂದಿಟ್ಟು ಶ್ರೀಮಂತ ಕನ್ನಡ ಸಾಹಿತ್ಯವನ್ನು ವಿಶ್ವದಾದ್ಯಾಂತ ಪಸರಿಸಲು "ಧ್ವನಿ" ಜಾಗತಿಕ ಕನ್ನಡ ಸಾಹಿತ್ಯ ಇ-ಪತ್ರಿಕೆಯನ್ನು ಪ್ರಕಾಶಿಸಲು ನಿರ್ಧರಿಸಿದೆ. ನವೆಂಬರ್ ಮಾಸಾಂತ್ಯದಲ್ಲಿ ಲೋಕಾರ್ಪಣಗೊಳ್ಳಲಿರುವ ಈ ಮಾಸಿಕ ಇ- ಪತ್ರಿಕೆಯಲ್ಲಿ, ಕನ್ನಡ ಸಂಶೋಧನೆ, ಸಾಹಿತ್ಯ ವಿಮರ್ಶೆ, ರಂಗಭೂಮಿ, ಜಾನಪದ, ಲಲಿತಕಲೆ ಮತ್ತು ಸಂಗೀತ ಮುಂತಾದ ಕ್ಷೇತ್ರಗಳ ಲೇಖನಗಳು ಹಾಗೂ ಕತೆ ಕವನಗಳು ಸೇರಿದಂತೆ ವಿವಿಧ ಸಾಹಿತ್ಯಿಕ ಪ್ರಭೇದದ ಬರಹಗಳನ್ನು ಪ್ರಕಟಿಸಲಾಗುವುದು.
ಸದರಿ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಚಿಂತಕರು, ಸಾಹಿತಿಗಳು ತಮ್ಮ ಬರಹಗಳನ್ನು ಕೆಳಗಿನ ಇ-ಮೈಲ್ ವಿಳಾಸಕ್ಕೆ ಕಳುಹಿಸಿ ಕೊಟ್ಟು ಪ್ರಪಂಚದ ಮೂಲೆ ಮೂಲೆಗಳಲ್ಲಿ ಹಬ್ಬಿರುವ ಕನ್ನಡಿಗರೊಂದಿಗೆ ತಮ್ಮ ಅರಿವನ್ನು ಹಂಚಿಕೊಳ್ಳಬೇಕಾಗಿ ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿಕೊಂಡಿರುವರು.
E-mail:[email protected],
[email protected]
ಅಂಚೆ
ಕಳುಹಿಸಲು
ವಿಳಾಸ
:
Prakash
Rao
Payyar,
P.O.Box:8508,
Dubai,
U.A.E.