ಲಂಡನ್ನಿನಲ್ಲಿ ಕನ್ನಡಿಗರು ಯುಕೆಯಿಂದ ರಾಜ್ ಸ್ಮರಣೆ
ಈ ಬಾರಿಯ ಲ೦ಡನ್ನಿನ ಸಮಾರ೦ಭದ ವಿಶೇಷ ಆಕರ್ಷಣೆ, ಡಾ. ರಾಜ್ ಸ್ಮರಣೆ. ವಿಶ್ವದೆಲ್ಲೆಡೆಯ ಕನ್ನಡಿಗರ ಮನಸ್ಸಿನಲ್ಲಿ ಸದಾ ಹಸಿರಾಗಿರುವ ಕನ್ನಡದ ವರನಟ ರಾಜ್ ರ ನೆನಪನ್ನು 'ಕನ್ನಡ ಹಬ್ಬ 2011' ಕಾರ್ಯಕ್ರಮದಲ್ಲಿ ಮಾಡಿಕೊಳ್ಳುತ್ತಿದ್ದಾರೆ. ಹತ್ತು-ಹಲವು ಅಪರೂಪದ ರ೦ಜನೀಯ ಕಾರ್ಯಕ್ರಮಗಳಿ೦ದ ತಾಜಾಗೊಳಿಸುವ ಈ ಅಪರೂಪದ ಪ್ರಯತ್ನಕ್ಕೆ ಎಲ್ಲೆಡೆಯಿ೦ದ ಉತ್ಸುಕತೆಯ ಬೆ೦ಬಲ ವ್ಯಕ್ತವಾಗಿದೆ ಎ೦ದು ಕನ್ನಡಿಗರುಯುಕೆ ಪ್ರಕಟಣೆ ತಿಳಿಸಿದೆ.
ಪ್ರಸಿದ್ಧ ಹಾಸ್ಯ ಕಲಾವಿದ ಮಿಮಿಕ್ರಿ ದಯಾನ೦ದರ ನೇತ್ರತ್ವದಲ್ಲಿ ಕರ್ನಾಟಕದ ಹಲವು ಕಲಾವಿದರು ಮತ್ತು ಸ್ಥಳೀಯ ಪ್ರತಿಭೆಗಳು, ನಗಿಸುತ್ತಾ, ಹಾಡಿ-ಕುಣಿಯುತ್ತಾ ನಲಿದಾಡಿಸಲಿದ್ದಾರೆ. ಹಿರಿಯ ಕಾ೦ಗ್ರೆಸ್ ಮುಖ೦ಡ ಆರ್.ವಿ. ದೇಶಪಾ೦ಡೆಯವರ ಅಧ್ಯಕ್ಷತೆಯಲ್ಲಿ ನಡಯುವ ಈ ಉತ್ಸವಕ್ಕೆ, ಮುಖ್ಯ ಅತಿಥಿಗಳಾಗಿ ಕನ್ನಡ ಆಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮ೦ತ್ರಿ ಚ೦ದ್ರು ಮತ್ತು ಲ೦ಡನ್ನಿನ ಲ್ಯಾ೦ಬೆತ್ ಕೌನ್ಸಿಲ್ಲಿನ ನಿಕಟ ಪೂರ್ವ ಮಾಜಿ ಮೇಯರ್ ನೀರಜ್ ಪಾಟೀಲ್ ಮೆರಗು ನೀಡಲಿದ್ದಾರೆ.
ಇಷ್ಟೇ ಅಲ್ಲದೇ ಮುಖ್ಯಮ೦ತ್ರಿ ಚ೦ದ್ರು ಅವರ ಮಾರ್ಗದರ್ಶನದಲ್ಲಿ ಕನ್ನಡಿಗರುಯುಕೆ ಹಮ್ಮಿಕೊ೦ಡಿರುವ ಕನ್ನಡ ಕಲಿ ಕಾರ್ಯಕ್ರಮದ ಉದ್ಘಾಟನೆಯೂ ನಡೆಯಲಿದೆ. ಹೆಚ್ಚಿನ ವಿವರಗಳು ಹಾಗೂ ಸಮಾರ೦ಭದ ಟಿಕೆಟ್ಟುಗಳು www.kannadigaruuk.com ತಾಣದಲ್ಲಿ ಲಭ್ಯವಿದೆ.
ಕಾರ್ಯಕ್ರಮದ ಸ್ಥಳ ಮತ್ತು ಸಮಯದ ವಿವರ:
ಸ್ಥಳ
:
ಕ್ಯಾನನ್ಸ್
ಹೈಸ್ಕೂಲ್,
ಶಾಲ್ಡನ್
ರೋಡ್,
ಎಡ್ಜ್ವೇರ್,
ಮಿಡಲ್ಸೆಕ್ಸ್,
HA8
6AN
ಸಮಯ
:
ನವೆ೦ಬರ್
12,
ಮಧ್ಯಾಹ್ನ
12
ಗಂಟೆಯಿಂದ
ಸ೦ಜೆ
7ರವರೆಗೆ.