ಕೇರಿಯಲ್ಲಿ ನವರಾತ್ರಿ ಬೊಂಬೆಗಳ ಹಬ್ಬದ ಸಡಗರ
"ಭಕ್ತಿಯೊಡೆ
ಪರವಶದ
ಭಾವದಲಿ
ನಮಿಸೆ
ಮನದಣಿಯೆ
ಚಿತ್ತಾರ
ರಂಗೋಲೆ
ಬಿಡಿಸೆ
ಸ್ನೇಹ
ಬಳಗವ
ಕರೆದು
ಆದರಿಸಿ
ಓಲೈಸೆ
ಮೈಮರೆತು
ರಾಗದಲಿ
ಗಾನವನು
ಹರಿಸೆ
ಚಾಮುಂಡಿ
ನಲಿಯುವಳು
ಒಲಿಯುವಳು
ನೆಲೆಸುವಳು
ನವರಾತ್ರಿ
ಶುಭವೆಂದು
ದೇವಿ
ಹರಸುವಳು"
ಕನ್ನಡ ಬಾಂಧವರಿಗೆಲ್ಲ ನವರಾತ್ರಿ ಹಬ್ಬದ ಶುಭಾಶಯಗಳು. ಸಂಗೀತದಲ್ಲಿರುವ ಸಾಹಿತ್ಯಾಮೃತದ ರಸಸ್ವಾದವನ್ನು ಗೊಂಬೆಗಳ ಮಾಧ್ಯಮದಲ್ಲಿ ಆಸ್ವಾದಿಸುವ ಆಶಯದಲ್ಲಿ "ಸಂಗೀತ ಸುಧೆ" ಎನ್ನುವ ಪರಿಕಲ್ಪನೆಯಲ್ಲಿ ಈ ವರುಷ ನಾವು ದಸರಾ ಗೊಂಬೆಗಳನ್ನು ಜೋಡಿಸಿದ್ದೇವೆ.
ಕೃಷ್ಣಲೀಲೆಯನ್ನು ಮುಖ್ಯ ವಿಚಾರವನ್ನಾಗಿಟ್ಟುಕೊಂಡು "ಅಚ್ಯುತಂ ಕೇಶವಂ ಕೃಷ್ಣ ದಾಮೋದರಂ ರಾಮ ನಾರಾಯಣಂ ಜಾನಕೀ ವಲ್ಲಭಂ" ಎನ್ನುವ ಹಿಂದಿ ಭಜನೆಗೆ ಹಾಗೂ ಪುರಂದರದಾಸರ ಕೃತಿಗಳಲ್ಲಿ ಕಾಣಬರುವ ಕೃಷ್ಣನ ನಾನಾ ವರ್ಣನೆಗಳ ಸಾರವನ್ನು ಗೊಂಬೆಗಳ ದೃಶ್ಯರೂಪದಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ್ದೇವೆ.
ಇದರೊಡನೆ ದಶಾವತಾರ, ಅಷ್ಟಲಕ್ಷ್ಮಿ, ಜಂಭೂಸವಾರಿ, ಹಳ್ಳಿಯ ಚಿತ್ರಣ ಇತ್ಯಾದಿ ಗೊಂಬೆಗಳ ಸಾಂಪ್ರದಾಯಿಕ ಜೋಡನೆ ಮತ್ತು ವಿವಿಧ ರೀತಿಯಲ್ಲಿ ಗಣೇಶನನ್ನು ಅಲಂಕರಿಸಿ ಆನಂದಿಸಿದ್ದೇವೆ. ನೀವೂ ನೋಡಿ ಆನಂದಿಸುವಿರಿ ಎಂದು ನಮ್ಮ ಆಶಯ.
- ಸವಿತಾ, ರವಿ, ಸಿಂಧು ಮತ್ತು ಸೀಮ, ನಾರ್ತ್ ಕೆರೋಲಿನ