ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಮಾಮಣಿ ಭಟ್ಟರ ಸ್ಪೆಷಲ್ ಕಡುಬು ಊಟ
ಪ್ರವೀಣ ನಡುತೋಟ ಹಾಗೂ ತಂಡದವರು ನಡೆಸಿಕೊಟ್ಟ "ಮಾಗಧ ವಧೆ" ಎಂಬ ಯಕ್ಷಗಾನ ಪ್ರಸಂಗದಲ್ಲಿ ಕಣ್ಣು ಸೆಳೆಯುವ ಉಡುಗೆ ತೊಟ್ಟು ತಮ್ಮ ಪ್ರತಿಭೆ ಮೆರೆದವರೆಲ್ಲ ಅಮೆರಿಕ ವಾಸಿಗಳು ಎನ್ನುವುದು ಎಲ್ಲ ಕನ್ನಡಿಗರಿಗೆ ಹೆಮ್ಮೆ ತರುವಂಥದು. ದೂರದ ಊರಿನಲ್ಲಿ ನಮ್ಮ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಒಂದು ವಿಭಿನ್ನ ಪ್ರಯತ್ನ, ಅದರಲ್ಲಿ ಈ ತಂಡ ಪೂರ್ಣ ಯಶಸ್ಸು ಕಂಡಿತು. ಇದರ ನಂತರ ಖಜಾಂಚಿ ಶಾಂತರಾಜು ಅವರು ಎಲ್ಲರಿಗೂ ವಂದನೆ ಅರ್ಪಿಸಿದರು.
ಮಂದಾರ, ನ್ಯೂ ಇಂಗ್ಲೆಂಡ್ ಕನ್ನಡ ಕೂಟದ ಪ್ರಾಮುಖ್ಯತೆಗೆ ಸಾಕ್ಷಿ ಅನ್ನುವಂತೆ ನಾನೂರಕ್ಕೂ ಮಿಗಿಲಾಗಿ ಜನ ಸೇರಿ ಈ ಕಾರ್ಯಕ್ರಮ ಆನಂದಿಸಿದರು. ಗಣೇಶ ದೇಸಾಯಿ ಅವರು ಹಾಡಿದ "ಎದೆ ತುಂಬಿ ಹಾಡಿದೆನು ಅಂದು ನಾನು" ಅನ್ನು ಮೆಲುಕು ಹಾಕುತ್ತಾ ಮನೆಗೆ ಹೊರಟಾಗ ರಾತ್ರಿ ಹನ್ನೊಂದು ಮೀರಿತ್ತು. ಸ್ನೇಹಿತರ ಜೊತೆ ರಂಗಿನ ಕಾರ್ಯಕ್ರಮಗಳನ್ನು ನೋಡುತ್ತಾ ಕಾಲ ಹೋಗಿದ್ದು ತಿಳಿಯಲೇ ಇಲ್ಲ ಅಂತ ಸ್ನೇಹಿತರೊಬ್ಬರು ಉಲಿದಾಗ ಮುಗುಳ್ನಗೆಯಿಂದ ನನ್ನ ಸಹಮತ ಸೂಚಿಸಿದೆ.
Comments
English summary
Ganeshotsava was celebrated in a grand fashion at New England Kannada Koota (NEKK) on September 24. Americannadigas gathered in huge number to make the function a grand success. A report by Madhusudhan Akkihebbal.
Story first published: Thursday, September 29, 2011, 16:13 [IST]