ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೃಂದಾವನ ವಿಹಾರದಲ್ಲಿ ಸದಾನಂದ ವಿಶ್ವನಾಥ್

By Prasad
|
Google Oneindia Kannada News

Sadanand Vishwanath
ಬೃಂದಾವನ ಕನ್ನಡ ಕೂಟದ ಈ ವರ್ಷದ ಪಿಕ್‌ನಿಕ್, ಬೃಂದಾವನ ವಿಹಾರವನ್ನು ಇದೇ ಶನಿವಾರ ಜುಲೈ 16ರಂದು ಬಹಳ ಅದ್ದೂರಿಯಾಗಿ ನಡೆಸಿಕೊಡಲಾಯಿತು. ಪ್ರಖ್ಯಾತ ಮಾಜಿ ಕ್ರಿಕೆಟ್ ಆಟಗಾರ ಸದಾನಂದ್ ವಿಶ್ವನಾಥ್ ಅವರು ಮುಖ್ಯ ಅತಿಥಿಗಳಾಗಿ ಈ ಹೊರಾಂಗಣ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕ್ರಿಕೆಟ್ ಅಭಿಮಾನಿಗಳಲ್ಲಿ ಮಿಂಚಿನ ಸಂಚಲನವನ್ನು ಮೂಡಿಸಿದ್ದರು.

ಪ್ರತಿವರ್ಷದಂತೆ ಬೃಂದಾವನ ಕನ್ನಡ ಕೂಟದ ಕನ್ನಡಿಗರಿಗೆ ಈ ವರ್ಷದ ಬೇಸಿಗೆ ವಿಹಾರದಲ್ಲಿ ತಮ್ಮ ಆತ್ಮೀಯರನ್ನು, ಬಂಧು-ಮಿತ್ರರನ್ನು ಭೇಟಿ ಮಾಡುವ ಸದವಕಾಶವನ್ನು ಒದಗಿಸುವುದರ ಜೊತೆಗೆ ಹಮ್ಮಿಕೊಂಡ ಅನೇಕ ಆಟೋಟ ಕಾರ್ಯಕ್ರಮಗಳಲ್ಲೂ ಭಾಗವಹಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಎರಡು ವರ್ಷದ ಎಳೆಯರಿಂದ ಹಿಡಿದು 85ರ ಹಿರಿಯರವರೆಗೆ ಕೆಲವು ತಲೆಮಾರುಗಳು ಒಂದೇ ಕಾರ್ಯಕ್ರಮದಡಿ ಸೇರುವ ಮಹಾವಕಾಶ ಇದಾಗಿತ್ತು.

ಗಮನ ಸೆಳೆದ ಅಂಶಗಳು:

* ಮಕ್ಕಳು ಅಮೇರಿಕನ್ ರೆಡ್‌ಕ್ರಾಸ್‌ಗೆಂದು ಒಂದು ಚಾರಿಟಿ ಬೂತ್ ತೆರೆದು ಅದರ ಮೂಲಕ ಸೋಡಾ, ನೀರು, ಐಸ್ ಕ್ರೀಮ್ ಹಾಗೂ ತುಳಸಿ ಮೊದಲಾದ ಗಿಡಗಳನ್ನು ಮಾರುವುದರ ಮೂಲಕ ಸುಮಾರು ನೂರೈವತ್ತು ಡಾಲರುಗಳನ್ನು ಸಂಗ್ರಹಿಸಿದರು.

* ಖ್ಯಾತ ಕ್ರಿಕೆಟ್ ಪಟು ಹಾಗೂ ಅಂಪೈರ್ ಸದಾನಂದ್ ವಿಶ್ವನಾಥ್ ಅವರು ನಡೆಸಿಕೊಟ್ಟ ಕ್ರಿಕೆಟ್ ಮ್ಯಾಚ್ ಟೈನಲ್ಲಿ ಕೊನೆಗೊಂಡಿತು.

* ಮಕ್ಕಳು ಮತ್ತು ಹಿರಿಯರು ಭಾಗವಹಿಸಿ ಬಹಳ ಕುತೂಹಲ ಮೂಡಿಸಿದ್ದ ಟಗ್ ಆಫ್ ವಾರ್ ಆಟ ಹಗ್ಗ ತುಂಡಾವುದರೊಂದಿಗೆ ಕೊನೆಗೊಂಡಿತು.

* ಸುಮಾರು ಐವತ್ತು ಹೊಸ ಕನ್ನಡ ಕುಟುಂಬಗಳು ಬೃಂದಾವನ ಕನ್ನಡ ಕೂಟವನ್ನು ಸೇರಿಕೊಂಡವು.

* ಹಿರಿಯರು ಹಾಗೂ ಕಿರಿಯರು ಒಟ್ಟಿಗೆ ಸೇರಿ ಬಹಳ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು, ಶುಭ್ರ ಬೇಸಿಗೆ ಬಿಸಿಲಿನ್ನು ಛೇಡಿಸಿ ಸುಂದರವಾದ ಬಣ್ಣದ ಗಾಳಿಪಟವೊಂದು ಹಾಯಾಗಿ ನೀಲಿಯಲ್ಲಿ ತೇಲುತ್ತಿತ್ತು.

English summary
Brindavana Kannada Koota had a memorable picnic 2011 on July 16. Former cricket player Sadananda Vishwanath was the chief guest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X