ಏ.9ರಂದು ಮೆಲ್ಬರ್ನ್ ಕನ್ನಡ ಸಂಘದ ರಜತೋತ್ಸವ
25 ವಸಂತಗಳನ್ನು ಕಂಡ ಮೆಲ್ಬರ್ನ್ ಕನ್ನಡ ಸಂಘದ ಇತಿಹಾಸದಲ್ಲಿ ಇದೊಂದು ಹೊಸ ಮೈಲಿಗಲ್ಲು. ಮೆಲ್ಬರ್ನಿನ ಸ್ಪ್ರಿಂಗ್ ವೇಲ್ ನಲ್ಲಿರುವ ಸ್ಪ್ರಿಂಗ್ ವೇಲ್ ಟೌನ್ ಹಾಲ್ ನಲ್ಲಿ ಈ ಕಾರ್ಯಕ್ರಮವನ್ನು ನಡೆಸಲಿದ್ದು, ಸಂಘವು ಇಡೀ ದಿನದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಂಘದ ಅಧ್ಯಕ್ಷೆ ಉಮಾ ಪಾಟೀಲ್ ಹಾಗು ರಜತೋತ್ಸವ ಆಚರಣೆಯ ಅಧ್ಯಕ್ಷರಾದ ಡಾ. ಹನುಮಂತ ರೆಡ್ಡಿಯವರ ಮೇಲ್ವಿಚಾರಣೆಯಲ್ಲಿ ಸಿದ್ಧತೆ ನಡೆದಿದೆ.
ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಡಾ. 'ಮುಖ್ಯಮಂತ್ರಿ' ಚಂದ್ರು, ಖ್ಯಾತ ಸಾಹಿತಿ ಡಾ. ಎಸ್.ಎಲ್. ಭ್ಯೆರಪ್ಪ, ಪ್ರಣಯರಾಜ ಡಾ. ಶ್ರೀನಾಥ್, ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಇತರರು ಈ ರಜತೋತ್ಸವಕ್ಕೆ ಅತಿಥಿಗಳಾಗಿ ಆಗಮಿಸಲಿದ್ದು, ವಿಶೇಷ ಅತಿಥಿಗಳಾಗಿ ಸ್ಥಳೀಯ ವಿಕ್ಟೋರಿಯಾದ Planning Minister, Matthew Guy, State Member for South Eastern Metropolitan Region, Inga Peulich, MLC ಮತ್ತು City of Greater Dandenong ಮೇಯರ್ Cr. Roz Blades ರವರು ಪಾಲ್ಗೊಳ್ಳಲಿದ್ದಾರೆ.
ಮೆಲ್ಬರ್ನಿನ ಕನ್ನಡಿಗರಿಗೆ ಸಂಗೀತದ ರಸದೌತಣ ಉಣಿಸಲು ಖ್ಯಾತ ಹಿನ್ನೆಲೆ ಗಾಯಕರಾದ ಜೈಹೋ ಖ್ಯಾತಿಯ ವಿಜಯ್ ಪ್ರಕಾಶ್, ಅರ್ಚನಾ ಉಡುಪ ಮತ್ತು ತಂಡದವರು ಸಹ ಆಗಮಿಸಲಿದ್ದಾರೆ. ಮತ್ತು ಮೆಲ್ಬರ್ನಿನ ಸ್ಥಳೀಯ ಕನ್ನಡ ಕಲಾವಿದರುಗಳು ಸಹ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲಿದ್ದಾರೆ.
ಕಾರ್ಯಕ್ರಮದ ವಿಶೇಷಗಳು
*
ಡಾ.
ಎಸ್ಎಲ್
ಭೈರಪ್ಪರವರ
ಜೊತೆ
ಸಾಹಿತ್ಯ
ಸಂವಾದ.
*
ಕ್ಯಾಪ್ಟನ್
ಗಣೇಶ್
ಕಾರ್ಣಿಕ್
ಅವರ
ಜೊತೆ
ಪರಸ್ಪರ
ಮಾತುಕತೆ.
*
ರಜತೋತ್ಸವದ
ಸ್ಮರಣ
ಸಂಚಿಕೆ
ಬಿಡುಗಡೆ
*
ಅತಿಥಿಗಳೊಂದಿಗೆ
ಸಂವಾದ
*
ಮೆಲ್ಬರ್ನಿನ
ಸ್ಥಳೀಯ
ಕನ್ನಡ
ಕಲಾವಿದರ
ಕಾರ್ಯಕ್ರಮ
*
ಮೆಲ್ಬರ್ನ್
ಕನ್ನಡ
ಸಂಘದ
ಗ್ರಂಥಾಲಯದಿಂದ
ನೆನಪಿನ
ಕಾಣಿಕೆಯಾಗಿ
ಕನ್ನಡ
ಪುಸ್ತಕ
*
ಕನ್ನಡ
ಗ್ರಂಥಾಲಯದ
ಪುಸ್ತಕಗಳ
ಪ್ರದರ್ಶನ
ಈ ರಜತೊತ್ಸವದಲ್ಲಿ ಭಾಗವಹಿಸುವವರಿಗೆ ನೊಂದಣಿ ಮತ್ತು ಕಾರ್ಯಕ್ರಮದ ಸಂಪೂರ್ಣ ವಿವರಗಳನ್ನು www.mks.org.au ಪ್ರಕಟಿಸಲಾಗಿದೆ.