ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲಿಕಾನ್ ವ್ಯಾಲಿಯಲ್ಲಿ ಶ್ರೀ ಕೃಷ್ಣ ಸಂಧಾನ ನಾಟಕ

By Prasad
|
Google Oneindia Kannada News

Vallisha Shastry
ಸಿಲಿಕಾನ್ ವ್ಯಾಲಿಯಲ್ಲಿ ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಸಂಘದ ವತಿಯಿಂದ ಮತ್ತೆ ಕೃಷ್ಣ ಪ್ರತ್ಯಕ್ಷವಾಗಲಿದ್ದಾನೆ. ಅಂದರೆ, ಕನ್ನಡದ ಪ್ರಖ್ಯಾತ ಹಾಸ್ಯ ನಾಟಕ "ಶ್ರೀ ಕೃಷ್ಣ ಸಂಧಾನ" ನಾಟಕವು ಇದೇ ಜನವರಿ 29ರಂದು ಪಾಲೋ ಆಲ್ಟೋ ನಗರದ ಗನ್ ಹೈಸ್ಕೂಲ್ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. (ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ www.kknc.org)

ದಕ್ಷಿಣ ಕ್ಯಾಲಿಫೋರ್ನಿಯಾದ ರಂಗಧ್ವನಿ ನಾಟಕ ಸಂಸ್ಥೆ ಈ ನಾಟಕವನ್ನು ಪ್ರದರ್ಶಿಸಲಿದೆ. ರಂಗಧ್ವನಿ ನಾಟಕ ಸಂಸ್ಥೆ ಕಳೆದ 5-6 ವರ್ಷಗಳಿಂದ ಅಮೆರಿಕೆಯ ಹಲವಾರು ಸ್ಥಳಗಳಲ್ಲಿ ಹಲವಾರು ನಾಟಕಗಳನ್ನು ಪ್ರದರ್ಶಿಸಿ ಹೆಸರು ಮಾಡಿದೆ. ಈ ನಾಟಕ ಸಂಸ್ಥೆಯ ಜನಪ್ರಿಯ ನಾಟಕಗಳು "ಯಮನ ಕಾಲ್ ಸೆಂಟರ್", "ಹಾಲಿವುಡ್ನಲ್ಲಿ ಯಮ", "ಜೋಕುಮಾರಸ್ವಾಮಿ", "ಪಶ್ಚಾತ್ತಾಪ", "ತಿರುಗೇಟು". ಎಲ್ಲಾ ನಾಟಕಗಳೂ ಅಮೆರಿಕೆಯಾಧ್ಯಂತ ಹಲವಾರು ಪ್ರದರ್ಶನಗೊಂಡಿವೆ. ಶ್ರೀ ಕೃಷ್ಣ ಸಂಧಾನ ನಾಟಕ ರಂಗಧ್ವನಿಯ 8ನೇ ಪ್ರದರ್ಶನ. ಕನ್ನಡಿಗರು ಬಂದು ಈ ಹಾಸ್ಯ ನಾಟಕವನ್ನು ನೋಡಿ ನಕ್ಕು ನಲಿಯಬೇಕಾಗಿ ಕೋರಿಕೆ.

ನಾಟಕದ ವಿವರ
ರಚನೆ :
ವಿಎಸ್ ಅಶ್ವಥ್
ನಿರ್ದೇಶನ : ವಲ್ಲೀಶ ಎಂ ವಿ ಶಾಸ್ತ್ರಿ

ಪಾತ್ರ ಪರಿಚಯ
1. ನಾಟಕದ ಮೇಷ್ಟ್ರು : ವಲ್ಲೀಶ ಎಂ ವಿ ಶಾಸ್ತ್ರಿ
2. ದುರ್ಯೋಧನ : ಡಾ|| ಮಾರುತಿ ಪ್ರಸಾದ್
3. ದುಶ್ಯಾಸನ : ಶಂಕಂ ಜಗನ್ನಾಥ್
4. ಶ್ರೀ ಕೃಷ್ಣ : ಸೋಮಶೇಖರ್
5. ಸಂಗಮೇಶ್ವರ : ವೆಂಕಟೇಶ್ ಎಂ. ಸಿ.
6. ಭೀಷ್ಮ : ಶ್ರೀನಿವಾಸ್ ಟಿ ವಿ
7. ವಿಧುರ : ವಿಜಯ್ ಕೊಟ್ರಪ್ಪ
8. ಶಕುನಿ : ಅರುಣ್ ಮಾಧವ್
9. ರುಕ್ಮಿಣಿ : ಮೀನಾ ಅರುಣ್ ಮಾಧವ್

ಪ್ರಸಾಧನ : ವಿದ್ಯಾ ವಲ್ಲೀಶ್
ಉಡಿಗೆ ತೊಡಿಗೆ : ಯಶವಂತ್ ದೇಶಪಾಂಡೆ, ಗುರು ನಾಟಕ ಸಂಸ್ಥೆ, ಹುಬ್ಬಳ್ಳಿ. [ಕನ್ನಡ ನಾಟಕ]

English summary
Kannada play Sri Krishna Sandhana, written by playwrite VS Ashwath, is being staged by Rangadhwani troup in North California. The play is directed by Vallisha Shastry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X