ಶಾಂಘೈ ಕನ್ನಡ ಸಂಘ ಉದ್ಘಾಟನೆ
ಹಚ್ಚೇವು ಕನ್ನಡದ ದೀಪ.. ಹಾಡಿನೊಂದಿಗೆ ಶಾಂಘೈ ಕನ್ನಡ ಸಂಘವನ್ನು ಹಿರಿಯರಾದ ಶಂಕರ ರವಿಕುಮಾರ ಅವರು ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ 7 ಜನ ಭಾಗವಹಿಸಿದ್ದರೂ ಸಹ ಸ್ಥಳೀಯ ಕನ್ನಡಿಗರಿಗೆ ಕನ್ನಡ ಸಂಘದ ನೆರಳು ಸಾಧ್ಯವಾಗುತ್ತಿರುವುದಕ್ಕೆ ಶಂಕರ್ ಅತೀವವಾದ ಹೆಮ್ಮೆ ಮತ್ತು ಸಂತೋಷ ವ್ಯಕ್ತಪಡಿಸಿದರು. ಸಂಘದ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವುದಕ್ಕೆ ಶ್ರಮಿಸುವುದಾಗಿ ಈ ಸಂದರ್ಭದಲ್ಲಿ ಎಲ್ಲರೂ ಪಣತೊಟ್ಟರು. ಇದೇ ಸಮಯದಲ್ಲಿ ತೆಗೆದುಕೊಂಡ ಕೆಲ ಪ್ರಮುಖ ನಿರ್ಣಯಗಳು ಇಂತಿವೆ.
ಆರ್ಕುಟ್ ಹಾಗೂ ಫೇಸ್ಬುಕ್ ಗಳಲ್ಲಿ ಶಾಂಘೈ ಕನ್ನಡ ಸಮುದಾಯದ ಪುಟಗಳನ್ನು ತೆರೆಯುವುದು. ಶಾಂಘೈಯಲ್ಲಿ ನಡೆಯುವ ಭಾರತೀಯರ ಯಾವುದೇ ಕಾರ್ಯಕ್ರಮಗಳಲ್ಲಿ ಕನ್ನಡ ಕಾಣುವುದೇ ಇಲ್ಲ. ಇದು ಖೇದಕರ. ಈ ಕೊರತೆಯನ್ನು ಹೋಗಲಾಡಿಸಲು ಈ ಕನ್ನಡ ಗುಂಪಿನ ಮೂಲಕ ದನಿ ಎತ್ತುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಕನ್ನಡಿಗರ ಮುಂದಿನ ಮಿಲನ ದಿನಾಂಕವನ್ನು ಬರುವ ಜೂನ್ 5, 6ಕ್ಕೆ ನಿಗದಿಪಡಿಸಲಾಯಿತು. ಆ ವೇಳೆಗೆ ಕನಿಷ್ಠ 35 ಕನ್ನಡಿಗರನ್ನು ಕೂಡಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಚೀನಾದಲ್ಲಿ ನೆಲೆಸಿರುವ ಕನ್ನಡಿಗರು ಶ್ರೀಕಾಂತ ಕಲಕೋಟಿ ಅವರನ್ನು ಸಂಪರ್ಕಿಸಿ.