ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈ ಕನ್ನಡಿಗ ಸುರೇಶ್ ಕುಕ್ಕಿಲಾಯ ನಿಧನ

By Staff
|
Google Oneindia Kannada News

Dubai Kannadiga Suresh Kukkilaya
ದುಬೈ, ಜು, 22 : ಸ್ಥಳೀಯ ಕನ್ನಡ ಸಂಘದ ಸಕ್ರಿಯ ಕಾರ್ಯಕರ್ತ, ವೃತ್ತಿಯಿಂದ ಹೆಸರಾಂತ ಲೆಕ್ಕ ಪರಿಶೋಧಕರಾಗಿದ್ದ ಸುರೇಶ್ ಕುಕ್ಕಿಲಾಯ ಅವರು ಹೃದಯಾಘಾತದಿಂದ ನಿಧನಹೊಂದಿದರು. ಬೆಂಗಳೂರಿಗೆ ತಡವಾಗಿ ತಲುಪಿದ ವರದಿಗಳ ಪ್ರಕಾರ ಸುರೇಶ್ ಅವರು ಕಳೆದ 16ರಂದು ಹೃದಯಾಘಾತಕ್ಕೆ ತುತ್ತಾದರು. ಅಂತ್ಯಕ್ರಿಯೆ ಇಂದು ದುಬೈನಲ್ಲಿ ನಡೆಯಲಿದೆ.

ಸುರೇಶ್ ಅವರು ಶಿವಳ್ಳಿ ಬ್ರಾಹ್ಮಣ ವರ್ತುಲಕ್ಕೆ ಸೇರಿದವರು. ಉಡುಪಿ ಸಮೀಪದ ಉಪ್ಪೂರಿನವರಾಗಿದ್ದ ಸುರೇಶ್ ಪ್ರತಿಭಾ ಸಂಪನ್ನರಾಗಿದ್ದರು. ಕಾಲೇಜು ವ್ಯಾಸಂಗ ದಿನಗಳಿಂದಲೇ ಎಲ್ಲ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಾ ಬಂದವರು. ಮ್ಯಾನೇಜ್ ಮೆಂಟ್ ಅಕೌಂಟೆನ್ಸಿಯಲ್ಲಿ ಸ್ನಾತಕೋತ್ತರ ಪದವಿಗಳಿಸಿದ ನಂತರ ಅವರು ನಾನಾ ಸಂಸ್ಥೆಗಳಲ್ಲಿ ಲೆಕ್ಕ ಪರಿಶೋಧಕರಾಗಿ ದುಡಿದಿದ್ದರು.

ಕೆಎಸ್ಐಡಿಸಿ, ಕ್ಯಾಂಪ್ಕೊ, ಫ್ಯಾಕ್ಟ್ ಕೆಮಿಕಲ್ಸ್ ಕಂಪನಿಗಳಲ್ಲಿ ಉನ್ನತ ಹುದ್ದೆ ನಿರ್ವಹಿಸಿದ ನಂತರ ಅವರು ಮಂಗಳೂರಿನಲ್ಲಿ ತಮ್ಮದೇ ಆದ ಕುಕ್ಕಿಲಾಯ ಅಂಡ್ ಕಂಪನಿಯನ್ನು ತೆರೆದಿದ್ದರು. 1993ರಲ್ಲಿ ದುಬೈಗೆ ಸ್ಥಳಾಂತರಗೊಂಡ ಸುರೇಶ್ ಇಲ್ಲಿನ ಮಾರ್ಟಿನ್ ಕಾಕ್ಸ್ ಅಂಡ್ ಅಸೋಸಿಯೇಟ್ಸ್ ಕಂಪನಿಯಲ್ಲಿ ಮುಖ್ಯ ಲೆಕ್ಕ ಪರಿಶೋಧಕರಾಗಿ ಕೆಲಸ ಮಾಡುತ್ತಿದ್ದರು. ಕನ್ನಡ ಸಂಘ, ಲಯನ್ಸ್ ಕ್ಲಬ್ ಚಟುವಟಿಕೆಗಳಲ್ಲಿ ಅವರು ಸಕ್ರಿಯರಾಗಿದ್ದರು. ಮೃತರು ಪತ್ನಿ ರಂಜನಿ ಸುರೇಶ್, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

(ಮಾಹಿತಿ :ಸರ್ವೋತ್ತಮ ಶೆಟ್ಟಿ,ದುಬೈ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X