ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್‌, ಅನುಪ್ರಭಾಕರ್‌ ಜೊತೆ ‘ಕಾವೇರಿ’ಯುಗಾದಿ

By Staff
|
Google Oneindia Kannada News

Srinathತವರಿನ ಹಬ್ಬಗಳನ್ನು ಆಚರಿಸುವಲ್ಲಿ ಯಾವತ್ತೂ ಹಿಂದೆ ಬೀಳದ ವಾಷಿಂಗ್ಟನ್‌ ಡಿ.ಸಿ.ಯ ಕಾವೇರಿ ಕನ್ನಡ ಸಂಘ ಯುಗಾದಿ ಹಬ್ಬದ ಆಚರಣೆಗೂ ಭರದ ಸಿದ್ಧತೆ ನಡೆಸಿದೆ. ಏಪ್ರಿಲ್‌ 12ರ ಶನಿವಾರ ಕಾವೇರಿಯಲ್ಲಿ ಯಗಾದಿಯ ಬೇವುಬೆಲ್ಲ .

ಕಾವೇರಿ ಕನ್ನಡ ಸಂಘದ ಹಬ್ಬ ಎಂದರೆ ಪೂಜೆ ಪುನಸ್ಕಾರ ಹಾಗೂ ಊಟಕ್ಕಷ್ಟೇ ಸೀಮಿತವಾಗಿರುವುದಿಲ್ಲ . ಅಲ್ಲಿರುತ್ತದೆ ಹಾಡು, ಹಾಡಿನೊಂದಿಗೆ ಕುಣಿತ, ಒಟ್ಟಿನಲ್ಲಿ ಮನರಂಜನೆ. ಅಂದಹಾಗೆ, ಈ ಬಾರಿಯ ಯುಗಾದಿಗೆ ಏನಪ್ಪಾ ವಿಶೇಷ ?

Anu Prabhakarವಿಶೇಷ ಸಾಕಷ್ಟಿದೆ. ಎಂದಿನಂತೆ ಹಾಡು ಕುಣಿತದ ಮೋಜು ಇದ್ದೇ ಇರುತ್ತದೆ. ಇದರೊಂದಿಗೆ ಕನ್ನಡ ಚಿತ್ರರಂಗದ ಖ್ಯಾತ ತಾರೆಗಳು ಕಾವೇರಿಯ ಯುಗಾದಿ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇದು ಸಾಧ್ಯವಾದಲ್ಲಿ ಹಬ್ಬ ಕಳೆಕಳೆಯಾಗಿರುವುದರಲ್ಲಿ ಸಂದೇಹವಿಲ್ಲ .

ಎಲ್ಲವೂ ಅಂದುಕೊಂಡಂತೆ ಆದರೆ, ಕನ್ನಡ ಸಿನಿ ಕಲಾವಿದರೊಂದಿಗೆ ಕಾವೇರಿ ಕಲಾವಿದರು ಬೇವುಬೆಲ್ಲ ಸವಿಯಬಹುದು. ಕಾವೇರಿ ನಿರೀಕ್ಷಿಸುತ್ತಿರುವ ತಾರೆಗಳಾದರೂ ಯಾರು ಯಾರೆಂದುಕೊಂಡಿದ್ದೀರಿ- ಪ್ರಣಯರಾಜ (ಉದಯ ಟೀವಿಯ) ಶ್ರೀನಾಥ್‌ ಹಾಗೂ ಅವರ ಪತ್ನಿ ಗೀತಾ, ಜಯಂತಿ, ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಂದ್ರಶೇಖರ್‌, ಶಿವರಾಂ, ಅನು ಪ್ರಭಾಕರ್‌, ಕರಿ ಬಸವಯ್ಯ, ಅಭಿಜಿತ್‌, ಕೃಷ್ಣಕುಮಾರ್‌ ಮತ್ತು ಅಮೂಲ್ಯ ದೀಪಕ್‌.

ಕಾರ್ಯಕ್ರಮ ನಡೆಯುವ ಸ್ಥಳವನ್ನು ಗುರುತು ಹಾಕಿಕೊಳ್ಳಿ : Montgomery Blair High School, 51 University Boulevard East, Silver Spring, Maryland 20901

ಮನರಂಜನಾ ಕಾರ್ಯಕ್ರಮದ ನಂತರ ಭರ್ಜರಿ ಹಬ್ಬದ ಊಟವೂ ಇದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರವೇಶ ಶುಲ್ಕವುಂಟು. ಶುಲ್ಕದ ವಿವರಗಳು :

ಮಹಾ ಪೋಷಕರು : 100 ಡಾಲರ್‌ (ಪ್ರತಿ ಕುಟುಂಬಕ್ಕೆ)
ಪೋಷಕರು : 50 ಡಾಲರ್‌
ಇತರರು : ಕಾವೇರಿ ಸದಸ್ಯರಿಗೆ ತಲಾ 8 ಡಾಲರ್‌. ಇತರರಿಗೆ 12 ಡಾಲರ್‌.

5 ವರ್ಷದೊಳಗಿನ ಮಕ್ಕಳಿಗೆ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ಗುಂಪು ರಿಯಾಯಿತಿ ಹಾಗೂ ಇತರ ರಿಯಾಯಿತಿಗಳೂ ಉಂಟು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ -

ಸಂಜಯ್‌ ಎಸ್‌.ರಾವ್‌ : 703-442-3316
ರಾಮ್‌ ರಾವ್‌ : 301-528-3578

ಇ-ಮೇಲ್‌ ವಿಳಾಸ : [email protected]
ವೆಬ್‌ಸೈಟ್‌ : http://www.kaveri-usa.org/events.html

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X