ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲಿಷ್‌ನಲ್ಲಿ ಅಮೃತಬಳ್ಳಿ ಕಷಾಯ ; ಅನುವಾದಿಸಬಲ್ಲಿರಾ?

By Staff
|
Google Oneindia Kannada News

Jayantha Kaikiniಹೊಸ ತಲೆಮಾರಿನ ಬರಹಗಾರರ ಪೈಕಿ ಸಂಚಲನೆ ಸೃಷ್ಟಿಸಿರುವ ಜಯಂತ ಕಾಯ್ಕಿಣಿಯವರ ‘ಅಮೃತಬಳ್ಳಿ ಕಷಾಯ’ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಬಿ.ಎಚ್‌.ಶ್ರೀಧರ್‌ ಪ್ರಶಸ್ತಿಗಳು ಸಂದಿವೆ. ಹೀಗಾಗಿ ‘ಅಮೃತಬಳ್ಳಿ ಕಷಾಯ’ ಕೃತಿಗೆ ಅಂತರರಾಷ್ಟ್ರೀಯ ಮಾನ್ಯತೆ ದಕ್ಕಿಸಿಕೊಡಬೇಕೆಂಬುದು ದಕ್ಷಿಣ ಕ್ಯಾಲಿಫೋರ್ನಿಯಾದ ‘ಸಾಹಿತ್ಯ ಗೋಷ್ಠಿ’ಯ ಕನಸು.

ಈ ಮಹತ್ತರ ಯೋಜನೆಗೆ ಬೇಗ ಚಾಲನೆ ಕೊಡಲು ಸಾಹಿತ್ಯ ಗೋಷ್ಠಿ ತೀರ್ಮಾನಿಸಿದೆ. ವಿಶ್ವನಾಥ್‌ ಹುಲಿಕಲ್‌ ನೇತೃತ್ವದಲ್ಲಿ ಸಂಪಾದಕ ಮಂಡಳಿಯೂ ರಚಿತವಾಗಿದೆ. ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಪಳಗಿರುವ ಕೈಗಳಿಗೆ ಕಾಯ್ಕಿಣಿಯವರ ‘ಅಮೃತಬಳ್ಳಿ ಕಷಾಯ’ ಸಂಕಲನದ ಕತೆಗಳನ್ನು ಇಂಗ್ಲಿಷಿಗೆ ಅನುವಾದಿಸುವ ಅವಕಾಶವಿದೆ. ಅನುವಾದಿತ ಕತೆಗಳನ್ನು ಗುರುತಿಸಿಕೊಂಡಿರುವ ಪ್ರಕಾಶಕರಿಂದ ಸಂಕಲನದ ರೂಪದಲ್ಲಿ ಪ್ರಕಟಿಸಲಾಗುವುದು.

ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ ಮಾಡಬಲ್ಲ ಮನಸ್ಸು ನಿಮ್ಮದೇ? ಹಾಗಿದ್ದರೆ ಅನುವಾದಕ್ಕೆ ಮುಂದಾಗಿ. ಅನುವಾದಕರಿಗೆ ಕೆಲವು ಸೂಚನೆಗಳು-

  • ಕನ್ನಡ ಸಣ್ಣ ಕತೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು.
  • ಸಾರಕ್ಕೆ ಧಕ್ಕೆ ತರದಂತೆ ಪರಿಣಾಮಕಾರಿಯಾಗಿ ಕತೆಯನ್ನು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಬೇಕು.
  • ಅಂತರರಾಷ್ಟ್ರೀಯ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆಗೆ ಕೈಹಾಕಿರುವುದರಿಂದ, ಅಂತರರಾಷ್ಟ್ರೀಯ ಗುಣಮಟ್ಟದ ಇಂಗ್ಲಿಷ್‌ ಬರವಣಿಗೆ ಕೈಹತ್ತಿರುವುದು ಅವಶ್ಯಕ.
  • ಕತೆಯ ಸೆಳಕು- ಸೌಂದರ್ಯ, ಸಂಸ್ಕೃತಿ ಹಾಗೂ ಪ್ರಾದೇಶಿಕತೆಗೆ ಚ್ಯುತಿಯಾಗದಂತೆ ಅನುವಾದ ಮಾಡುವ ಚಾಕಚಕ್ಯತೆ ಇರಬೇಕು.
  • ಅನುವಾದದಲ್ಲಿ ಸಾಕಷ್ಟು ಪಳಗಿದ್ದರೆ ಒಳ್ಳೆಯದು. ಅನುಭವ ಕಡ್ಡಾಯವೇನೂ ಅಲ್ಲ.
ಇಷ್ಟೆಲ್ಲಾ ಏಗಬಲ್ಲ ಬರಹಗಾರ ನಿಮ್ಮೊಳಗಿದ್ದರೆ ತಕ್ಷಣವೇ ವಿಶ್ವನಾಥ್‌ ಹುಲಿಕಲ್‌ ಅವರಿಗೆ ಇ- ಮೇಲ್‌ ಮಾಡಿ. ಅವರ ಇ- ವಿಳಾಸ : [email protected].

ಇ- ಮೇಲ್‌ನಲ್ಲಿ ನೀವು ಬರೆಯಬೇಕಾದ ವಿವರಗಳು-
1. ನಿಮ್ಮ ಹೆಸರು, ಸಂಪರ್ಕಿಸಬೇಕಾದ ಪೂರ್ಣ ವಿಳಾಸ (ಫೋನ್‌ ನಂಬರ್‌ ಸೇರಿ), ಅನುವಾದದಲ್ಲಿ ಅನುಭವ (ಇದ್ದರೆ).
2. ಯಾವುದಾದರೂ ನಿಮಗಿಷ್ಟವಾಗಿರುವ ಕನ್ನಡ ಸಣ್ಣಕತೆಯನ್ನು ಇಂಗ್ಲಿಷ್‌ಗೆ ಅನುವಾದ ಮಾಡಿ ಕಳುಹಿಸಿ. ಮೂಲ ಕತೆಯ ವಿವರಗಳನ್ನು ಬರೆಯಲು ಮರೆಯಬೇಡಿ.
ಇಷ್ಟೆಲ್ಲವನ್ನೂ ನೀವು ಜನವರಿ 15, 2003ರೊಳಗೆ ಕಳುಹಿಸಬೇಕು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X