ಆಗಸ್ಟ್ 3ರಂದು ಅಮೆರಿಕನ್ನಡಿಗರ ಕೈಗೆ ‘ಮಾತಿನ ಮಂಟಪ’
ದಟ್ಸಕನ್ನಡ.ಕಾಂನ 'ಹೊಂಬೆಳಕ ಹೊನಲಿ’ನ ಮುತ್ತಿನ ಹನಿಗಳೆಲ್ಲ ಈಗ ಹೊತ್ತಗೆಯಲ್ಲಿ ಅಡಕ. ಶಿಕಾರಿಪುರ ಹರಿಹರೇಶ್ವರರ ಮೂಸೆಯಲ್ಲಿ ಮೂಡಿರುವ ಲೇಖನಗಳ ಸೇರಿಸಿ 'ಮಾತಿನ ಮಂಟಪ’ ಪುಸ್ತಕವಾಗಿಸಿರುವುದು ಬೆಂಗಳೂರಿನ ಸಪ್ನ ಬುಕ್ ಹೌಸ್. ಆಗಸ್ಟ್ 3ರಂದು ಈ ಪುಸ್ತಕ ಅಮೆರಿಕಾದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಬಳಗ ಪುಸ್ತಕ ಬಿಡುಗಡೆ ಸಮಾರಂಭವನ್ನು ಆಯೋಜಿಸಿದೆ.
ಗಾಂಧಿ ಸಾಹಿತ್ಯ ಸಂಘ, ಮಲ್ಲೇಶ್ವರಂ, ಬೆಂಗಳೂರಿನ ಗಣ್ಯ ಹಾಗೂ ಲೇಖಕ ನೀಲತ್ತಹಳ್ಳಿ ಕಸ್ತೂರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಆಗಸ್ಟ್ 3, ಶನಿವಾರ ಮಧ್ಯಾಹ್ನ 3ರಿಂದ ಸಂಜೆ 6 ಗಂಟೆವರೆಗೆ ಬಿಡುವು ಮಾಡಿಕೊಂಡು ಸನ್ನಿವೇಲ್ ಹಿಂದೂ ಟೆಂಪಲ್ ಮತ್ತು ಕಮ್ಯುನಿಟಿ ಸೆಂಟರ್, ಕ್ಯಾಲಿಫೋರ್ನಿಯಾಗೆ ಬನ್ನಿ. ಕನ್ನಡದ ಸಮೃದ್ಧ ಬರಹಗಾರರಾದ ಎಂ.ವಿ.ನಾಗರಾಜ ರಾವ್ ಪುಸ್ತಕ ಬಿಡುಗಡೆ ಮಾಡುವರು. ಅಲಮೇಲು ಅಯ್ಯಂಗಾರ್, ಜ್ಯೋತಿ ಮಹಾದೇವ ಮತ್ತು ಡಾ. ನರಸ್ ಭಟ್ ಹರಿಹರೇಶ್ವರರ 'ಮಾತಿನ ಮಂಟಪ’ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವರು.
ಅಷ್ಟೇ ಅಲ್ಲ, ರವಿ ರವೀಂದ್ರನಾಥ್ ಮತ್ತು ಸಂಧ್ಯಾ ರವೀಂದ್ರನಾಥ್, ಹರಿಹರೇಶ್ವರರು ಬರೆದಿರುವ ಕೆಲವು ಹಾಡುಗಳನ್ನೂ ಹಾಡಲಿದ್ದಾರೆ. ಈ ಹಾಡುಗಳಿಗೆ ರಾಗ ಕಟ್ಟಿದವರು ರವಿ. ವೇದೋಚ್ಚಾರದ ಮೂಲಕ ವಿದ್ವಾನ್ ಗಜಾನನ ಜೋಷಿ ಅವರು ಹರಿಹರೇಶ್ವರರಿಗೆ ಆಶೀರ್ವಚನ ನೀಡುವರು.
ಸಹೃದಯ ಬಳಗ ಅಲ್ಲಿರಬೇಕು. 'ಮಾತಿನ ಮಂಟಪ’ ನೆಪ, ಅದು ಅನುಭವ ಮಂಟಪವಾಗಲಿ.
ಹೆಚ್ಚಿನ
ವಿವರಗಳು
ಬೇಕಿದ್ದರೆ
ನಿಮ್ಮ
ಸಹಾಯಕ್ಕೆ
ಇವರೆಲ್ಲ
ಇದ್ದಾರೆ-
ನಾಗಲಕ್ಷ್ಮಿ
ಹರಿಹರೇಶ್ವರ
(209)
957-
6825
ವಿಜಯ
ಜೋಷಿ
(925)
934-
9919
ವಿಶ್ವನಾಥ್
ಮರವಂತೆ
(408)
253-
4007
ರಾಮ್ಪ್ರಸಾದ್
(510)
489-
7190
(ಇನ್ಫೋ
ವಾರ್ತೆ)