ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಸಿಎ ಸಮುದಾಯದ ಜೊತೆ ಮೇ 27 ರಂದು ವೀರಪ್ಪ ಮೊಯ್ಲಿ

By Staff
|
Google Oneindia Kannada News

Meet Veerappa Moily at KCA on 27th Mayಜೊತೆಯಾಗಿ ನಡೆಯೋಣ, ಕೊಟ್ಟ , ಸಾಗರದೀಪ ಕೃತಿಗಳ ಲೇಖಕ ಗೊತ್ತಾ ? ತಕ್ಷಣ ನೆನಪಾಗುವುದು ಕಷ್ಟ . ಈ ಕೃತಿಗಳ ಲೇಖಕ ಮಾಜಿ ಮುಖ್ಯಮಂತ್ರಿಯೂ ಹೌದು ಎಂದಾಗ ತಟ್ಟನೆ ನೆನಪಾಗುತ್ತಾರೆ- ವೀರಪ್ಪ ಮೊಯ್ಲಿ .

ಇಪ್ಪತ್ತನಾಲ್ಕು ತಾಸೂ ರಾಜಕಾರಣ ಎನ್ನುವವರ ಸಾಲಿಗೆ ಮೊಯ್ಲಿ ಸೇರಿದವರಲ್ಲ . ಅವರೊಳಗೊಬ್ಬ ರಾಜಕಾರಣಿ, ಆಡಳಿತಗಾರನಿದ್ದಂತೆ ಬರಹಗಾರನೂ ಇದ್ದಾನೆ. ಮೊಯ್ಲಿ ತನ್ನೊಳಗಿನ ಬರಹಗಾರನನ್ನು ರಮಿಸುವ ಯತ್ನದಲ್ಲಿ ಕೊಟ್ಟದಂಥ ಕಾದಂಬರಿ ಹುಟ್ಟುತ್ತದೆ. ರಾಮಾಯಣ ಮಹಾಕಾವ್ಯ ವರ್ತಮಾನದ ಕನ್ನಡಿಯಲ್ಲಿ ಮೈತಳೆಯುತ್ತದೆ.

ಮೊಯ್ಲಿ ಅವರನ್ನು ಇದ್ದಕ್ಕಿದ್ದಂತೆ ನೆನಪಿಸಿಕೊಳ್ಳಲು ಕಾರಣ ಒದಗಿಸಿಕೊಟ್ಟಿದ್ದು -
ದಕ್ಷಿಣ ಕ್ಯಾಲಿಫೋರ್ನಿಯಾ ಕನ್ನಡ ಸಾಂಸ್ಕೃತಿಕ ಸಂಘದ ಕಾರ್ಯಕ್ರಮ. ಮೇ ತಿಂಗಳ 27 ರ ಸೋಮವಾರ ನಡೆಯುವ ಕೆಸಿಎ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಮೊಯ್ಲಿ ಅವರೇ ಕೇಂದ್ರಬಿಂದು. ಅದೊಂದು ರೀತಿಯ ಸಂತೋಷ ಕೂಟ. ಇದೇ ಸಂದರ್ಭದಲ್ಲಿ ಕೆಸಿಎ ಸಮುದಾಯವನ್ನು ಉದ್ದೇಶಿಸಿ ಮೊಯ್ಲಿ ಮಾತನಾಡುವರು. ಅವರ ಮಾತಿನ ವಿಷಯ- ವರ್ತಮಾನದ ಕರ್ನಾಟಕ ಹಾಗೂ ಭವಿಷ್ಯದ ಭರವಸೆಗಳು.

ಕಾರ್ಯಕ್ರಮ ಮಾತಿಗಷ್ಟೇ ಸೀಮಿತವಲ್ಲ ; ಲಘು ಉಪಾಹಾರ ಹಾಗೂ ಕಾಫಿಯೂ ಇದೆ. ಕಾರ್ಯಕ್ರಮ ನಡೆಯುವ ಸ್ಥಳ : Sanathana Dharma Temple on Pioneer Blvd in Artesia.

ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗೆ ಬಿ.ಎನ್‌.ನಾಗರಾಜ್‌ ಅವರನ್ನು (ದೂರವಾಣಿ ಸಂಖ್ಯೆ: 7144411420) ಸಂಪರ್ಕಿಸಬಹುದು.
(ಇನ್ಫೋ ವಾರ್ತೆ)

ಮೊಯ್ಲಿ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X