ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೆಸಿಎ ‘ಸಂಗಮ’ಕ್ಕೆ ಬರಹಗಳು ಬೇಕಾಗಿವೆ, ಬರೆಯುವಂಥವರಾಗಿ
ದಕ್ಷಿಣ
ಕ್ಯಾಲಿಫೋರ್ನಿಯಾದ
ಕರ್ನಾಟಕ
ಸಾಂಸ್ಕೃತಿಕ
ಸಂಘ
(ಕೆಸಿಎ)
ಪ್ರತಿ
ವರ್ಷದಂತೆ
ಈ
ವರ್ಷವೂ
ತನ್ನ
ವಾರ್ಷಿಕ
ಸಂಕಲನವಾದ
‘ಸಂಗಮ’
ಕೃತಿಯನ್ನು
ಪ್ರಕಟಿಸಲು
ನಿರ್ಧರಿಸಿದೆ.
ಏಪ್ರಿಲ್
2003,
ಯುಗಾದಿ
ಹೊತ್ತಿಗೆ
‘ಸಂಗಮ’
ಸಿದ್ಧವಾಗಲಿದೆ.
ಕೆಸಿಎ
ಈಗಾಗಲೇ
ಪೂರ್ವ
ತಯಾರಿಯಲ್ಲಿ
ತೊಡಗಿದೆ.
ಬೇಗ
ಪೆನ್ನು-
ಪೇಪರೆತ್ತಿಕೊಳ್ಳಿ
ಅಥವಾ
ಕಂಪ್ಯೂಟರ್
ಮುಂದೆ
ಪ್ರತಿಷ್ಠಾಪನೆಯಾಗಿ
ಬರಹಗಳ
ಬಿತ್ತನೆ
ಶುರುಮಾಡಿ.
ಬರೆಯುವ
ಮುನ್ನ
ಇವನ್ನು
ಓದಿಕೊಳ್ಳಿ-
- ಬರಹಗಳು ಇಂಗ್ಲಿಷ್ ಅಥವಾ ಕನ್ನಡದಲ್ಲೇ ಇರಬೇಕು. [2 81/2 x 11 page, font size 10, Arial lettering (if in English) single space format.]
- ಜನರ ಆಸಕ್ತಿಗೆ ಪೂರಕವಾದ ಬರಹಗಳು, ಸಣ್ಣಕತೆಗಳು, ಕವನಗಳು, ನಗೆ ಚಟಾಕಿಗಳು, ಸೂಕ್ತಿಗಳಿಗೆ ಸ್ವಾಗತ.
- ಅನನ್ಯ ಮತ್ತು ಅಪರೂಪದ ಒಳ್ಳೆಯ ಅನುಭವಗಳೂ ಪ್ರಕಟಣೆಗೆ ಅರ್ಹ.
- ಬರಹಗಳನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಸಂಪೂರ್ಣ ಹಕ್ಕು ಸಂಪಾದಕೀಯ ಮಂಡಳಿಗೆ ಇರುತ್ತದೆ.
- ಕೆಸಿಎ ಸದಸ್ಯರ ಬರಹಗಳಿಗೆ ಆದ್ಯತೆ ಕೊಡಲಾಗುವುದು.
- ಕೆಸಿಎ ಚಟುವಟಿಕೆಗಳಿಗೆ ಸಂಬಂಧಿಸಿದ ಫೋಟೋಗಳು ನಿಮ್ಮ ಬಳಿ ಇದ್ದು, ಅವನ್ನು ಹಂಚಿಕೊಳ್ಳುವ ಮನಸ್ಸಿದ್ದರೆ ನಮಗೆ ತಿಳಿಸಿ.
- ಬರಹಗಳು ಫೆಬ್ರುವರಿ 21, 2003, ಶುಕ್ರವಾರದೊಳಗೆ ತಲುಪಬೇಕು.
- ಬರಹಗಳನ್ನು ಕಳುಹಿಸಲು ದಾರಿ- B.N.Nagaraj, 901, Ashton Place Fullerton, CA 928331401, Tel No. 7144411420, Fax No. 7144412716, E mail- bnagaraj@aol .com.
- ವೈಯಕ್ತಿಕ ಅಥವಾ ವಾಣಿಜ್ಯ ಜಾಹೀರಾತುದಾರರು ಹಾಗೂ ದೇಣಿಗೆದಾರರು ‘ಸಂಗಮ’ದ ಪ್ರಕಟಣೆಯ ಖರ್ಚು ತೂಗಿಸಲು ಪ್ರಾಯೋಜನೆ ಮಾಡಬೇಕಾಗಿ ವಿನಂತಿ.
- ನಿಮ್ಮ ಬೆಲೆ ಬಾಳುವ ಸಲಹೆ, ಸಹಕಾರಕ್ಕೆ ಸ್ವಾಗತ.
ಬಿ.ಎನ್.ನಾಗರಾಜ್- ಅಧ್ಯಕ್ಷರು, ಕೆಸಿಎ- ಮುಖ್ಯ ಸಂಪಾದಕ
ಹರೀಶ್ ಕುಮಾರ್- ನಿರ್ದೇಶಕ, ಕೆಸಿಎ- ಸಹ ಸಂಪಾದಕ
ಶಂಖಂ ಜಗನ್ನಾಥ್- ನಿರ್ದೇಶಕ, ಕೆಸಿಎ- ಸಹ ಸಂಪಾದಕ
ನಾಗನ ಗೌಡ- ಕಾರ್ಯದರ್ಶಿ, ಕೆಸಿಎ
ಲಕ್ಷ್ಮಿ ಕೃಷ್ಣಮೂರ್ತಿ- ಖಜಾಂಚಿ. ಕೆಸಿಎ
ಅರ್ಚನ ಪ್ರಕಾಶ್- ಯೂತ್ ಗ್ರೂಪ್
ಮುಕುಂದ್ ಹಾಲ್ತೊರೆ
ವಲ್ಲೀಶ ಶಾಸ್ತ್ರಿ
ಪ್ರತಿಭ ಭಗವತ್
ಆರತಿ ಮಗಂತಿ
(ಇನ್ಫೋ ವಾರ್ತೆ)
Story first published: Sunday, December 1, 2002, 5:30 [IST]