ಕ್ಯಾಲಿಫೋರ್ನಿಯಾ ‘ಎಸ್ಸಿಸಿಎ’ ಸಮಾವೇಶದಲ್ಲಿ ಘಮ್ಮೆಂದ ಕನ್ನಡ ಕಾಫಿ !
*ವರದಿ : ವಿ.ಎಂ.ಕುಮಾರಸ್ವಾಮಿ
ಕ್ಯಾಲಿಫೋರ್ನಿಯಾದಲ್ಲಿ ಕಾಫಿಯ ಘಮ!
ಕಾಫಿ ಎಂದ ಮೇಲೆ ಕನ್ನಡಿಗರು ಇರಲೇಬೇಕಲ್ಲವೇ, ಅದು ಕನ್ನಡಿಗರೇ ಕೇಂದ್ರವಾದ ಕಾರ್ಯಕ್ರಮ. ‘ಎಸ್ಸಿಸಿಎ’ 14 ನೇ ವಿಶೇಷ ವಾರ್ಷಿಕ ಕಾಫಿ ಸಮಾವೇಶದಲ್ಲಿ ಕನ್ನಡಿಗ ಕಾಫಿ ಬೆಳೆಗಾರರಿಂದ ತಮ್ಮ ಹೆಮ್ಮೆಯ ಕಾಫಿ ಪ್ರದರ್ಶನ. ಸಮಾವೇಶ ಹಾಗೂ ಪ್ರದರ್ಶನ ನಡೆದದ್ದು 2002 ನೇ ಇಸವಿ, ಮೇ 3 ರಿಂದ 6 ರವರೆಗೆ. ಸ್ಥಳ : ಕ್ಯಾಲಿಫೋರ್ನಿಯಾದ Anaheim Convention Center.
ಎಸ್ಸಿಎಎ 14 ನೇ ಸಮಾವೇಶ ಹಾಗೂ ಪ್ರದರ್ಶನದ ಹಿನ್ನೆಲೆಯಲ್ಲಿ - ಎಸ್ಸಿಎಎ (Speciality Coffee Association of America) ಕಾಫಿ ವಹಿವಾಟಿಗೆ 20 ವರ್ಷ ತುಂಬಿದ ಸಂಭ್ರಮವಿತ್ತು . ಸಮಾವೇಶದಲ್ಲಿದ್ದುದು ಕೇವಲ ಕಾಫಿಯ ಘಮಲು ಮಾತ್ರವಲ್ಲ ; ಅಲ್ಲಿ ಶಿಕ್ಷಣದ ಸ್ಪರ್ಶವೂ ಇತ್ತು . ಸದಸ್ಯರ ಅಗತ್ಯ ಅನುಕೂಲತೆಗಳಿಗಾಗಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ಏರ್ಪಾಡಾಗಿದ್ದವು.
ರೋಸ್ಟರ್, ರೋಸ್ಟರ್-ರಿಟೇಲರ್, ರಿಟೇಲರ್- ಸಿಂಗಲ್ ಯುನಿಟ್, ರಿಟೇಲರ್- ಮಲ್ಟಿ ಯುನಿಟ್, ಪ್ರೊಡ್ಯೂಸರ್ ಈ ಕುರಿತು ತಿಳಿವಳಿಕೆ ನೀಡುವ ಕಾರ್ಯಕ್ರಮಗಳಿದ್ದವು. ಕಳೆದ ವರ್ಷದ ಸಮಾವೇಶದ ಯಶಸ್ಸಿನ ಹಿನ್ನೆಲೆಯಲ್ಲಿ ಈ ವರ್ಷದ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು . ಶುಕ್ರವಾರ (ಮೇ 3) ದಿನವಿಡೀ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು . ಉಳಿದ ಮೂರು ದಿನಗಳ ಕಾಲ ಕುಶಲತೆಯನ್ನು ಹೆಚ್ಚಿಸಿಕೊಳ್ಳುವ ಕುರಿತು ಕಮ್ಮಟವನ್ನು ನಡೆಸಲಾಯಿತು. ಕಲಿಕೆಗೆ, ಹೊಸತರ ಅರಿವಿಗೆ ಪ್ರತಿಯಾಬ್ಬರಲ್ಲೂ ಹುಮ್ಮಸ್ಸು ; ಕಾರ್ಯಾಗಾರಕ್ಕೆ ಅಭೂತಪೂರ್ವ ಯಶಸ್ಸು .
ಎಚ್.ಬಿ.ರಾಜಗೋಪಾಲ್, ಕುರಿಯನ್ ಹಾಗೂ ಜೇಕಬ್ ಮಮ್ಮೆನ್ ಅವರು ಕರ್ನಾಟಕ ಕಾಫಿ ಬೆಳೆಗಾರರನ್ನು ಸಮಾವೇಶದಲ್ಲಿ ಪ್ರತಿನಿಧಿಸಿದ್ದರು. ಭಾರತೀಯ ಕಾಫಿ ಬೋರ್ಡ್ ದೇಶೀಯ ಕಾಫಿಯನ್ನು ಬೆಂಬಲಿಸಲು ಬೂತೊಂದನ್ನು ರೂಪಿಸಿತ್ತು . ಅಂದಹಾಗೆ, ಭಾರತದಲ್ಲಿ ಉತ್ಪಾದನೆಯಾಗುವ ಕಾಫಿಯಲ್ಲಿ ಪ್ರತಿಶತ 80 ರಷ್ಟು ಕರ್ನಾಟಕದಲ್ಲೇ ಬೆಳೆಯುತ್ತದೆ. ಡಾ. ವೈ. ರಘುರಾಮುಲು ಹಾಗೂ ಬಸವರಾಜು ಭಾರತೀಯ ಕಾಫಿ ಬೋರ್ಡನ್ನು ಸಮಾವೇಶದಲ್ಲಿ ಪ್ರತಿನಿಧಿಸಿದ್ದರು.
ಸಮಾವೇಶದಲ್ಲಿ ಎಲ್ಲ ರಾಷ್ಟ್ರಗಳ ಪ್ರತಿನಿಧಿಗಳೂ ಭಾಗವಹಿಸಿದ್ದರು. ಅಮೆರಿಕನ್ನರೊಂದಿಗೆ ಭಾರತೀಯರು ಸಂಬಂಧ ವೃದ್ಧಿಸಿಕೊಳ್ಳಲು ಈ ಸಮಾವೇಶವೊಂದು ವೇದಿಕೆಯೂ ಆಗಿತ್ತು . 2003 ನೇ ಇಸವಿಯ ಎಸ್ಸಿಎಎ ಸಮಾವೇಶ ಏಪ್ರಿಲ್ 25 ರಿಂದ 28 ರವರೆಗೆ, Boston,Massachusets - ಇಲ್ಲಿ ನಡೆಯಲಿದೆ. ಯಥಾ ಪ್ರಕಾರ ಅಲ್ಲಿಯೂ ಭಾರತ- ಕನ್ನಡಿಗರೇ ಕೇಂದ್ರಬಿಂದು.
Quick
Links
For
The
Conference
:
ವಾರ್ತಾ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು