ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೆಸಿಎ ಮಕ್ಕಳ ಪ್ರಶಸ್ತಿಗೆ ಹೆಸರು ಸೂಚಿಸಿ..
ಕರ್ನಾಟಕ ಸಾಂಸ್ಕೃತಿಕ ಸಂಘ ತನ್ನ ಬಳಗದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ‘ ಕನ್ನಡ ಸಂಸ್ಕೃತಿ ಜಾಗೃತಿ ಪ್ರಶಸ್ತಿ ’ (Kannada Cultural Awareness Award) ಯನ್ನು ನೀಡುತ್ತಿದೆ. ಈ ಬಾರಿಯ ಪ್ರಶಸ್ತಿಗಾಗಿ ನಾಮಪತ್ರಗಳನ್ನು ಆಹ್ವಾನಿಸಲಾಗಿದೆ.
ಕೆಸಿಎ ಯುವಜನತೆ ಹಾಗೂ ಮಕ್ಕಳಿಗೆ ಪ್ರಶಸ್ತಿ ಮುಕ್ತವಾಗಿದೆ. ಹೈಸ್ಕೂಲ್ನಲ್ಲಿ ಓದುತ್ತಿರುವ ಕನ್ನಡಿಗ ಮಕ್ಕಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕನ್ನಡ ಮೌಲ್ಯಗಳನ್ನು ಯುವಜನತೆಯಲ್ಲಿ ವೃದ್ಧಿಸುವುದು ಪ್ರಶಸ್ತಿಯ ಉದ್ದೇಶ.
ಪ್ರಶಸ್ತಿ ಆಯ್ಕೆ ವಿಧಾನ :
-
ಕನ್ನಡ
ಭಾಷೆಯ
ಬೆಳವಣಿಗೆಗೆ
ಕೊಡುಗೆಯನ್ನು
ಸಲ್ಲಿಸಿರುವ
ಯಾವುದಾದರೂ
ವ್ಯಕ್ತಿಯ
ಬಗ್ಗೆ
ಸುಮಾರು
ಒಂದೂವರೆ
ಸಾವಿರ
ಪದಗಳ
ಪ್ರಬಂಧ
ಬರೆದು
ಕಳಿಸುವುದು.
-
ಪ್ರಬಂಧದಲ್ಲಿ
ಉಲ್ಲೇಖಿಸಿರುವ
ಮಾಹಿತಿಗಳ
ಪ್ರಸ್ತುತಪಡಿಸುವಿಕೆಯ
ಆಧಾರದ
ಮೇಲೆ
ಹಾಗೂ
ಪ್ರಬಂಧದಲ್ಲಿ
ಸಾಧಕರ
ಪರವಾಗಿರುವ
ವಾದವನ್ನು
ಪ್ರಶಸ್ತಿ
ನೀಡುವಲ್ಲಿ
ಪ್ರಮುಖವಾಗಿ
ಪರಿಗಣಿಸಲಾಗುವುದು.
-
ಪ್ರಶಸ್ತಿ
ವಿಜೇತರನ್ನು
ಈ
ವರ್ಷದ
ಕೆಸಿಎ
ಸಾಂಸ್ಕೃತಿಕ
ರಾಯಭಾರಿ
ಎಂದು
ಗುರುತಿಸಲಾಗುವುದು.
-
2003
ನೇ
ಇಸವಿಯ
ಫೆಬ್ರವರಿಯಲ್ಲಿ
ನಡೆಯುವ
ಕೆಸಿಎ
ಸಮಾರಂಭದಲ್ಲಿ
ಪ್ರಶಸ್ತಿ
ಪ್ರದಾನ
ಮಾಡಲಾಗುವುದು.
-
ಪ್ರಶಸ್ತಿಯು
ಟ್ರೋಫಿ
ಹಾಗೂ
200
ಡಾಲರುಗಳ
ನಗದನ್ನು
ಒಳಗೊಂಡಿದೆ.
-
2003
ರ
ಜನವರಿ
15ರೊಳಗೆ
ನಾಮಪತ್ರಗಳು
ಕೆಸಿಎಯನ್ನು
ತಲುಪಬೇಕು.
-
ಹೆಸರು,
ಸಮರ್ಪಕ
ವಿಳಾಸ,
ಓದುತ್ತಿರುವ
ತರಗತಿ
ಹಾಗೂ
ಸ್ವ
ಮಾಹಿತಿಯನ್ನು
ನಾಮಪತ್ರದಲ್ಲಿ
ಉಲ್ಲೇಖಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ರಮೇಶ್ ಬಸವಪಟ್ಣ : (310)252-6247
(ಇನ್ಫೋ ವಾರ್ತೆ)
Comments
Story first published: Wednesday, November 6, 2002, 5:30 [IST]