ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗಜಂಗಮ ಬಿ.ವಿ.ಕಾರಂತರಿಗೆ ಭೂಮಿಕಾ ನಮನ

By Staff
|
Google Oneindia Kannada News

B.V. Karanthಭಾರತೀಯ ರಂಗಭೂಮಿಯಲ್ಲೀಗ ಸೂತಕದ ಕಳೆ. ಸೆಪ್ಟೆಂಬರ್‌ 1ರಂದು ರಂಗಕರ್ಮಿ ಬಿ. ವಿ. ಕಾರಂತರು ದೀರ್ಘ ಕಾಲದ ಅಸ್ವಸ್ಥತೆಯ ನಂತರ ಕಾಲವಾದರು. ರಂಗ ನಿರ್ದೇಶಕ, ಹೊಸ ಅಲೆಯ ಚಿತ್ರಗಳಿಗೆ ಸಂಗೀತ ನೀಡಿ, ಹಿಂದಿ ಹಾಗೂ ಕನ್ನಡ ಕಲಾವಿದರ ವಲಯದಲ್ಲಿ ದುಡಿದ ಕಾರಂತರ ಅಸಂಖ್ಯ ಶಿಷ್ಯರು ಅನಾಥ ಪ್ರಜ್ಞೆ ಅನುಭವಿಸುತ್ತಿದ್ದಾರೆ. ಕರ್ನಾಟಕದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿನ ಕನ್ನಡಿಗರೂ ಕಾರಂತರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಅಗಲಿದ ಕಾರಂತರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ‘ಭೂಮಿಕಾ’ ಬಳಗ ಆಯೋಜಿಸಿದೆ. ಸೆಪ್ಟೆಂಬರ್‌ 8ರ ಭಾನುವಾರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ಕಾರಂತರ ಅಭಿಮಾನಿಗಳು, ಶಿಷ್ಯರು ಕಾರ್ಯಕ್ರಮಕ್ಕೆ ಆಗಮಿಸಿ, ಹಿರಿಯ ರಂಗಕರ್ಮಿಯ ನೆನಪು-ಸಾಧನೆಗಳನ್ನು ಮೆಲುಕು ಹಾಕಬಹುದು.

ಕಾರಂತರೊಂದಿಗೆ ನಿಮ್ಮಲ್ಲಿ ಕೆಲವರು ಒಂದಿಷ್ಟು ಹೊತ್ತು, ದಿನಗಳನ್ನು ಕಳೆದಿರಬಹುದು. ಅವರೊಂದಿಗೆ ಕೆಲಸ ಮಾಡುವ ಸದವಕಾಶವನ್ನು ಪಡೆದುಕೊಂಡಿರಬಹುದು. ಕಾರಂತರೊಂದಿಗಿನ ನಿಮ್ಮ ವೈಯಕ್ತಿಕ ಅನುಭವಗಳನ್ನು ಮೆಲುಕು ಹಾಕಲು ಕಾರ್ಯಕ್ರಮದಲ್ಲಿ ಅವಕಾಶವಿದೆ. ಆದರೆ ಕಾರ್ಯಕ್ರಮ ಶುರುವಾಗುವ ಮುಂಚೆಯೇ ಈ ಬಗ್ಗೆ ಆಯೋಜಕರಿಗೆ ತಿಳಿಸಬೇಕು.

ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ವಿಜಯಾ ಕುಲಕರ್ಣಿ : 301- 8712234
ಪದ್ಮಜಾ ಪ್ರಭಾಕರ : 301- 9773296
ಇಂದಿರಾ ಪ್ರತಿವಾದಿ : 301- 6701665
ಜಯಾ ನಾಗೇಂದ್ರ : 301- 3529256
Directions:
From Beltway to I270N to Exit 6
From I270 S to Exit # 6 which is Rt 28
(W. Montgomery Ave) towards Rockville.
This becomes Viers Mill Rd (Rte 586)
Make left at Norbeck Rd (Rt 28)
After 5 traffic lights, make right on to Bauer Drive.
Community center is on your left. Tel: 3014684015 (center).

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X