ದುಬೈನ ಬೀಜಿ ಮೋಹನ್ದಾಸ್ಗೆ‘ಮಾಹೆ’ಯ ಪುರಸ್ಕಾರ
ದುಬೈ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಬಿ. ಜಿ. ಮೋಹನ್ ದಾಸ್ ಅವರಿಗೆ ಮಣಿಪಾಲದ ‘ಮಾಹೆ’ ಸಂಸ್ಥೆಯು ಇತ್ತೀಚೆಗೆ ಗುರುತರ ವಿದ್ಯಾರ್ಥಿ(Distinguished Alumni) ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಿತು.
ಬಿ. ಜಿ. ಮೋಹನ್ ದಾಸ್ ಅವರು ದುಬೈನಲ್ಲಿ ಎನ್ಎಂಸಿ ಗ್ರೂಪ್ನ ಕಂಟ್ರಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಂಡಿಯನ್ ಫಾರ್ಮಾಸ್ಯೂಟಿಕಲ್ ಫೋರಂನ ದುಬೈ ಘಟಕದ ಅಧ್ಯಕ್ಷರೂ ಹೌದು.
ಮಣಿಪಾಲ ಉನ್ನತ ಶಿಕ್ಷಣ ಅಧ್ಯಯನ ಸಂಸ್ಥೆ (ಮಾಹೆ)ಯ ಘಟಿಕೋತ್ಸವ ಸಮಾರಂಭದ ಮೋಹನ್ ದಾಸ್ ಅವರಿಗೆ ಮಾಹೆಯ ಕುಲಪತಿ ಡಾ. ಬಿ. ಎಂ. ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರ್ಕಿಡ್ ಹೆಲ್ತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ. ಆರ್. ಹೆಗ್ಡೆ ಹಾಗೂ ಮಾಹೆಯ ಅಧ್ಯಕ್ಷ ಡಾ. ರಾಮ್ದಾಸ್ ಪೈ ಬೀಜಿಯವರನ್ನು ಅಭಿನಂದಿಸಿದರು.
ಬೀಜಿ ಎಂದೇ ಗುರುತಿಸಿಕೊಂಡಿರುವ ಮೋಹನ್ ದಾಸ್ ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಮಣಿಪಾಲ್ ಜೈಸೀಸ್ನಲ್ಲಿ ಕಾರ್ಯದರ್ಶಿಯಾಗಿಯೂ ಕೆಲಸ ನಿರ್ವಹಿಸಿದ್ದರು.
(ಇನ್ಫೋ ವಾರ್ತೆ)