ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಗಣೇಶ ಹಬ್ಬಕ್ಕೆ ಗೂಗ್ಲಿ ಚಂದ್ರು ಹಾಗೂ ಸಿನಿಮಾ ಶ್ರೀಧರ್‌

By Staff
|
Google Oneindia Kannada News

Sridharಕಾವೇರಿ ಕನ್ನಡ ಸಂಘದ ಈ ಬಾರಿಯ ಗಣೇಶನ ಹಬ್ಬ ಕಾರ್ಯಕ್ರಮಕ್ಕೆ ಸಿನಿಮಾ ಗ್ಲಾಮರ್‌ ಹಾಗೂ ಕ್ರಿಕೆಟ್‌ ವರ್ಚಸ್ಸು ಸೇರಿಕೊಂಡಿದೆ. ಜೊತೆಗಿದ್ದೇ ಇದೆ ಸಾಂಸ್ಕೃತಿಕ ಪ್ರಭೆ !

ಸೆಪ್ಟಂಬರ್‌ 7ರ ಶನಿವಾರ ಸಂಜೆ 4.30 ರಿಂದ ರಾತ್ರಿ 9.30 ರವರೆಗೆ ಕಾರ್ಯಕ್ರಮ. ಈ ಸುಂದರ ಸಂಜೆಯ ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕವಿದೆ. ಸದಸ್ಯರಿಗಾದರೆ 5 ಡಾಲರ್‌, ಸದಸ್ಯರಲ್ಲದವರಿಗೆ 10 ಡಾಲರ್‌.

‘ಅಕ್ಕ ವಿಶ್ವ ಕನ್ನಡ ಸಮ್ಮೇಳನ’ದಲ್ಲಿ ಭಾಗವಹಿಸಲು ಬಂದಿದ್ದ ಕೆಲವು ಕಲಾವಿದರು ಗಣೇಶನ ಹಬ್ಬದ ಕಾರ್ಯಕ್ರಮದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನೀಡಲು ಕಾವೇರಿ ಕನ್ನಡ ಸಂಘ ವೇದಿಕೆ ಕಲ್ಪಿಸಿದೆ. ಕಾರ್ಯಕ್ರಮದ ಹೈಲೈಟ್ಸ್‌ ಇಂತಿವೆ :

  • ವಾಮನ ಪ್ರತಿಭೆ ನಿತಿನ್‌ ಜೋಶಿ ಗಿಟಾರ್‌ ವಾದನ.
  • ಕನ್ನಡ ಕವಿಗಳಿಗೆ ನುಡಿ ನಮನ- ಪ್ರಸಿದ್ಧ ಚಲನಚಿತ್ರ ನಟ, ‘ಸಂತ ಶಿಶುನಾಳ ಶರೀಫ’ ಹಾಗೂ ‘ಅಮೃತ ಘಳಿಗೆ’ ಖ್ಯಾತಿಯ ನಟ, ಭರತನಾಟ್ಯ ಕಲಾವಿದ ಶ್ರೀಧರ್‌ ಅವರಿಂದ ನೃತ್ಯ ರೂಪಕ.
  • ಶ್ರೀಮತಿ ಉಷಾಚಾರ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಸಿ.ಸೋಮಶೇಖರ್‌ ಅವರಿಂದ ವಚನಗಳು.
  • ಶತಮಾನದ ಶ್ರೇಷ್ಠ ಭಾರತೀಯ ಬೌಲರ್‌ ವಿಸ್ಡನ್‌ ಪ್ರಶಸ್ತಿ ವಿಜೇತ ಬಿ.ಎಸ್‌.ಚಂದ್ರಶೇಖರ್‌ ಅವರೊಂದಿಗೆ ಫೋಟೊ ತೆಗೆಸಿಕೊಳ್ಳುವ ಅವಕಾಶ.
  • ಕೊನೆಯದಾಗಿ, ರುಚಿಕರ ಹಾಗೂ ಗಣೇಶನ ಹಬ್ಬದ ವಿಶೇಷವಾದ ಕಡುಬಿನ ಊಟ.
ಕಾರ್ಯಕ್ರಮ ನಡೆಯುವ ಸ್ಥಳವನ್ನು ತಲುಪಲು ದಾರಿ :
(From 495 Inner loop) Get onto the Inner Loop of the Beltway, heading toward Silver Spring (I-495 East in Montgomery County, I-495 North in Northern Virginia). Get off at Exit 30 North (US Route 29, Colesville Road). The school is the first entrance on your right after merging onto Colesville Road.

From US Route 29 South: You will see the school on your left immediately after you cross Route 193.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ-
ರವಿ ಡಂಕಣಿಕೋಟೆ : 703-818-2560
ಸಂಜಯ್‌ ರಾವ್‌ : 703-442-3316
ಮೃತ್ಯುಂಜಯ್‌ ಮಹಾ-ಶೆಟ್ಟಿ : 301-515-4602
ಸೆಪ್ಟಂಬರ್‌ 7 ರಂದು ಮೊಬೈಲ್‌ ಫೋನ್‌ ಮೂಲಕ ನೆರವು : 703-869-1461

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X