ಕೆಸಿಎ ಹಾಗೂ ಕೊಂಕಣಿ ಸಂಘದಿಂದ ಪರಮೇಶ್ವರ ಹೆಗ್ಡೆ ಕಚೇರಿ
ಸನಾತನ ಹಿಂದೂ ದೇವಳದಲ್ಲಿ ಆಗಸ್ಟ್ 3ರ ಶನಿವಾರ ಸಂಜೆ ಹಿಂದುಸ್ತಾನಿ ಸಂಗೀತ ಕಚೇರಿಯನ್ನು ಕರ್ನಾಟಕ ಕೊಂಕಣಿ ಅಸೋಸಿಯೇಷನ್ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘ ಜಂಟಿಯಾಗಿ ಆಯೋಜಿಸಿವೆ.
ಪಂಡಿತ್ ಬಸವರಾಜ ರಾಜಗುರು ಅವರ ಶಿಷ್ಯರಾದ ಪರಮೇಶ್ವರ ಹೆಗ್ಡೆ ಹಿಂದುಸ್ತಾನೀ ಸಂಗೀತ ಕಚೇರಿಯನ್ನು ಪ್ರಸ್ತುತಪಡಿಸಲಿದ್ದಾರೆ. ಸಂಜೆ 5.30 ಕ್ಕೆ ಕಾರ್ಯಕ್ರಮ ಆರಂಭವಾಗುತ್ತದೆ. ಸ್ನೇಹಿತರ ದಂಡಿನೊಂದಿಗೆ ಸಂಗೀತಾಸಕ್ತರು ಕಚೇರಿ ಆಲಿಸಲು ಇದೊಂದು ಸದವಕಾಶ.
ಪರಮೇಶ್ವರ ಹೆಗ್ಡೆ ಅವರು ಜಗತ್ತಿನ ವಿವಿಧ ದೇಶಗಳಲ್ಲಿ ಸಂಗೀತ ಕಚೇರಿಯನ್ನು ಪ್ರಸ್ತುತ ಪಡಿಸಿದ್ದಾರೆ. ಕರ್ನಾಟಕದ ‘ಎ’ ಕ್ಲಾಸ್ ಆಕಾಶವಾಣಿ ಗಾಯಕರ ಸಾಲಿಗೆ ಸೇರಿದ ಪರಮೇಶ್ವರ್ ಅವರ ಹಾಡುಗಾರಿಕೆ ಕೇಳುವುದೇ ಒಂದು ಐಭೋಗ.
ಪರಮೇಶ್ವರ್ ಅವರದು ಕಿರಾನಾ ಘರಾನಾ ಶೈಲಿ. ಕಚೇರಿಯಲ್ಲಿ ಪಂಡಿತ್ ಎಚ್. ತಾರಾನಾಥ್ ರಾವ್ ಅವರ ಶಿಷ್ಯ ಓಂಕಾರ್ ಗುಲ್ವಾಡಿ ತಬಲಾ ನುಡಿಸುತ್ತಾರೆ. ಹಾರ್ಮೋನಿಯಂ ನುಡಿಸುವವರು ಪರಮೇಶ್ವರ್ ಹೆಗ್ಡೆ ಅವರ ಶಿಷ್ಯ ಅನಂತ ಭಾಗವತ್.
ಪರಮೇಶ್ವರ್ ಹೆಗ್ಡೆ ಅವರ ಬಗ್ಗೆ ಇನ್ನಷ್ಟು ತಿಳಿಯಲು ಕ್ಲಿಕ್ಕಿಸಿ- ಮುಖಪುಟ / ಸಾಹಿತ್ಯ ಸೊಗಡು