ದಕ್ಷಿಣ ಕ್ಯಾಲಿಫೋರ್ನಿಯಾ ಕನ್ನಡಿಗರಿಗೆ ಸಂಗೀತದ ಅಚ್ಚುಕಟ್ಟು ಅಡುಗೆ
*ಮ ವಾ ಸು
ಶಾಂತಿ, ಸಮರಸ ಮತ್ತು ಸಹನೆಯ ಗುರಿಯನ್ನು ಹೊತ್ತು ಏಪ್ರಿಲ್ 20ರಂದು ಒಂದು ಸುಂದರ ಸಂಗೀತ ಸಂಜೆ ನಡೆಯಿತು. ಅದೊಂದು ಅಚ್ಚುಕಟ್ಟಾದ ಕಾರ್ಯಕ್ರಮ. ಭಾವಗೀತೆ, ಜಾನಪದ ಗೀತೆಗಳ ಸಂಗೀತ ಫ್ರೂಟ್ ಸಲಾಡ್ನ ಹಾಗೆ. ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡಿಗರಿಗೆ ಸರಣಿ ಗೀತೆಗಳ ಔತಣ.
ನಲವತ್ತಕ್ಕೂ ಹೆಚ್ಚು ಮಕ್ಕಳಿಂದ ಕನ್ನಡ ಹಾಡಿನೊಂದಿಗೆ ಕಾರ್ಯಕ್ರಮ ಪ್ರಾರಂಭ. ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ ಎಂಬ ಹಾಡು ಒಗ್ಗಟ್ಟಿನ ಪ್ರತೀಕವಾಗಿ ತೇಲಿ ಬಂತು. ಈ ಹಾಡಿನ ಮೂಲಕ ಸಭಿಕರು ಸಂಗೀತ ಸಂಜೆಯ ಮೂಡ್ನೊಳಗೆ ತೂರಿಕೊಂಡರು.
ಮೂವತ್ತಕ್ಕೂ ಹೆಚ್ಚು ಗಾಯಕರು ತಿಂಗಳ ಅವಿರತ ಅಭ್ಯಾಸದೊಂದಿಗೆ ಹಾಡುಗಳನ್ನು ಪ್ರಸ್ತುತಪಡಿಸಿದರು. ಅಭ್ಯಾಸದ ಅನುಕೂಲಕ್ಕಾಗಿ ನಾಲ್ಕು ತಂಡಗಳನ್ನಾಗಿ ಮಾಡಿಕೊಂಡು ಹಾಡಿದ ಗಾಯಕರ ಉತ್ಸಾಹವೇ ಕಾರ್ಯಕ್ರಮಕ್ಕೆ ಕಳೆಗಟ್ಟಿತ್ತು. ಸೀನು ಸುಬ್ಬುವಿನ MC ಶ್ರೋತೃಗಳನ್ನು ನಗೆಯ ಹೊನಲಲ್ಲಿ ತೂರಾಡಿಸಿತ್ತು . ಕಾರ್ಯಕ್ರಮದ ಅವಧಿ ತುಸು ಕಡಿಮೆಯಾದರೆ ಚೆನ್ನಾಗಿರುತ್ತದೆ... ಹಾಡುಗಳ ಆಯ್ಕೆ ಮಾಡುವಾಗ ಸಮೂಹಗಾನಗಳತ್ತ ಗಮನ ಕೊಡಬೇಕು ಎನ್ನುವ ಸಲಹೆಗಳನ್ನೂ ಪ್ರೇಕ್ಷಕರು ಕಾರ್ಯಕ್ರಮದಲ್ಲಿ ಮುಂದಿಟ್ಟರು.
ನಂತರ ಕೆಸಿಎ ಕಾರ್ಯಕಾರಿಣಿ ಸಭೆ ನಡೆಯಿತು. ಹಳೆಯ ಸಮಿತಿಯನ್ನು ವಿಸರ್ಜಿಸಿ, ಹೊಸ ಸಮಿತಿಗೆ ಸ್ವಾಗತ ಕೋರುವ ಸಂಭ್ರಮ. ನಿರಂತರ ಕನ್ನಡ ಸೇವೆ ಮಾಡುತ್ತಾ ಬಂದು ಕಿರಿಯರಿಗೆ ಹಿತನುಡಿಯನ್ನು ಹೇಳುತ್ತಾ ಬಂದಿರುವ ಪಿತಾಮಹರೆಂದೇ ಕರೆಸಿಕೊಳ್ಳುತ್ತಿರುವ ಬಿ.ಎನ್. ನಾಗರಾಜ್ ಮತ್ತು ಪಿ.ಬಿ. ನರಸಿಂಹನ್ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಅನಿರೀಕ್ಷಿತವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂಗೀತ ಕಲಾನಿಧಿ ಆರ್. ಕೆ. ಶ್ರೀಕಂಠನ್ ಸಮಾರಂಭಕ್ಕೆ ಇನ್ನಷ್ಟು ಮೆರುಗು ತಂದರು. ಮುಂದಿನ ವರ್ಷ ಕನ್ನಡ ಕಾರ್ಯಕ್ರಮಗಳ ರಚನಾತ್ಮಕ ಚಟುವಟಿಕೆಯ ಸಾರಥ್ಯ ವಹಿಸಲಿರುವ ಪದಾಧಿಕಾರಿಗಳು -
ಬಿ.ಎನ್.
ನಾಗರಾಜ್
(ಅಧ್ಯಕ್ಷರು)
ವಿಜಯ
ಕೊಟ್ರಪ್ಪ
(ಉಪಾಧ್ಯಕ್ಷರು)
ನಾಗನ
ಗೌಡ
(ಕಾರ್ಯದರ್ಶಿ)
ಲಕ್ಷ್ಮೀ
ಕೃಷ್ಣ
ಮೂರ್ತಿ
(ಖಜಾಂಚಿ)
ಸಮಿತಿಯ
ಸದಸ್ಯರು
ಜಯಂತಿ
ರವಿಕುಮಾರ್
ಸೋಮಶೇಖರ್
ಹೊಸ್ಕೆರೆ
ಹರೀಶ್
ಕುಮಾರ್
ಜಗನ್ನಾಥ್
ಶಂಕಂ
ರಮೇಶ್
ಬಸವಾಪಟ್ಟಣ
ಮತ್ತೆ
ಗುಡುಗುವ
ಯಮ
ಸಿಲಿಕಾನ್
ವ್ಯಾಲಿಯಲ್ಲಿ
ಯಮ
ಮತ್ತೆ
ಗುಡುಗಲಿದ್ದಾನೆ.
ಮೇ
4
ರ
ಶನಿವಾರ
ಸಂಜೆ
5.30
ಕ್ಕೆ
ಉತ್ತರ
ಕ್ಯಾಲಿಫೋರ್ನಿಯಾ
ಕನ್ನಡ
ಕೂಟದ
ಆಶ್ರಯದಲ್ಲಿ,
ಸನ್ನಿವೇಲ್
ದೇವಸ್ಥಾನದ
ಆಡಿಟೋರಿಯಂನಲ್ಲಿ
ಯಮ-
ನಾಟಕ
ಪ್ರದರ್ಶನಗೊಳ್ಳಲಿದೆ.
ದಕ್ಷಿಣ
ಕ್ಯಾಲಿಫೋರ್ನಿಯಾದ
ಪ್ರೇಕ್ಷಕರನ್ನು
ಹಾಸ್ಯದ
ಹೊನಲಿನಲ್ಲಿ
ಮುಳುಗಿಸಿದ
ಈ
ನಾಟಕ,
ಅಮೇರಿಕಾದಲ್ಲಿ
ತನ್ನ
ಆರನೇ
ಪ್ರದರ್ಶನವನ್ನು
ಕಾಣಲಿದೆ.
ವಾರ್ತಾ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು