ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಕವಿ ಸಮ್ಮೇಳನಕ್ಕೆಬೆಂಗಳೂರಿನ ಸ್ಮಿತಾ ಭಟ್‌

By Staff
|
Google Oneindia Kannada News

ಬೆಂಗಳೂರು : ಅಮೆರಿಕಾದ ರಾಜಧಾನಿ ವಾಷಿಂಗ್ಟನ್‌ನಲ್ಲಿ ಆಗಸ್ಟ್‌ 17ರ ಶುಕ್ರವಾರ ನಡೆಯಲಿರುವ ಅಂತಾರಾಷ್ಟ್ರೀಯ ಕವಿ ಸಮ್ಮೇಳನಕ್ಕೆ ಬೆಂಗಳೂರಿನ ಸ್ಮಿತಾ ಭಟ್‌ ಆಯ್ಕೆಯಾಗಿದ್ದಾರೆ.

ಇಂಟರ್‌ನ್ಯಾಷನಲ್‌ ಸೊಸೈಟಿ ಆಫ್‌ ಪೊಯೆಟ್ಸ್‌ ಸಂಸ್ಥೆ ಅಂತಾರಾಷ್ಟ್ರೀಯ ಕವಿ ಸಮ್ಮೇಳನದ ಅಂಗವಾಗಿ 2001ನೇ ಸಾಲಿನ ಹವ್ಯಾಸಿ ಕವಿಗಳ ವಿಶ್ವ ಛಾಂಪಿಯನ್‌ ಸ್ಪರ್ಧೆ ಹಾಗೂ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ‘ಇಂಟರ್‌ ನ್ಯಾಷನಲ್‌ ಪೊಯೆಟ್‌ ಆಫ್‌ ಮೆರಿಟ್‌’ ಪ್ರಶಸ್ತಿ ನೀಡಲಿದೆ.

ಈ ಸ್ಪರ್ಧೆಯಲ್ಲಿ ಹಾಗೂ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಕನ್ನಡತಿ ಸ್ಮಿತಾ ಭಟ್‌ ಆಯ್ಕೆಯಾಗಿದ್ದಾರೆ. ಬೆಂಗಳೂರು ವಿಜಯಾ ಕಾಲೇಜಿನ ವಿದ್ಯಾರ್ಥಿನಿಯಾದ ಇವರು, ಕರ್ನಾಟಕ ಸಚಿವಾಲಯದ ಸೆಕ್ಷನ್‌ ಆಫಿಸರ್‌ ಎಂ.ಎನ್‌. ಅನಂತಮೂರ್ತಿ ಅವರ ಪುತ್ರಿ.

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X