ಎಂದರೋ ಮಹಾನುಬಾವುಲು..
ಮೇರಿಲ್ಯಾಂಡ್: ‘ನಾದ ತರಂಗಿಣಿ’ ಮತ್ತು ‘ಶಿವ ವಿಷ್ಣು ದೇವಸ್ಥಾನ’ದ ಸಂಯುಕ್ತಾಶ್ರಯದಲ್ಲಿ ಎರಡುದಿನ ಶ್ರೀ ಪುರಂದರ ದಾಸ ಮತ್ತು ಶ್ರೀ ತ್ಯಾಗರಾಜ ಸಂಗೀತ ಉತ್ಸವವನ್ನು ಏರ್ಪಡಿಸಲಾಗಿದೆ.
ಏಪ್ರಿಲ್ 28 ಮತ್ತು 29ರಂದು ಎರಡು ದಿನಗಳ ಈ ಸಂಗೀತೋತ್ಸವ ಶ್ರೀ ಶಿವ ವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ (6905 Cipriano Road, Lanham , MaryLand 20706, USA) ನಡೆಯಲಿದೆ. ಪ್ರವೇಶ ಉಚಿತ.
ಹೆಚ್ಚಿನ ಮಾಹಿತಿಗಾಗಿ ಎ.ಆರ್. ಚಾರ್ ಅವರಿಗೆ ಫೋನಾಯಿಸಬಹುದು. ದೂರವಾಣಿ ಸಂಖ್ಯೆ : (301) 924--2651.
ಕಾರ್ಯಕ್ರಮ ಪಟ್ಟಿ ಹೀಗಿದೆ:
ಏಪ್ರಿಲ್ 28
8.00 - ಶ್ರೀ ರಾಮ ಪೂಜೆ,
8.30-ಯಿಂದ 12.30ರವರೆಗೆ - ಮಕ್ಕಳಿಂದ ಗೀತ ಗಾಯನ, ಪುರಂದರ ದಾಸರ ಪದ ಮತ್ತು ತ್ಯಾಗರಾಜರ ಪಂಚರತ್ನ ಕೃತಿಗಳ ಸಮೂಹ ಗಾಯನ.
12.30- ವೈಯಕ್ತಿಕ ಮತ್ತು ವೃಂದಗಾನ.
4.30- ನಳಿನಿ ಉಮಾಶಂಕರ್ ಮತ್ತು ತಂಡದವರಿಂದ ಹಾಡುಗಾರಿಕೆ
5.00- ‘ಲಯ ಲಹರಿ’
ರಾಧಿಕಾ ಮಣಿ ಮತ್ತು ಕೆ.ಎಸ್. ಮಣಿ ಅವರ ಪಿಟೀಲು, ಆನೂರು ದತ್ತಾತ್ರೇಯ ಶರ್ಮ ಅವರ ಮೃದಂಗ, ಎ.ವಿ. ಕಾಶಿನಾಥ್ರ ಥವಿಲ್, ಸುಧೀಂದ್ರ ರಾವ್ ಅವರ ಕಂಜಿರ, ರುದ್ರಪಟ್ನಂ ಸತ್ಯಕುಮಾರ್ರ ಘಟಂ ಮತ್ತು ಗೌತಮ್ ಶ್ರೀರಾಂರ ಪಾಶ್ಚಾತ್ಯ ಡ್ರಮ್ಸ್.
6.30 - ಜಯಮಂಗಲ ಕೃಷ್ಣ ಮೂರ್ತಿ ಅವರ ಗಾಯನ. ಪಕ್ಕವಾದ್ಯ: ರಾಧಿಕಾ ಮಣಿ ಪಿಟೀಲು, ಪಿ.ಕೆ. ಸ್ವಾಮಿನಾಥನ್ ಮೃದಂಗ, ಸುಧೀಂದ್ರ ರಾವ್ ಕಂಜಿರ.
8.00 - ಭೋಜನ
ಏಪ್ರಿಲ್ 29
8.30- ವೈಯಕ್ತಿಯ ಮತ್ತು ವೃಂದಗಾನ.
1.30- ‘ಸಂಗೀತ ತ್ರಿಮೂರ್ತಿ’
ನಿರ್ಮಲಾ ರಾಮಸ್ವಾಮಿ ಮತ್ತು ತಂಡ, ಉಷಾ ಚಾರ್ ಮತ್ತು ಬಳಗ , ಮರಗಥಂ ರಾಮಸ್ವಾಮಿ ಮತ್ತು ಬಳಗ, ಡಿ.ಕೆ. ನಾಗರಾಜನ್ ಮತ್ತವರ ಬಳಗ ಹಾಗೂ ಜಯಮಂಗಲ ಅವರ ತಂಡದವರು ತ್ಯಾಗರಾಜ, ದೇಶಿಕಾಚಾರ್ಮತ್ತು ಶ್ಯಾಮಾ ಶಾಸ್ತ್ರೀಗಳ ಕೀರ್ತನೆಗಳನ್ನು ಸಂಗೀತ ಪಿತಾಮಹ ಪುರಂದರ ದಾಸರ ಪದಗಳೊಂದಿಗೆ ಹೋಲಿಸಿ ಹಾಡುವ ವಿಶೇಷ ಕಾರ್ಯಕ್ರಮ.
4.00- ರಾಧಿಕಾ ಚಾರ್ ಮತ್ತು ಬಳಗದವರಿಂದ ಪಿಟೀಲು (ಸೋಲೋ)
4.30- ಎಂ. ಎಸ್. ಶೀಲಾ - ಹಾಡುಗಾರಿಕೆ. ಪಕ್ಕವಾದ್ಯ : ಸಂಧ್ಯಾ ಶ್ರೀನಾಥ್ ಪಿಟೀಲು, ಆನೂರು ದತ್ತಾತ್ರೇಯ ಶರ್ಮಾ - ಮೃದಂಗ, ಎ.ವಿ. ಕಾಶೀನಾಥ್ - ಕಂಜಿರ, ರುದ್ರಪಟ್ನಂ ಸತ್ಯಕುಮಾರ್ - ಘಟಂ.
8.00- ಭೋಜನ
(ಇನ್ಫೋ ವಾರ್ತೆ)