ಮೇರಿಲ್ಯಾಂಡ್ನಲ್ಲಿ ಸಾಹಿತ್ಯ ಗೋಷ್ಠಿ
ಮೇರಿ-ಲ್ಯಾಂ-ಡ್ : ಭೂಮಿಕಾ ರಂಗ ಕಲಾ ಸಂಸ್ಥೆಯವರು ಎರಡು ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ ಕಳುಹಿಸಿಕೊಟ್ಟಿದ್ದಾರೆ. ಪ್ರತಿ ತಿಂಗಳ ಎರಡನೇ ಭಾನುವಾರದಂದು ಸಾಹಿತ್ಯಿಕ ಸಂವಾದಗಳನ್ನು ಭೂಮಿಕಾ ಕಲಾರಂಗದವರು ಆಯೋಜಿಸುತ್ತಾರೆ.
ಈ ಮಾರ್ಚ್ 11ರ ಭಾನುವಾರದ ಕಾರ್ಯಕ್ರಮದಲ್ಲಿ ಈಶ್ವರ ಬಿ. ರಾಜು ಅವರಿಂದ ಸ್ವರಚಿತ ಕವನ ವಾಚನ ಮತ್ತು ಮುಂದಿನ ದಿನಗಳಲ್ಲಿ ಕನ್ನಡದ ಸ್ವರೂಪ ಎನ್ನು-ವ ವಿಷ-ಯ-ದ ಬಗ್ಗೆ ಚರ್ಚಾ ಕಾರ್ಯಕ್ರಮವಿದೆ. ಭಾನುವಾರದ ಮಧ್ಯಾಹ್ನ ಎರಡು ಗಂಟೆಗೆ ಕಾರ್ಯಕ್ರಮವಿದೆ. ಸ್ಥಳ : ಬಾವರ್ ಕಮ್ಯೂನಿಟಿ ಸೆಂಟರ್, 14625, ಬ್ರಾವರ್ ಡ್ರೆೃವ್, ರಾಕ್ ವಿಲ್, ಮೇರಿಲ್ಯಾಂಡ್- 208553. ನಿಮ್ಮ ತವರಿನ ಭಾಷೆ, ನಿಮ್ಮೂರಿನ ಗೆಳೆಯರ ಮಿಲನ ... ವಿಚಾರ ಮಾಡಲು ಮಿದುಳಿಗೊಂದಿಷ್ಟು ಮೇವು ...ಈ ಭಾನುವಾರವನ್ನು ಸುಂದರವಾಗಿ ಕಳೆಯಲು ಇಷ್ಟು ಸಾಲದೇ ?
ಮತ್ತೆ ಮಾರ್ಚ್ 24 ರ ಶನಿವಾರ ಇನ್ನೊಂದು ಕಾರ್ಯಕ್ರಮವಿದೆ. ಈಗಲೇ ನಿಮ್ಮ ಡೈರಿಯಲ್ಲಿ, ಪುಟ್ಟ ಕ್ಯಾಲೆಂಡರ್ನಲ್ಲಿ ಗುರುತು ಹಾಕಿಟ್ಟುಕೊಳ್ಳಿ. ಗುಜರಾತ್ ಭೂಕಂಪ ಸಂತ್ರಸ್ತರ ಪರಿಹಾರ ನಿಧಿಗಾಗಿ ಈ ಕಾರ್ಯಕ್ರಮ. ಶಾಮ ಬಿ.ಪೈ ಮತ್ತು ಮುರಳೀಧರ್ ಬಿ. ಪೈ ಅವರಿಂದ ಲಘು ಸಂಗೀತ ಕಚೇರಿ. ಸಂಜೆ ಆರರಿಂದ ಒಂಭತ್ತರವರೆಗೆ ಕನ್ನಡ ಹಾಡುಗಳ ರಸಧಾರೆ. ಅಂದ ಹಾಗೆ ಕಾರ್ಯಕ್ರಮ ಹೇಗಿತ್ತು ಅಂತ ನಮಗೆ ಎರಡು ಸಾಲು ಬರೆಯುತ್ತೀರಿ ತಾನೇ ?
(ಇನ್ಫೋ ವಾರ್ತೆ)